ಆ್ಯಪ್ನಗರ

ರಸ್ತೆಪಾಳ್ಯ ಗಂಗಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ

ತಿಪ್ಪಸಂದ್ರ ಸಮೀಪದ ರಸ್ತೆಪಾಳ್ಯ ಗ್ರಾಮದ ಶಕ್ತಿದೇವತೆ ಗಂಗಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ ಗುರುವಾರ, ಶುಕ್ರವಾರ ನೆರವೇರಲಿದೆ ಎಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಡಾ.ಎಸ್‌.ಸೋಮಸುಂದರ ದೀಕ್ಷಿತರು ತಿಳಿಸಿದ್ದಾರೆ.

Vijaya Karnataka 24 Jan 2019, 5:00 am
ಮಾಗಡಿ ಗ್ರಾಮಾಂತರ: ತಿಪ್ಪಸಂದ್ರ ಸಮೀಪದ ರಸ್ತೆಪಾಳ್ಯ ಗ್ರಾಮದ ಶಕ್ತಿದೇವತೆ ಗಂಗಮ್ಮ ದೇವಿಯ ವಿಗ್ರಹ ಪ್ರತಿಷ್ಠಾಪನೆ ಗುರುವಾರ, ಶುಕ್ರವಾರ ನೆರವೇರಲಿದೆ ಎಂದು ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಡಾ.ಎಸ್‌.ಸೋಮಸುಂದರ ದೀಕ್ಷಿತರು ತಿಳಿಸಿದ್ದಾರೆ.
Vijaya Karnataka Web identification of the idol of gangamma devi on the road
ರಸ್ತೆಪಾಳ್ಯ ಗಂಗಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ


23 ರಂದು ಸಂಜೆ ಗಣಪತಿ ಪ್ರತಿಷ್ಠಾಪನೆ, ರಕ್ಷಾಬಂದನ, ವಾಸ್ತುಹೋಮ, ಬಿಂಬ ಶುದ್ಧಿ ಕಾರ್ಯಕ್ರಮಗಳು ನೆರವೇರಲಿದೆ. 24 ರಂದು ಗುರುವಾರ ಪ್ರಾತಃಕಾಲ ಯಾಗಶಾಲಾ ಪ್ರವೇಶ, ಕಲಶ ಸ್ಥಾಪನೆ ದ್ವಾರಪೂಜೆ, ವೇದಿಕಾರ್ಚನೆ, ರುದ್ರಹೋಮ ಹಾಗೂ ಸಂಜೆ ಸುದರ್ಶನ ನೆರವೇರಲಿದೆ.

25 ರಂದು ಗೋಪೂಜೆ, ಗಣಪತಿ ಪೂಜೆ, ಗರುಡ ಸ್ಥಂಭ ಪೂಜೆ, ನಾಗದೇವತೆ ಪೂಜೆ ಆನಂತರ ಗಂಗಮ್ಮ ದೇವಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಬಳಿಕ ಅಭಿಷೇಕ, ಅಲಂಕಾರ, ಪ್ರಸಾದ ವಿನಿಯೋಗವಿದೆ ಎಂದು ತಿಳಿಸಿದ್ದಾರೆ.

ಪಂಡಿತ ರತ್ನ ಪ್ರಶಸ್ತಿ ಪ್ರಧಾನ: ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಡಾ.ಎಸ್‌. ಸೋಮಸುಂದರ ದೀಕ್ಷಿತರಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಪಂಡಿತ ರತ್ನ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದಾಗಿ ದೇವಾಲಯದ ಮೂಲಗಳು ತಿಳಿಸಿವೆ.

ಕಾರ್ಯಕ್ರಮಕ್ಕೆ ಮಾಗಡಿ ಶಾಸಕ ಎ.ಮಂಜುನಾಥ್‌, ಮಾಜಿ ಶಾಸಕ ಬಾಲಕೃಷ್ಣ ಹಾಗೂ ನಾನಾ ಗ್ರಾಪಂ ಅಧ್ಯಕ್ಷ ರು ಮತ್ತು ಇಲಾಖೆಯ ಅಧಿಕಾರಿಗಳು ಹಾಜರಿರಲಿದ್ದಾರೆ.

ಹೆದ್ದಾರಿಯಲ್ಲಿದ್ದ ದೇವಾಲಯ: ರಸ್ತೆಪಾಳ್ಯದ ಗ್ರಾಮದೇವತೆ ಎಂದೇ ಖ್ಯಾತಿ ಪಡೆದಿರುವ ಶ್ರೀ ಗಂಗಮ್ಮ ದೇವಿ ದೇವಾಲಯ ಕುಣಿಗಲ್‌ ಮತ್ತು ನೆಲಮಂಗಲ ಮಾರ್ಗದ ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದ್ದಾರಿ 75 ದ್ವಿಪದ ರಸ್ತೆ ಯೋಜನೆಯಿಂದ ಬೇರೆಕಡೆಗೆ ವರ್ಗಾವಣೆ ಮಾಡಬೇಕಾಯಿತು. ಗ್ರಾಮಸ್ಥರು ದೇವಲಯವನ್ನು ಬೇರೆಕಡೆ ಕಟ್ಟಲು ತೀರ್ಮಾನಿಸಿದರು. ಹಳೆಯ ದೇವಾಲಯವನ್ನು 2011 ರಲ್ಲಿ ಕೆಡವಲಾಯಿತು. ಬಳಿಕ ನೂತನ ದೇವಾಲಯವನ್ನು ರಸ್ತೆ ಪಾಳ್ಯದ ಬಿಜಿಎಸ್‌ ವಿದ್ಯಾಸಂಸ್ಥೆ ಮುಂಭಾಗ ನಿರ್ಮಾಣಗೊಳಿಸಿ ಈಗ ದೇವಾಲಯದಲ್ಲಿ ಗಂಗದೇವಿಯ ಕೃಷ್ಣ ಶಿಲಾವಿಗ್ರಹದ ಪ್ರತಿಷ್ಠಾಪನೆ ನೆರವೇರಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ