ಆ್ಯಪ್ನಗರ

ಧರ್ಮ ಮತ್ತು ಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಜನತೆ ಧರ್ಮ ಮತ್ತು ಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸದಾ ಜಾಗೃತರಾಗಿರಬೇಕು ಎಂದು ಕನಕಪುರ ತಾಲೂಕು ಮರಳೇಗವಿಮಠದ ಪೀಠಾಧ್ಯಕ್ಷ ಶ್ರೀ ಡಾ. ಮುಮ್ಮಡಿ ಶಿವರುದ್ರ ಮಹಾಸ್ವಾಮೀಜಿ ಹೇಳಿದ್ದಾರೆ.

Vijaya Karnataka 7 Jan 2019, 5:00 am
ರಾಮನಗರ ಗ್ರಾಮಾಂತರ: ಜನತೆ ಧರ್ಮ ಮತ್ತು ಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸದಾ ಜಾಗೃತರಾಗಿರಬೇಕು ಎಂದು ಕನಕಪುರ ತಾಲೂಕು ಮರಳೇಗವಿಮಠದ ಪೀಠಾಧ್ಯಕ್ಷ ಶ್ರೀ ಡಾ. ಮುಮ್ಮಡಿ ಶಿವರುದ್ರ ಮಹಾಸ್ವಾಮೀಜಿ ಹೇಳಿದ್ದಾರೆ.
Vijaya Karnataka Web imitate religion and devotion in your life
ಧರ್ಮ ಮತ್ತು ಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ


ಇಲ್ಲಿನ ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ಅಮವಾಸ್ಯೆ ಪೂಜೆ ನಿಮಿತ್ತ ಶನಿವಾರ ಸಂಜೆ ನಡೆದೆ ಧರ್ಮ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ನಾವೆಲ್ಲ ವೀರಶೈವ ಧರ್ಮ ಎಂದು ಹೇಳಬೇಕು. ಧರ್ಮವನ್ನು ಒಡೆಯುವರು ನಮ್ಮವರೇ ಆಗಿದ್ದು, ಸಮುದಾಯದ ಜನತೆ ಧರ್ಮದ ಪ್ರಜ್ಞೆ ಜಾಗೃತರಾಗಿರಬೇಕು. ಭಕ್ತಿ ಬಹಳ ದೊಡ್ಡದ್ದಾಗಿದ್ದು, ಭಗವಂತ ಭಕ್ತಿಗೆ ಒಲಿಯಲಿದ್ದಾನೆ ಹೊರತು, ಶ್ರೀಮಂತಿಕೆಗೆ ಇಲ್ಲವೇ ರಾಜಕೀಯ ಅಧಿಕಾರಕ್ಕೆ ಒಲಿಯುವುದಿಲ್ಲ. ಭಕ್ತಿಯನ್ನು ವ್ಯಕ್ತಪಡಿಸಿದ್ದಲ್ಲಿ ಧರ್ಮದ ಉತ್ಕೃಷ್ಟತೆಯನ್ನು ಬೆಳೆಸಲಿಕ್ಕೆ ಸಾಧ್ಯ. ಸಂಘಟನೆಯಲ್ಲಿ ಬಲ ಮತ್ತು ಶಕ್ತಿಯಿದ್ದು, ಎಲ್ಲಿಯವರೆಗೆ ಸಂಘಟಿತರಾಗುವುದಿಲ್ಲವೋ ಅಲ್ಲಿಯವರೆಗೆ ಸಮುದಾಯ ಜಾಗೃತರಾಗಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ಧರ್ಮ ರಕ್ಷಿಸುತ್ತದೆ; ಆಧುನಿಕ ಜಗತ್ತಿನಲ್ಲಿ ಜನರಿಗೆ ಹೇಗೆ ಬದುಕಬೇಕು ಎಂಬುದೇ ಗೊತ್ತಿಲ್ಲ, ಇದರಿಂದ ವಿನಾಶ ಹೊಂದುತ್ತಿದ್ದಾನೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಭಗವಂತನ ವಾಕ್ಯದಂತೆ ಯಾರು ಧರ್ಮವನ್ನು ರಕ್ಷ ಣೆ ಮಾಡುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ, ಧರ್ಮ ಎಂಬುದು ಎಲ್ಲೂ ಇಲ್ಲ. ಧರ್ಮ ಎಂಬುದು ನಮ್ಮೊಳಗಿದೆ. ನಮ್ಮೊಳಗಿರುವ ಧರ್ಮವನ್ನು ಅರಿಯಲಿಕ್ಕೆ ಪ್ರಯತ್ನಪಡಬೇಕಿದೆ ಎಂದವರು ನುಡಿದರು.

ಧರ್ಮವೊಂದೇ ಶಾಶ್ವತ: ಸಂಸಾರ ಮತ್ತು ಸಿರಿ ನಡುವೆ ಧರ್ಮ ಶಾಶ್ವತವಾಗಿದೆ. ಲೌಕಿಕ ಪ್ರಪಂಚದ ಸಂಸಾರವೇ ನಿಜವಾದ ಜೀವನ ಎಂಬ ಭ್ರಮೆ ಬೇಡ, ಧರ್ಮ ಆಚರಣೆಯಲ್ಲಿ ನಿರಂತರ ಮನಸ್ಸನ್ನು ತೊಡಗಿಸಬೇಕು, ಆ ಮೂಲಕ ಸಂಸ್ಕಾರವನ್ನು ಪಡೆದುಕೊಳ್ಳಬೇಕು. ಗುರು ಹಿರಿಯರ ಮಾರ್ಗದರ್ಶನದಿಂದ ಸಂಸ್ಕಾರ ಪಡೆದುಕೊಂಡು, ಆತ್ಮವನ್ನು ಪರಿಶುದ್ದವಾಗಿಟ್ಟುಕೊಳ್ಳಬೇಕು.ಎಲ್ಲಿವರೆಗೆ ನಾನು ಎಂಬುದನ್ನು ಮನುಷ್ಯ ಬಿಡುವುದಿಲ್ಲವೋ ಅಲ್ಲಿಯವರೆಗೆ ಆ ವ್ಯಕ್ತಿಗೆ ಮೋಕ್ಷ ಲಭಿಸುವುದಿಲ್ಲ . ನಾವು ಮಾಡಿದ ಧರ್ಮ ಮತ್ತು ಪುಣ್ಯದ ಫಲ ನಮ್ಮನ್ನು ಕಾಪಾಡಲಿದೆ ಎಂಬುದನ್ನು ಪ್ರತಿಯೊಬ್ಬರು ಮನಗಾಣಬೇಕಿದೆ ಎಂದು ಸಲಹೆ ನೀಡಿದರು.

ಇಷ್ಟಪಿಂಗ ಪೂಜೆ ತಪ್ಪಿಸಬೇಡಿ: ಹಣೆ ಮೇಲೆ ಭಸ್ಮವನ್ನು ಧರಿಸಿ, ನಿತ್ಯ ಇಷ್ಟಲಿಂಗ ಪೂಜೆ ಚಾಚೂತಪ್ಪದೆ ಮಾಡಬೇಕು. ಭಸ್ಮಾಧಾರಣೆ ಮಾಡುವುದರಿಂದ ನಮ್ಮೆಲ್ಲ ಕರ್ಮಫಲ ಹೋಗಿ ಸತ್ಪಲ ದೊರಕಲಿದೆ . ಇಷ್ಟಲಿಂಗ ಪೂಜೆಯನ್ನು ಯಾವ ಸಂದರ್ಭದಲ್ಲಿಯೂ ಬಿಡಬಾರದು. ಇಷ್ಟಲಿಂಗ ಪೂಜೆ ಸತಿ ಪತಿಗಳ ಭಾವವಿದ್ದಾಗೆ. ವೀರಶೈವ ಲಿಂಗಾಯಿತ ಧರ್ಮದಲ್ಲಿ ಇಷ್ಟಲಿಂಗ ಪೂಜೆ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ನಿತ್ಯ ಇಷ್ಟಲಿಂಗ ಪೂಜೆ ಮಾಡುವಂತೆ ಅವರು ಆಶೀರ್ವಚನ ನೀಡಿದರು.

ಗಂಗಾರಾಜನಹಳ್ಳಿ ಆರ್‌.ಎಸ್‌. ರಾಜೇಶ್ವರಿ ಮತ್ತು ಮಹಾದೇವಯ್ಯ ಹಾಗೂ ಎಂ. ಚೇತನ್‌ ಕುಟುಂಬ ವರ್ಗ ಅಮಾವಾಸ್ಯೆ ಪೂಜೆಯ ಸೇವಾಕರ್ತರಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಜನತೆ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ