ಆ್ಯಪ್ನಗರ

ಸಾಂಕ್ರಾಮಿಕ ರೋಗ ತಡಗೆ ಕ್ರಮವಹಿಸಿ

ಸಾಂಕ್ರಾಮಿಕ ರೋಗಗಳು ಹರಡದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಮುಖಂಡ ಕೆಎಸ್‌ನಾಗರಾಜು ತಿಳಿಸಿದರು...

Vijaya Karnataka 8 Feb 2019, 5:00 am
ಚನ್ನಪಟ್ಟಣ: ಸಾಂಕ್ರಾಮಿಕ ರೋಗಗಳು ಹರಡದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು ಎಂದು ಮುಖಂಡ ಕೆ.ಎಸ್‌.ನಾಗರಾಜು ತಿಳಿಸಿದರು.
Vijaya Karnataka Web implementation of the infectious disease late
ಸಾಂಕ್ರಾಮಿಕ ರೋಗ ತಡಗೆ ಕ್ರಮವಹಿಸಿ


ತಾಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಬೆಂಗಳೂರಿನ ಸ್ಟೆಫ್ಸ್‌ ಸಂಸ್ಥೆಯ ಸಹಯೋಗದೊಂದಿಗೆ, ರಾಷ್ಟ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಕಾರ್ಯಕ್ರಮದಡಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತಾದ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ''ಅಶುದ್ಧ ನೀರು ಸೇವನೆಯಿಂದಾಗಿ ಬಹುತೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಿ, ಪರಿಶುದ್ಧ ನೀರು ಬಳಕೆಯ ಕಡೆಗೆ ಗಮನ ನೀಡಬೇಕು. ಕಲುಷಿತ ವಾತಾವರಣದಿಂದಾಗಿ ರೋಗಬಾಧೆಗಳು ಉಲ್ಬಣವಾಗುತ್ತಿವೆ. ಸ್ವಯಂ ಕಾಳಜಿ ವಹಿಸಿದರೆ ಮಾತ್ರವೇ ಆರೋಗ್ಯವಂತರಾಗಿ ಬಾಳಬಹುದು,'' ಎಂದರು.

ಸಾಹಿತಿ ವಿಜಯ್‌ ರಾಂಪುರ ಮಾತನಾಡಿ, ''ಮನುಷ್ಯನಿಗೆ ಶುದ್ಧ ವಾಯು, ಆಹಾರ ಮತ್ತು ನೀರು ಆರೋಗ್ಯವಂತ ಜೀವನಕ್ಕೆ ಅತ್ಯವಶ್ಯಕ. ನಾವು ವಾಸಿಸುವ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು ಎಲ್ಲರ ಜವಾಬ್ದಾರಿ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸುವ ಮೂಲಕ ಆರೋಗ್ಯವಂತರಾಗಬಹುದು,'' ಎಂದರು.

ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ ಜಾಗೃತಿ ಗೀತೆಗಳ ಗಾಯನ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸ್ಟೆಫ್ಸ್‌ ಸಂಸ್ಥೆಯ ಬಿ. ಎಸ್‌.ಸುಷ್ಮ, ಅಂಬಿಕಾ, ಗ್ರಾಮದ ಮುಖಂಡರಾದ ಧನಂಜಯ, ಕಾರ್ತಿಕ್‌, ಹರೀಶ್‌ ಸೋನಿ, ಲಿಖಿತ್‌ಬಾಬು, ಪೂರ್ಣೇಶ್‌, ಪುಟ್ಟ ಇನ್ನೂ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ