ಆ್ಯಪ್ನಗರ

ಹದಗೆಟ್ಟ ರಸ್ತೆ ಹೈರಾಣದ ಹಳ್ಳಿಜನರು..!

ಹೆಚ್ಚಾಗಿ ಹೈನುಗಾರಿಕೆ ನೆಚ್ಚಿಕೊಂಡಿರುವ ಡಿಸಿಎಂ ಅಶ್ವತ್‌್ಥ ನಾರಾಯಣ ತವರೂರು ಚಿಕ್ಕಕಲ್ಯಾ ಗ್ರಾಮದ ರಸ್ತೆ ಮಳೆಯಾದರೆ ಸಾಕು ಕೆಸರುರಾಡಿಯಾಗಿ ಬಿಡುತ್ತದೆ.

Vijaya Karnataka 19 Oct 2019, 3:51 pm
ಮಾಗಡಿ ಗ್ರಾಮಾಂತರ: ಹೆಚ್ಚಾಗಿ ಹೈನುಗಾರಿಕೆ ನೆಚ್ಚಿಕೊಂಡಿರುವ ಡಿಸಿಎಂ ಅಶ್ವತ್‌್ಥ ನಾರಾಯಣ ತವರೂರು ಚಿಕ್ಕಕಲ್ಯಾ ಗ್ರಾಮದ ರಸ್ತೆ ಮಳೆಯಾದರೆ ಸಾಕು ಕೆಸರುರಾಡಿಯಾಗಿ ಬಿಡುತ್ತದೆ.
Vijaya Karnataka Web hundreds of villagers in deteriorating road
ಹದಗೆಟ್ಟ ರಸ್ತೆ ಹೈರಾಣದ ಹಳ್ಳಿಜನರು..!

ಮಾಗಡಿಯ ತಿಪ್ಪಸಂದ್ರ ಹೋಬಳಿ ಸಮೀಪದ ಚಿಕ್ಕಕಲ್ಯಾ ಗ್ರಾಮದ ಸುಮಾರು 3 ಕಿಲೋಮೀಟರ್‌ ರಸ್ತೆ ಸ್ಥಿತಿ ಚಿಂತಾ ಜನಕವಾಗಿದ್ದು ಇಲ್ಲಿನ ಜನರಿಗೆ ರಸ್ತೆ ಸವಾಲಿಗೇ ಮಾರ್ಪಟ್ಟಿದೆ.
ಹೈನುಗಾರರಿಗೆ ಕಿರಿಕಿರಿ: ಗ್ರಾಮ ಕಂದಾಯ ದಾಖಲೆಗೆ ಸೇರಿದಾಗಿನಿಂದ ಟಾರ್‌ ಭಾಗ್ಯ ಕಾಣದಿರುವ ಮಣ್ಣಿನ ರಸ್ತೆ ಯಾಗಿಯೇ ಉಳಿದು ಕೊಂಡಿದೆ. ಬಂಡಿ, ಟ್ರ್ಯಾಕ್ಟರ್‌ ಇತರೆ ವಾಹನಗಳು ಮಣ್ಣಿನ ರಸ್ತೆಯಲ್ಲಿಓಡಾಡಿ ರಸ್ತೆಯ ಸ್ವರೂಪವೇ ಬದಲಾಗಿ ರಸ್ತೆಯಲ್ಲಿಒಂದು ಅಡಿಯಷ್ಟು ಆಳವಾದ ಗುಂಡಿಗಳು ಏರ್ಪಟ್ಟಿವೆ. ಹೈನುಗಾರಿಕೆ ನೆಚ್ಚಿಕೊಂಡಿರುವ ಮಹಿ ಳೆಯರು ಹಾಲು ಉತ್ಪಾದಕ ಸಂಘಕ್ಕೆ ಹಾಲು ಹಾಕಲು ಬರಬೇಕೆಂದರೆ ಕೆಸರು ರಸ್ತೆಯಲ್ಲೇ ತಂತಿ ಮೇಲೆ ನಡೆದು ಕೊಂ ಡು ಬಂದಂತೆ ನಡೆಯುತ್ತಾರೆ. ತಲೆಮೇಲೆ ಹಾಲಿನ ಕ್ಯಾನ್‌ ಹೊತ್ತು ಒಂದೆರಡು ಕಿಲೋಮೀಟರ್‌ ನಡೆಯುವ ನಾರಿಯರು ಇಲ್ಲಿನ ರಸ್ತೆಗೆ ನಿತ್ಯ ಹಿಡಿಶಾಪ ಹಾಕುತ್ತಾರೆ. ಇನ್ನು ಬೇಸಿಗೆ ಚಳಿಗಾಲ ದಲ್ಲಿಯೂ ಈ ರಸ್ತೆಯಲ್ಲಿಗುಂಡಿಗಳದ್ದೇ ಕಾರುಬಾರಾಗಿ ವಾಹನಗಳ ಸುಗಮ ಸಂಚಾರಕ್ಕೆ ಬ್ರೇಕ್‌ ಹಾಕಿದೆ.
ನರೇಗಾ ಇಲ್ಲಿಲ್ಲ: ಸಂಕೀಘಟ್ಟ ಪಂಚಾ ಯಿತಿ ವ್ಯಾಪ್ತಿಗೆ ಸೇರುವ ಈ ಹಳ್ಳಿರಸ್ತೆ ರಿಪೇರಿ ಮಾಡುವ ಗೋಜಿಗೆ ಸ್ಥಳೀಯ ಜನಪ್ರತಿನಿಧಿಗಳು ಹೋಗಿಲ್ಲ. ಇದೇ ಭಾಗದಿಂದ ಆಯ್ಕೆಯಾದ ಜಿಪಂ ಸದಸ್ಯರೂ ಇಲ್ಲಿನ ರಸ್ತೆ ಅಭಿವೃದ್ಧಿಯತ್ತ ಮನಸ್ಸು ಮಾಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ