ಆ್ಯಪ್ನಗರ

ಮಹಿಳೆಯ ಕಪಾಳಕ್ಕೆ ಹೊಡೆದು, ಜಡೆ ಎಳೆದು ಹಲ್ಲೆಗೈದ ಗ್ರಾ.ಪಂ ಸದಸ್ಯ! ಕೈಕಟ್ಟಿ ಕುಳಿತ ಅಕ್ಕೂರು ಪೊಲೀಸರು!

ಮೆಣಸಿನಹಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯ ಸಿದ್ದರಾಜು ಎಂಬಾತ ಜಮೀನಿನ ವಿಚಾರದಲ್ಲಿ ಉಂಟಾದ ಜಗಳಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು, ಆಕೆಯ ಕಪಾಳಕ್ಕೆ ಬಾರಿಸಿ ಕೂದಲು ಹಿಡಿದು ಎಳೆದು ಹೊಂಡಕ್ಕೆ ನೂಕಿ ಹಾಕಿದ್ದಾನೆ. ಈತನ ಕ್ರೌರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ರೌಡಿ ಗ್ರಾಮ ಪಂಚಾಯತ್ ಸದಸ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಕ್ಕೂರು ಠಾಣಾ ಪೊಲೀಸರು ಮಾತ್ರ ಕೈಕಟ್ಟಿ ಕುಳಿತಿದ್ದಾರೆ.

Vijaya Karnataka Web 25 Nov 2021, 3:35 pm
ರಾಮನಗರ: ಹಳ್ಳಿಯ ಜನರ ಸಮಸ್ಯೆಗೆ ನೆರವಾಗಬೇಕಿದ್ದ ಗ್ರಾಮ ಪಂಚಾಯತ್ ಸದಸ್ಯನೇ ಮಹಿಳೆಯೊಬ್ಬರ ಕಪಾಳಕ್ಕೆ ಹೊಡೆದು ಅಶ್ಲೀಲವಾಗಿ ನಿಂದಿಸಿದ ಘಟನೆ ಚನ್ನಪಟ್ಟಣ ತಾಲ್ಲೂಕಿನ ಮೆಣಸಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web gram panchayat member attack to women


ಗ್ರಾಮ ಪಂಚಾಯತಿ ಸದಸ್ಯ ಸಿದ್ದರಾಜು ಎಂಬಾತ ಜಮೀನಿನ ವಿಚಾರದಲ್ಲಿ ಉಂಟಾದ ಜಗಳಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಮೇಲೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು, ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಬಂದ ಈತನ ಕ್ರೌರ್ಯದ ದೃಶ್ಯಾವಳಿಗಳು ಸ್ಥಳೀಯರ ಮೊಬೈಲ್‌ನಲ್ಲಿ ಹರಿದಾಡುತ್ತಿದೆ. ಗ್ರಾಮ ಪಂಚಾಯತ್‌ ಸದಸ್ಯನಾಗಿ ಸ್ಥಳೀಯ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಆಕೆಯ ಕಪಾಳಕ್ಕೆ ಹೊಡೆದಿರುವ ಬಗ್ಗೆ ಸಾಕಷ್ಟು ವಿರೋಧ ಕೇಳಿಬಂದಿದೆ.
ಪಾಕಿಸ್ತಾನ್‌ ಜಿಂದಾಬಾದ್‌ ಎಂದು ತಿರುಚಿ ಕೋಮುಗಲಭೆಗೆ ಹುನ್ನಾರ; ಬಿಜೆಪಿ ಬೆಂಬಲಿಗ ಸೇರಿ ಮೂವರ ವಿರುದ್ಧ FIR
ಏನಿದು ಘಟನೆ?
ಅಕಾಲಿಕ ಮಳೆಯಿಂದ ಜಮೀನಿಗೆ ನೀರು ನುಗ್ಗಿದ ಪರಿಣಾಮ ಪಕ್ಕದ ಜಮೀನಿನ ಮಹಿಳೆಯ ಗ್ರಾಮ ಪಂಚಾಯತ್ ಸದಸ್ಯ ಹಲ್ಲೆ ನಡೆಸಿದ್ದಾನೆ. ಕೈಯಲ್ಲಿ ದೊಣ್ಣೆ ಹಿಡಿದು ಮಹಿಳೆ ಮೇಲೆ ಜಗಳಕ್ಕೆ ಬಂದ ಸಿದ್ದರಾಜು, ನಿನ್ನ ಜಮೀನಿಗೆ ತಡೆಗೋಡೆ ನಿರ್ಮಿಸು ಎಂದು ಏಕವಚನದಲ್ಲೇ ಗದರಿಸಿದ್ದಾನೆ. ಅಲ್ಲದೇ, ನೀರು ನುಗ್ಗಿ ಜಮೀನಿನ ಮಣ್ಣು ಕೊಚ್ಚಿ ಹೋಗಿದ್ದಕ್ಕೆ ಮಹಿಳೆ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ‘ಜಮೀನಿಗೆ ತಡಗೋಡೆ ನಿರ್ಮಿಸಿಕೋ.. ಏನೇ ಮಡ್ತೀಯಾ ನೀನು ಲೋಪರ್ ಮುಂ…, ಬಾಯಿಗೆ ಬಂದಾಗೆ ಮಾತನಾಡಿಸಬೇಡ್ವೇ.. ಏನು ಇನ್ನ ವರ್ಷಕ್ಕೆ ಬದು ಹಾಕುಸ್ತೀಯಾ..ಏನೇ ನಿಮ್ಮವ್ವ.. ಎಂದೆಲ್ಲ ಮಹಿಳೆಗೆ ಆವಾಜ್ ಹಾಕಿದ್ದಾನೆ.

ಆಯ್ತು ಬಿಡಿ ಅಣ್ಣ ಈಗ ನೀವು ಹೇಳಿದ್ದೀರಾ ನಾವು ಸರಿ ಮಾಡಿಸಿಕೊಳ್ಳುತ್ತೇವೆ ಎಂದು ಮಹಿಳೆ ವಿನಂತಿ ಮಾಡಿದರೂ ಕೂಡ, ಆಕೆಗೆ ಅವಾಚ್ಯ ಪದಗಳಿಂದ ನಿಂದಿಸಿರುವುದನ್ನು ಮುಂದುವರಿಸಿದ್ದಾನೆ. ಮಹಿಳೆ ಮೇಲೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಯ ದೃಶ್ಯ ವೈರಲ್ ಆಗುತ್ತಿದ್ದರೂ ಕೂಡ ಸ್ಥಳೀಯ ಅಕ್ಕೂರು ಠಾಣಾ ಪೊಲೀಸರು ಮಾತ್ರ ಕಿಡಿಗೇಡಿ ಗ್ರಾಮ ಪಂಚಾಯತ್ ಸದಸ್ಯನನ್ನು ಬಂಧಿಸುವ ಬದಲು ತಮಗೆ ಸಂಬಂಧವೇ ಇಲ್ಲದಂತೆ ಕೈಕಟ್ಟಿ ಕುಳಿತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ