ವೃದ್ದಾಶ್ರಮ ಕಾರ್ಯಕ್ರಮದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರ ಮೂರ್ತಿ ಕಳವಳ
ಚನ್ನಪಟ್ಟಣ: ಪ್ರತಿಯೊಬ್ಬರು ಪ್ರಜ್ಞಾವಂತರಾಗುತ್ತಿದ್ದರೂ, ಮತ್ತೊಂದೆಡೆ ಮಾನವೀಯ ಸಂಬಂಧಗಳ ಮೌಲ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಎಂದು ಕರ್ನಾಟಕ ರಾಜ್ಯ ಟಿ.ಜಿ.ಟಿ. ಶಿಕ್ಷ ಕರ ಸಂಘದ ರಾಜ್ಯಾಧ್ಯಕ್ಷ ಗಂಗಾಧರಮೂರ್ತಿ ಹೇಳಿದರು.
ತಾಲೂಕಿನ ದೇವರಹಳ್ಳಿ ಗ್ರಾಮದ ಶಿರಡಿ ಸಾಯಿಬಾಬಾ ವೃದ್ದಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಎಷ್ಟೇ ಪ್ರಗತಿ ಹೊಂದುತ್ತಿದ್ದರೂ ವೃದ್ದಾಶ್ರಮ, ಅನಾಥಾಶ್ರಮಗಳು ದ್ವಿಗುಣಗೊಳ್ಳುತ್ತಿರುವುದು ಅನಾರೋಗ್ಯಕರ ಬೆಳವಣಿಗೆಯಾಗಿದೆ. ವಯಸ್ಸಾದ ತಂದೆ ತಾಯಂದಿರನ್ನು ದೇವರಂತೆ ಪೂಜಿಸಿ, ಗೌರವ ಕೊಡಬೇಕಾದ ನಾವು ಅವರನ್ನು ವೃದ್ದಾಶ್ರಮಗಳಿಗೆ ಸೇರಿಸಿ ಹೊಣೆಯಿಂದ ನುಣುಚಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ವಿಷಾದ ವ್ಯಕ್ತಪಡಿಸಿದರು.
ನುಡಿದಂತೆ ನಡೆದುಕೊಳ್ಳಬೇಕು:
ಚಂದ್ರು ಡಯಗ್ನೋಸ್ಟಿಕ್ ಸೆಂಟರ್ ಹಾಗೂ ಜೀವಾಮೃತ ರಕ್ತನಿಧಿ ಕೇಂದ್ರದ ಸಂಸ್ಥಾಪಕ ವಿ.ಸಿ.ಚಂದ್ರೇಗೌಡ ಮಾತನಾಡಿ, ವೇದಿಕೆಗಳಲ್ಲಿ ಭರವಸೆಗಳನ್ನು ನೀಡಿದಂತೆ ನಡೆದುಕೊಳ್ಳಬೇಕು. ಕೇವಲ ಭರವಸೆಗಳನ್ನು ನೀಡಿದರೆ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಚಿಂತನೆ ಮಾಡಿದಾಗ ವೃದ್ದಾಶ್ರಮದ ರುವಾರಿ ಹರೀಶ್ಹೆಗ್ಗಡೆ ಸೇವೆ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.
ಜೀವನ ಸವೆಸಿದವರನ್ನು ಮರೆಯುವುದು ಸಲ್ಲ:
ಮಕ್ಕಳ ಶ್ರೇಯೋಭಿವೃದ್ದಿಗಾಗಿ ತಮ್ಮ ಜೀವನವನ್ನೆಲ್ಲಾ ಧಾರೆಯೆರೆದ ತಂದೆ ತಾಯಿಗಳನ್ನು ಅವರ ಮುಪ್ಪಿನ ಕಾಲದಲ್ಲಿ ದೂರ ಮಾಡುವುದು ಸರಿಯಲ್ಲ. ಇಳಿವಯಸ್ಸಿನಲ್ಲಿ ಶಕ್ತಿ ಕಳೆದುಕೊಂಡಿರುವ ಪೋಷಕರಿಗೆ ಮಕ್ಕಳು ಊರುಗೋಲಾಗಬೇಕು. ವೃದ್ದರಿಗೆ ಆಸರೆಯಾಗುವ ಯುವ ಸಮುದಾಯ ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ. ಹಿರಿಯ ಜೀವಗಳಿಗೆ ಆತ್ಮಸ್ಥೈರ್ಯ ತುಂಬಿ ಅವರನ್ನು ಜೋಪಾನ ಮಾಡುವುದು ಸಾಮಾನ್ಯದ ಕೆಲಸವಲ್ಲ. ವೃದ್ದರ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಹಾಯ, ಸಹಕಾರಕ್ಕೆ ನಮ್ಮ ಸೆಂಟರ್ ಸಿದ್ದವಾಗಿದೆ. ವೃದ್ದರನ್ನು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವುದರ ಜತಗೆ ವೈದ್ಯರ ಸಲಹೆ ಅನುಗುಣವಾಗಿ ಔಷೋಧೋಪಚಾರ ಪಡೆದುಕೊಳ್ಳುಬೇಕು ಎಂದು ತಿಳಿಸಿದರು.
ಯೋಗ ಮಾಡಿ:
ಬಿಇಓ ಕಚೇರಿಯ ಅಧೀಕ್ಷ ಕ ಪ್ರಶಾಂತ್ ಶರ್ಮ ಮಾತನಾಡಿ, ರೋಗದ ವಿರುದ್ದ ಹೋರಾಡುವ ಸೈನಿಕನೆಂದರೆ ಅದು ಯೋಗ, ಯೋಗವನ್ನು ಬಲ್ಲವನಿಗೆ ರೋಗ ಎಂಬುದು ದೂರವಿರುತ್ತದೆ, ಪ್ರತಿಯೊಬ್ಬರು ದಿನದ ಸಮಯದಲ್ಲಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಯೋಗದಲ್ಲಿ ತಲ್ಲೀನರಾಗಬೇಕು. ಆಶ್ರಮದಲ್ಲಿರುವ ತಾವು ಅನಾಥರೆಂಬ ಕೊರಗು ದೂರವಾಗಬೇಕು, ನಾವೆಲ್ಲಾ ನಿಮ್ಮ ಮಕ್ಕಳು, ಮೊಮ್ಮಕ್ಕಳು ಎಂದು ತಿಳಿದುಕೊಳ್ಳಬೇಕು, ನಿಮಗೆ ಯಾವ ರೀತಿಯಲ್ಲಿ ಸಹಕಾರ ನಿಡಲು ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕದಂಬ ಸೈನ್ಯದ ಜಿಲ್ಲಾಧ್ಯಕ್ಷ ಶಿವಕುಮಾರ್, ಸಮಾಜ ಸೇವಕ ದೇವರಾಜು, ಸಾರ್ವಜನಿಕ ಆಸ್ಪತ್ರೆಯ ಅಂಕೂಗೌಡ, ಯೋಗಿತಾಬೇಕರಿ ಶಿವರಾಮ್, ಬೊಂಬೆನಾಡು ಕಟ್ಟಡ ಕಾರ್ಮಿಕ ಹಾಗೂ ಇತರೆ ಕಾರ್ಮಿಕರ ಸಂಘದ ಅಧ್ಯಕ್ಷ ಪೇಟೆಚೇರಿ ಕರ್ಣ, ಪ್ರಧಾನ ಕಾರ್ಯದರ್ಶಿ ನಾಗೇಶ್, ಉಪಾಧ್ಯಕ್ಷ ನಾಗಣ್ಣ, ಆಶ್ರಮದ ರುವಾರಿ ಹರೀಶ್ಹೆಗ್ಗಡೆ, ಶಿಕ್ಷ ಕರಾದ ಹರೀಶ್, ವಿನಾಯಕ, ಮನು ಹಾಗೂ ಇನ್ನೂ ಹಲವಾರು ಮಂದಿ ಹಾಜರಿದ್ದರು.
ಚನ್ನಪಟ್ಟಣ: ಪ್ರತಿಯೊಬ್ಬರು ಪ್ರಜ್ಞಾವಂತರಾಗುತ್ತಿದ್ದರೂ, ಮತ್ತೊಂದೆಡೆ ಮಾನವೀಯ ಸಂಬಂಧಗಳ ಮೌಲ್ಯ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಎಂದು ಕರ್ನಾಟಕ ರಾಜ್ಯ ಟಿ.ಜಿ.ಟಿ. ಶಿಕ್ಷ ಕರ ಸಂಘದ ರಾಜ್ಯಾಧ್ಯಕ್ಷ ಗಂಗಾಧರಮೂರ್ತಿ ಹೇಳಿದರು.
ತಾಲೂಕಿನ ದೇವರಹಳ್ಳಿ ಗ್ರಾಮದ ಶಿರಡಿ ಸಾಯಿಬಾಬಾ ವೃದ್ದಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಎಷ್ಟೇ ಪ್ರಗತಿ ಹೊಂದುತ್ತಿದ್ದರೂ ವೃದ್ದಾಶ್ರಮ, ಅನಾಥಾಶ್ರಮಗಳು ದ್ವಿಗುಣಗೊಳ್ಳುತ್ತಿರುವುದು ಅನಾರೋಗ್ಯಕರ ಬೆಳವಣಿಗೆಯಾಗಿದೆ. ವಯಸ್ಸಾದ ತಂದೆ ತಾಯಂದಿರನ್ನು ದೇವರಂತೆ ಪೂಜಿಸಿ, ಗೌರವ ಕೊಡಬೇಕಾದ ನಾವು ಅವರನ್ನು ವೃದ್ದಾಶ್ರಮಗಳಿಗೆ ಸೇರಿಸಿ ಹೊಣೆಯಿಂದ ನುಣುಚಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ವಿಷಾದ ವ್ಯಕ್ತಪಡಿಸಿದರು.
ನುಡಿದಂತೆ ನಡೆದುಕೊಳ್ಳಬೇಕು:
ಚಂದ್ರು ಡಯಗ್ನೋಸ್ಟಿಕ್ ಸೆಂಟರ್ ಹಾಗೂ ಜೀವಾಮೃತ ರಕ್ತನಿಧಿ ಕೇಂದ್ರದ ಸಂಸ್ಥಾಪಕ ವಿ.ಸಿ.ಚಂದ್ರೇಗೌಡ ಮಾತನಾಡಿ, ವೇದಿಕೆಗಳಲ್ಲಿ ಭರವಸೆಗಳನ್ನು ನೀಡಿದಂತೆ ನಡೆದುಕೊಳ್ಳಬೇಕು. ಕೇವಲ ಭರವಸೆಗಳನ್ನು ನೀಡಿದರೆ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಚಿಂತನೆ ಮಾಡಿದಾಗ ವೃದ್ದಾಶ್ರಮದ ರುವಾರಿ ಹರೀಶ್ಹೆಗ್ಗಡೆ ಸೇವೆ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು.
ಜೀವನ ಸವೆಸಿದವರನ್ನು ಮರೆಯುವುದು ಸಲ್ಲ:
ಮಕ್ಕಳ ಶ್ರೇಯೋಭಿವೃದ್ದಿಗಾಗಿ ತಮ್ಮ ಜೀವನವನ್ನೆಲ್ಲಾ ಧಾರೆಯೆರೆದ ತಂದೆ ತಾಯಿಗಳನ್ನು ಅವರ ಮುಪ್ಪಿನ ಕಾಲದಲ್ಲಿ ದೂರ ಮಾಡುವುದು ಸರಿಯಲ್ಲ. ಇಳಿವಯಸ್ಸಿನಲ್ಲಿ ಶಕ್ತಿ ಕಳೆದುಕೊಂಡಿರುವ ಪೋಷಕರಿಗೆ ಮಕ್ಕಳು ಊರುಗೋಲಾಗಬೇಕು. ವೃದ್ದರಿಗೆ ಆಸರೆಯಾಗುವ ಯುವ ಸಮುದಾಯ ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ. ಹಿರಿಯ ಜೀವಗಳಿಗೆ ಆತ್ಮಸ್ಥೈರ್ಯ ತುಂಬಿ ಅವರನ್ನು ಜೋಪಾನ ಮಾಡುವುದು ಸಾಮಾನ್ಯದ ಕೆಲಸವಲ್ಲ. ವೃದ್ದರ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಹಾಯ, ಸಹಕಾರಕ್ಕೆ ನಮ್ಮ ಸೆಂಟರ್ ಸಿದ್ದವಾಗಿದೆ. ವೃದ್ದರನ್ನು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವುದರ ಜತಗೆ ವೈದ್ಯರ ಸಲಹೆ ಅನುಗುಣವಾಗಿ ಔಷೋಧೋಪಚಾರ ಪಡೆದುಕೊಳ್ಳುಬೇಕು ಎಂದು ತಿಳಿಸಿದರು.
ಯೋಗ ಮಾಡಿ:
ಬಿಇಓ ಕಚೇರಿಯ ಅಧೀಕ್ಷ ಕ ಪ್ರಶಾಂತ್ ಶರ್ಮ ಮಾತನಾಡಿ, ರೋಗದ ವಿರುದ್ದ ಹೋರಾಡುವ ಸೈನಿಕನೆಂದರೆ ಅದು ಯೋಗ, ಯೋಗವನ್ನು ಬಲ್ಲವನಿಗೆ ರೋಗ ಎಂಬುದು ದೂರವಿರುತ್ತದೆ, ಪ್ರತಿಯೊಬ್ಬರು ದಿನದ ಸಮಯದಲ್ಲಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಯೋಗದಲ್ಲಿ ತಲ್ಲೀನರಾಗಬೇಕು. ಆಶ್ರಮದಲ್ಲಿರುವ ತಾವು ಅನಾಥರೆಂಬ ಕೊರಗು ದೂರವಾಗಬೇಕು, ನಾವೆಲ್ಲಾ ನಿಮ್ಮ ಮಕ್ಕಳು, ಮೊಮ್ಮಕ್ಕಳು ಎಂದು ತಿಳಿದುಕೊಳ್ಳಬೇಕು, ನಿಮಗೆ ಯಾವ ರೀತಿಯಲ್ಲಿ ಸಹಕಾರ ನಿಡಲು ನಾವು ಸಿದ್ದರಾಗಿದ್ದೇವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕದಂಬ ಸೈನ್ಯದ ಜಿಲ್ಲಾಧ್ಯಕ್ಷ ಶಿವಕುಮಾರ್, ಸಮಾಜ ಸೇವಕ ದೇವರಾಜು, ಸಾರ್ವಜನಿಕ ಆಸ್ಪತ್ರೆಯ ಅಂಕೂಗೌಡ, ಯೋಗಿತಾಬೇಕರಿ ಶಿವರಾಮ್, ಬೊಂಬೆನಾಡು ಕಟ್ಟಡ ಕಾರ್ಮಿಕ ಹಾಗೂ ಇತರೆ ಕಾರ್ಮಿಕರ ಸಂಘದ ಅಧ್ಯಕ್ಷ ಪೇಟೆಚೇರಿ ಕರ್ಣ, ಪ್ರಧಾನ ಕಾರ್ಯದರ್ಶಿ ನಾಗೇಶ್, ಉಪಾಧ್ಯಕ್ಷ ನಾಗಣ್ಣ, ಆಶ್ರಮದ ರುವಾರಿ ಹರೀಶ್ಹೆಗ್ಗಡೆ, ಶಿಕ್ಷ ಕರಾದ ಹರೀಶ್, ವಿನಾಯಕ, ಮನು ಹಾಗೂ ಇನ್ನೂ ಹಲವಾರು ಮಂದಿ ಹಾಜರಿದ್ದರು.