ಆ್ಯಪ್ನಗರ

'ಮೋಸದಿಂದ ಏಸು ಪ್ರತಿಮೆ ನಿರ್ಮಾಣ, ಮತಾಂತರಕ್ಕೆ ಡಿಕೆ ಬ್ರದರ್ಸ್‌ ಬೆಂಬಲ': ಕನಕಪುರದಲ್ಲಿ ಕಲ್ಲಡ್ಕ ಕಿಡಿ

ನಾನು ನಿಮ್ಮ ಕ್ಷೇತ್ರದಲ್ಲಿ ಬಂದು ನಿಂತಿದ್ದೇನೆ. ನಾನು ನಿಮಗೆ ಗೊತ್ತಿಲ್ಲವಾ ಎಂದು ಡಿಕೆಶಿಗೆ ಸವಾಲೆಸೆದ ಕಲ್ಲಡ್ಕ ಪ್ರಭಾಕರ್ ಭಟ್, ಮತಾಂತರಕ್ಕೆ ನಮ್ಮ ವಿರೋಧವಿದೆ ಎಂದರು. ನಮ್ಮ ಉದಾರತೆಯನ್ನು ನಮ್ಮ ದೌರ್ಬಲ್ಯ ಅಂದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದರು.

Vijaya Karnataka Web 13 Jan 2020, 3:00 pm
ಕನಕಪುರ (ರಾಮನಗರ): ಕಪಾಲ ಬೆಟ್ಟದಲ್ಲಿ ಮೋಸ ವಂಚನೆ ಮಾಡಿ ಏಸು ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ. ಕನಕಪುರ ಚಲೋ ಮೂಲಕ ಕನಕಪುರ ಪಟ್ಟಣ ತಲುಪಿ ಅಲ್ಲಿನ ಸಮಾವೇಶದ ವೇಳೆ ಕಲ್ಲಡ್ಕ ಪ್ರಭಾಕರ್ ಭಟ್ ಈ ವಿಚಾರ ತಿಳಿಸಿದರು. ಹಿಂದೂಗಳಲ್ಲೇ ಹಲವು ದೇವರಿದ್ದಾರೆ. ಅವರ ಪ್ರತಿಮೆಯನ್ನು ಏಕೆ ನಿರ್ಮಾಣ ಮಾಡಲಿಲ್ಲ ಎಂದು ಕಲ್ಲಡ್ಕ ಸವಾಲೆಸೆದರು.
Vijaya Karnataka Web kalladka prabhakar bhat
'ಮೋಸದಿಂದ ಏಸು ಪ್ರತಿಮೆ ನಿರ್ಮಾಣ, ಮತಾಂತರಕ್ಕೆ ಡಿಕೆ ಬ್ರದರ್ಸ್‌ ಬೆಂಬಲ': ಕನಕಪುರದಲ್ಲಿ ಕಲ್ಲಡ್ಕ ಕಿಡಿ


ಮತಾಂತರಕ್ಕೆ ಡಿಕೆ ಬ್ರದರ್ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ ಕಲ್ಲಡ್ಕ ಪ್ರಭಾಕರ್ ಭಟ್, ನಿಮಗೆ ಸುರೇಶ್ ಹಾಗೂ ಶಿವಕುಮಾರ್ ಎಂದು ಹೆಸರಿಟ್ಟಿದ್ದಾರೆ. ಹಾಗಿದ್ದರೂ ವೋಟ್‌ ಬ್ಯಾಂಕ್‌ಗಾಗಿ, ಸೀಟ್‌ಗಾಗಿ ಹಾಗೂ ನೋಟ್‌ಗಾಗಿ ಇವೆಲ್ಲವನ್ನೂ ಮಾಡ್ತಿದ್ದಾರೆ ಎಂದು ಕಲ್ಲಡ್ಕ ಪ್ರಭಾಕರ್‌ ಭಟ್ ಆಕ್ರೋಶ ವ್ಯಕ್ತಪಡಿಸಿದರು.

ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುವ ಮೂಲಕ ಹಿಂದೂ ಸಮಾಜವನ್ನ ಇಬ್ಬಾಗ ಮಾಡುವ ಕೆಲಸ ನಡೆಯುತ್ತಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದರು. ನಾನು ನಿಮ್ಮ ಕ್ಷೇತ್ರದಲ್ಲಿ ಬಂದು ನಿಂತಿದ್ದೇನೆ. ನಾನು ನಿಮಗೆ ಗೊತ್ತಿಲ್ಲವಾ ಎಂದು ಡಿಕೆಶಿಗೆ ಸವಾಲೆಸೆದ ಕಲ್ಲಡ್ಕ ಪ್ರಭಾಕರ್ ಭಟ್, ಮತಾಂತರಕ್ಕೆ ನಮ್ಮ ವಿರೋಧವಿದೆ ಎಂದರು.

ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಹಿಂದೂಪರ ಸಂಘಟನೆಗಳಿಂದ ಬೃಹತ್ ರ‍್ಯಾಲಿ, ಕಲ್ಲಡ್ಕ ಪ್ರಭಾಕರ್ ಭಟ್ ಭಾಗಿ

ಹಿಂದು ಸಮಾಜ ಯಾರ ವಿರುದ್ದವೂ ಹೋರಾಟ ಮಾಡಲ್ಲ ಎಂದು ಹೇಳಿದ ಕಲ್ಲಡ್ಕ ಪ್ರಭಾಕರ್ ಭಟ್, ಅಲ್ಪ ಸಂಖ್ಯಾತರ ಹೆಸರಿನಲ್ಲಿ ದೇಶವನ್ನೇ ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿರೋ ಚರ್ಚ್ ಹಾಗೂ ಮಸೀದಿಗಳ ಜಾಗವೆಲ್ಲವೂ ಹಿಂದೂಗಳ ಜಾಗ ಎಂದು ಪ್ರತಿಪಾದಿಸಿದ ಪ್ರಭಾಕರ್ ಭಟ್, ನಮ್ಮ ಉದಾರತೆಯನ್ನು ನಮ್ಮ ದೌರ್ಬಲ್ಯ ಅಂದುಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದರು. ಯೇಸುವಿನ ಹೆಸರಿನಲ್ಲಿ‌ ಮೋಸ ಮಾಡುತ್ತಿದ್ದೀರಾ ಎಂದು ಕಿಡಿಕಾರಿದ ಕಲ್ಲಡ್ಕ, ಭೂಮಿಯ ಆಸೆ ತೋರಿಸಿ ಮತಾಂತರ ನಡೆದಿದೆ ಎಂದರು.

ಏಸು ಪ್ರತಿಮೆ ನಿರ್ಮಾಣ ವಿರೋಧಿಸಿ ಬಿಜೆಪಿಯಿಂದ 'ಕನಕಪುರ ಚಲೋ': ಶಾಂತಿ ಕಾಪಾಡಲು ಡಿಕೆಶಿ ಮನವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ