ಆ್ಯಪ್ನಗರ

ಉಗ್ರರ ತಾಣವಾಗುತ್ತಿದೆಯಾ ರಾಮನಗರ?

ಬೆಂಗಳೂರಿನ ಸಮೀಪಕ್ಕೆ ಹೊಂದುಕೊಂಡಿರುವ ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರವಾಗಿರುವ, ರೇಷ್ಮೆನಾಡು ರಾಮನಗರ ಈಗ ಉಗ್ರರ ತಾಣವಾಗುತ್ತಿದೆಯಾ ಎಂಬ ಭೀತಿ ಹೆಚ್ಚಾಗಿದೆ.

Vijaya Karnataka Web 30 Oct 2019, 7:37 pm
ರಾಮನಗರ: ರಾಮ ನೆಲೆಸಿದ ಕ್ಷೇತ್ರ ರಾಮನಗರ ಭಯೋತ್ಪಾದಕರ ತಾಣವಾಗುತ್ತಿದೆಯಾ ಎಂಬ ಆತಂಕ ಹೆಚ್ಚಾಗಿದೆ.
Vijaya Karnataka Web ಉಗ್ರ
ಉಗ್ರ


ಬಾಂಗ್ಲಾ‌ದೇಶ ಮತ್ತು ಶ್ರೀಲಂಕಾ ಮೂಲದ ಅನುಮಾನಾಸ್ಪದ ವ್ಯಕ್ತಿಗಳು ನೆಲೆಸಿದ್ದಾರೆಂಬ ಆತಂಕ ಇನ್ನೂ ಗಾಢವಾಗಿರುವ ಬೆನ್ನಲ್ಲೇ, ನೈಜೀರಿಯಾ ಮೂಲದವರೆನ್ನಲಾದ ನಾಲ್ವರನ್ನು ಇದೀಗ ರಾಮನಗರ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ.
ಮೈಸೂರಿನಿಂದ ಸಿಸಿಬಿ ತಂಡ ಫಾಲೋ ಮಾಡಿದರೂ ಬಂದಿಸಲಾಗಿಲ್ಲ ನಂತರ ಮಂಡ್ಯದಲ್ಲಿ ಬಂಧಿಸಲು ಯತ್ನಿಸಲಾಯಿತು. ಬಳಿಕ ರಾಮನಗರದ ಕನಕಪುರ ಸರ್ಕಲ್ ಬಳಿ ರಾಮನಗರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅನೂಪ್ ಎ.ಶೆಟ್ಟಿ ನೇತೃತ್ವದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ನಾಲ್ಕು ಅನುಮಾನಾಸ್ಪದ ವ್ಯಕ್ತಿಗಳನ್ನು ಶೋಧ ನಡೆಸಿದ ವೇಳೆ ಅವರಲ್ಲಿ ಗಾಂಜಾ ಅಫೀಮು ಮತ್ತು ಮಾರಕಾಸ್ತ್ರಗಳು ಸ್ಪೋಟಕ ವಸ್ತುಗಳು ಸಿಕ್ಕಿವೆ ಎನ್ನಲಾಗಿದೆ. ಅಲ್ಲದೆ ಇವರು ಭಯೋತ್ಪಾದಕರು ಎಂಬ ಆತಂಕ ನಗರವಾಸಿಗಳದ್ದಾಗಿದೆ.

ಇದೇ ವೇಳೆ ಈ ತಂಡ ಎಟಿಎಂ ಕಳವು ಮಾಡಿದ್ದರು ಎನ್ನುವ ಮಾಹಿತಿ ಕೂಡ ಲಭ್ಯವಾಗಿದ್ದು. ಇವರು ಭಯೋತ್ಪಾದಕರಾ ಎನ್ನುವ ಶಂಕೆಗೆ ಪೋಲೀಸರ ತನಿಖೆಯಿಂದಷ್ಟೇ ಉತ್ತರ ತಿಳಿಯಬೇಕಿದೆ.

ಈ ಸಂಬಂಧ ಖುದ್ದು ಎಸ್ಪಿ ಅನೂಪ್ ಎ.ಶೆಟ್ಟಿ ಕಾರ್ಯಾಚರಣೆ ನಡೆಸಿದ್ದು ಬಂದಿತರನ್ನು ರಾಮನಗರ ಗ್ರಾಮಾಂತರ ಪೋಲಿಸರ ವಶದಲ್ಲಿರಿಸಲಾಗಿದೆ.

ಹಿಡಿದಿದ್ದು ರೋಚಕ

ಆರೋಪಿಗಳಾಗಿ ಪ್ಲ್ಯಾನ್ ಮಾಡಿದ್ದ ಪೊಲೀಸರು, ರಾಮನಗರದ ಐಜೂರು ವೃತ್ತದಿಂದ ಹಿಡಿದು, ಕನಕಪುರ ವೃತ್ತದ ಸಮೀಪದಲ್ಲಿರುವ ಎಂಎಸ್‌ಗೋಲ್ಡ್ ಅಂಗಡಿವರೆಗೂ ಬೀಡು ಬಿಟ್ಟಿದ್ದರು. ಮೈಸೂರಿನಿಂದ ಬರುವ ಪ್ರತಿಯೊಂದು ವಾಹನವನ್ನು ಪರಿಶೀಲಿಸಿತ್ತಿದ್ದರು.

ಈ ವೇಳೆ ಕಾರಿನಲ್ಲಿ ಬಂದ ಆರೋಪಿಗಳು ಪೊಲೀಸರನ್ನು ಕಂಡ ತಕ್ಷಣ ಕಾರನ್ನು ಯೂಟರ್ನ್ ಮಾಡಿಕೊಂಡು ಎಸ್ಕೆಪ್ ಆಗಲು ಪ್ರಯತ್ನಿಸಿದ್ದಾರೆ. ಇದನ್ನು ಕಂಡ ಪೊಲೀಸರು, ಕೂಡಲೇ ಕಾರ್ಯಪ್ರವೃತ್ತರಾಗಿ, ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ. ಹೀಗೆ, ಆರೋಪಿಗಳ ಪಡೆಯನ್ನು ಪೊಲೀಸರು ಬೆನ್ನತ್ತಿ ಹಿಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ