ಆ್ಯಪ್ನಗರ

ಪಾಠ ಮಾಡುವವರೇ ದಿಕ್ಕು ತಪ್ಪಿದರೆ..

ಪಿಯುಸಿ, ಡಿಗ್ರಿ ಕಾಲೇಜುಗಳಲ್ಲಿಮೊಬೈಲ್‌ ಬಳಕೆ ಮಾಡಬಾರದು ಎಂಬ ಸರಕಾರಿ ಆದೇಶ ಗಳನ್ನು ಮಕ್ಕಳಿಗೆ ಪಾಠ ಮಾಡುವ ಉಪ ನ್ಯಾಸಕರೇ ಉಲ್ಲಂಘಿಸುತ್ತಿದ್ದಾರೆ.

Vijaya Karnataka 5 Oct 2019, 6:12 pm
ರಾಮನಗರ: ಪಿಯುಸಿ, ಡಿಗ್ರಿ ಕಾಲೇಜುಗಳಲ್ಲಿಮೊಬೈಲ್‌ ಬಳಕೆ ಮಾಡಬಾರದು ಎಂಬ ಸರಕಾರಿ ಆದೇಶ ಗಳನ್ನು ಮಕ್ಕಳಿಗೆ ಪಾಠ ಮಾಡುವ ಉಪ ನ್ಯಾಸಕರೇ ಉಲ್ಲಂಘಿಸುತ್ತಿದ್ದಾರೆ.
Vijaya Karnataka Web if the lesson is missed
ಪಾಠ ಮಾಡುವವರೇ ದಿಕ್ಕು ತಪ್ಪಿದರೆ..

ಹೆಡ್‌ಫೋನ್‌ ಬಳಕೆ ಮೂಲಕವೇ ಪಾಠ ಮಾಡುತ್ತಿರುವುದು ಸರಕಾರಿ ಆದೇಶವನ್ನೇ ಅಣಕಿಸುವಂತಿದೆ. ಮಾದರಿ ಆಗಬೇಕಾದವರೇ..?: ಗುಣ ಮಟ್ಟದ ಶಿಕ್ಷಣಕ್ಕಾಗಿ ಶಾಲಾ- ಕಾಲೇಜುಗಳಲ್ಲಿಮೊಬೈಲ್‌ ಬಳಕೆ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ. ಆದರೆ, ಇದರ ಉದ್ದೇಶವನ್ನೇ ಶಿಕ್ಷಕರು ಅರ್ಥ ಮಾಡಿಕೊಂಡಿಲ್ಲ. ಅವರೇ ಆದೇಶ ಉಲ್ಲಂ ಘಿಸಿ, ಕುತ್ತಿಗೆಗೆ ಹೆಡ್‌ಪೋನ್‌ ನೇತು ಹಾಕಿ ಕೊಂಡೇ ಪಾಠ ಮಾಡು ತ್ತಿದ್ದಾರೆ. ಇದು ವಿದ್ಯಾ ರ್ಥಿಗಳಿಗೆ ಮೊಬೈಲ್‌ ಬಳ ಕೆಗೆ ಪರೋಕ್ಷ ಉತ್ತೇಜನ ನೀಡು ತ್ತಿರುವುದು ಸುಳ್ಳಲ್ಲ. ಕೆಲ ಉಪ ನ್ಯಾಸ ಕರು, 24 ಗಂಟೆ ಕುತ್ತಿಗೆಗೆ ಹೆಡ್‌ ಫೋನ್‌ ಹಾಕಿ ಕೊಂಡೇ ಓಡಾ ಡುತ್ತಿದ್ದಾರೆ. ಇನ್ನು ಬ್ಲೂಟೂತ್‌ ಹೆಡ್‌ಫೋನ್‌ಗಳ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿಕಿವಿಗೆ ಸಿಕ್ಕಿಸಿ ಪಾಠ ಮಾಡುವವರಿಗೇನು ಕಡಿಮೆ ಇಲ್ಲ.
ಏನಾಗಿದೆ ಕಾಲೇಜುಗಳಲ್ಲಿ: ಕಾಲೇಜು ವಿದ್ಯಾರ್ಥಿಗಳು ಕದ್ದುಮುಚ್ಚಿ ಮೊಬೈಲ್‌ ಬಳಕೆ ಮಾಡುತ್ತಿರುವುದು ಸರ್ವೇ ಸಾಮಾನ್ಯ. ತರಗತಿ ಗಳಲ್ಲಿಮೊಬೈಲ್‌ ಬಳಕೆಯನ್ನು ಸರಕಾರ ನಿಷೇಧಿಸಿದ ಬಳಿಕ ಕೆಲವು ವಿದ್ಯಾರ್ಥಿಗಳು ಮೊಬೈಲ್‌ ತರುವುದನ್ನು ಬಿಟ್ಟಿದ್ದಾರೆ. ಆದರೆ, ಉಪನ್ಯಾಸ ಕರು, ಪ್ರಿನ್ಸಿಪಾಲರು, ಪ್ರೊಫೆಸರ್‌ಗಳು ಮಾತ್ರ ಸರಕಾರದ ಆದೇಶ ತಮಗೆ ಅನ್ವಯಿ ಸದಂತೆ ವರ್ತಿಸುತ್ತಾ, ಶಾಲಾ ಕಾಲೇಜುಗಳಲ್ಲಿ ಎಗ್ಗಿಲ್ಲದೇ ಮೊಬೈಲ್‌ ಬಳಸುತ್ತಿರುವುದು ವಾಸ್ತವ.
ಪಾಠದ ಮಧ್ಯೆ ಪೋನ್‌ ಕರೆ: ಶಾಲಾ ಶಿಕ್ಷಕರು ಮೊಬೈಲ್‌ ಬಳಕೆಯಿಂದ ಹೊರತಾಗಿಲ್ಲ. ಇವರು ಸದಾ ತಮ್ಮ ಬ್ಯಾಗ್‌ ಅಥವಾ ಜೇಬುಗಳಲ್ಲೇ ಮೊಬೈಲ್‌ ಇರಿಸಿಕೊಂಡಿರುತ್ತಾರೆ. ಇದರಿಂದ ಪಾಠ ಮಾಡುವ ವೇಳೆ ಮೊಬೈಲ್‌ ಪೋನ್‌ಗಳು ರಿಂಗಣಿಸಿ, ವಿದ್ಯಾರ್ಥಿಗಳ ಏಕಾ ಗ್ರತೆಗೆ ಭಂಗ ತರುತ್ತಿವೆ. ಪೋನ್‌ ರಿಂಗಾದೊಡನೆ ಪಾಠ ಬಿಟ್ಟು ಶಿಕ್ಷಕರು ತರಗತಿಯಿಂದ ಹೊರಗೋಡುವುದು ಮಾಮೂಲಿಯಾಗಿದೆ. ಕೆಲವರಂತೂ ತರಗತಿ ಯಲ್ಲೇ ಕುಳಿತು ಪೋನ್‌ನಲ್ಲಿಮಾತನಾಡುತ್ತಾರೆ. ಹೆಡ್‌ಫೋನ್‌ ಹಾಕಿದರೆ ಹೇಗೆ?: ವೈರ್‌ಲೆಸ್‌ ಹೆಡ್‌ಫೋನ್‌ಗಳನ್ನು ಹಾಕಿಕೊಂಡು ಓಡಾ ಡುವುದು ಫ್ಯಾಷನ್‌ ಹಾಕಿಬಿಟ್ಟಿದೆ. ಹೀಗಾಗಿ, ಶಿಕ್ಷಕರು, ಉಪನ್ಯಾಸಕರು ಸಹ ಶಾಲಾ- ಕಾಲೇಜುಗಳಲ್ಲಿಯೇ ಈ ರೀತಿ ನಡೆದುಕೊಳ್ಳು ತ್ತಿರುವುದು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಕೆಲಸ ಎನ್ನುತ್ತಾರೆ ಶಿಕ್ಷಣ ತಜ್ಞ ಶಂಕರಪ್ಪ. ಶಿಕ್ಷಕರು ಏನು ಮಾಡುತ್ತಾರೋ, ಅದನ್ನೇ ಮಕ್ಕಳು ಮಾಡು ತ್ತಾರೆ. ಮೊದಲು ಶಿಕ್ಷಕರು, ಉಪ ನ್ಯಾಸಕರು ಬದಲಾಗಬೇಕು. ಪಾಠ ಮಾಡು ವವರು ಮೊಬೈಲ್‌ ಬದಲು, ಪುಸ್ತಕ ಹಿಡಿದರೆ, ಮಕ್ಕಳು ಸಹ ಪುಸ್ತಕ ಹಿಡಿಯುತ್ತಾರೆ ಎನ್ನುತ್ತಾರೆ ಅವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ