ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಆರಂಭವಾಗಿದೆ. ಲಕ್ಷ ಬೆಲೆ ರೂ. ಬಾಳುವ ದನಗಳು ಜಾತ್ರೆಯಲ್ಲಿ ಪಾಲ್ಗೊಂಡಿವೆ.
ರೈತರ ಸುಗ್ಗಿಹಬ್ಬ ಸಂಕ್ರಾಂತಿ ಆಚರಣೆಯ ಬಳಿಕ ಆರಂಭವಾಗುವ ಮೊದಲ ಜಾತ್ರೆಯಾಗಿದ್ದು, ತಮ್ಮ ರಾಸುಗಳನ್ನು ಈ ಜಾತ್ರೆಗೆ ತರುವ ರೈತರು ಬೇಡವಾದ ಜಾನುವಾರುಗಳನ್ನು ಮಾರಾಟ ಮಾಡಿ ಮುಂದಿನ ಮುಂಗಾರಿನಲ್ಲಿ ತಮಗೆ ಬೇಸಾಯ ಮಾಡಲು ಬೇಕಾದ ಉತ್ತಮ ರಾಸುಗಳನ್ನು ಕೊಂಡುಕೊಳ್ಳುವುದು ಇಲ್ಲಿನ ರೈತರ ವಾಡಿಕೆ.
ಈ ಭಾಗದಲ್ಲಿ ಐಯ್ಯನಗುಡಿ ಜಾತ್ರೆ ಎಂದೇ ಜನರ ಮನದಲ್ಲಿ ಹಾಸು ಹೊಕ್ಕಾಗಿದ್ದು, ಹಿಂದಿನಿಂದಲೂ ಪ್ರತಿ ವರ್ಷ ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ. ಆದರೆ ಹತ್ತು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ರೈತರು ರಾಸುಗಳನ್ನು ಸಾಕುವುದನ್ನು ಬಿಟ್ಟಿದ್ದಾರೆ. ಆದರೂ ಕಡಿಮೆ ಪ್ರಮಾಣದಲ್ಲಿ ಇಂದಿನಿಂದ ರಾಸುಗಳು ಬಂದು ಸೇರುತ್ತಿದ್ದು, ಇದರಿಂದ ಜಾತ್ರೆ ಕಳೆಕಟ್ಟಿದೆ. ದನಗಳ ವ್ಯಾಪಾರವೂ ಭರದಿಂದ ಸಾಗಿದೆ.
ಅಯ್ಯನಗುಡಿ ಜಾತ್ರೆ: ಮೈಸೂರು ಭಾಗದಲ್ಲಿ ಹೆಸರುವಾಗಿರುವ ಇಲ್ಲಿಯ ಅಯ್ಯನಗುಡಿ ಜಾತ್ರೆ ರಾಜ್ಯದಲ್ಲಿ ವರ್ಷದ ಮೊದಲ ಜಾತ್ರೆಯಾಗಿದೆ. ಜತೆಗೆ ಸಂಕ್ರಾಂತಿ ಹಬ್ಬದಂದೇ ಆರಂಭಗೊಳ್ಳುವ ದನಗಳ ಶೃಂಗಾರಭರಿತವಾಗಿ ಶ್ರೀಕೆಂಗಲ್ ಆಂಜನೇಯಸ್ವಾಮಿ ಜಾತ್ರೆಗೆ ಬರಲಿರುವುದು ಇಲ್ಲಿನ ವಿಶೇಷ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ಸಾರಿ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮೊದಲ ದಿನದ ವ್ಯಾಪಾರ ಸಲ್ಪ ಮಟ್ಟಿಗೆ ಕ್ಷೀಣಿಸಿದರೂ ಭರಾಟೆ ಕೊಂಡುಕೊಳ್ಳುವ ನಿಟ್ಟಿನಲ್ಲಿದೆ.
ತಮಟೆ ಕುಣಿತದ ಮೆರವಣಿಗೆ: ಜಾತ್ರೆಗೆ ತಮ್ಮ ರಾಸುಗಳನ್ನು ಕರೆತರುವ ರೈತರು ಅತ್ಯುತ್ತಮ ಜೋಡಿಗಳನ್ನು ವಾಹನ ಮುಂದೆ ಮೈಕ್ ಹಾಕಿ ತಮಟೆ ವಾದ್ಯಗಳು, ಪೂಜಾ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆ ತರುತ್ತಿದ್ದಾರೆ. ಕೆಲವರು ಪೆಂಡಾಲ್ ಹಾಕಿಸಿ ತಮ್ಮ ಎತ್ತುಗಳನ್ನು ಅದರ ಕೆಳಗೆ ಕಟ್ಟಿ, ವಿಶೇಷ ಆಕರ್ಷಣೆಯ ಮಾಡಿಸಿದ್ದಾರೆ. ಇಂದಿನ ಜಾತ್ರೆಯಲ್ಲಿ ಚನ್ನಪಟ್ಟಣದ ಮೆಣಸಿಗನಹಳ್ಳಿ ಸೋಮಣ್ಣ, ಮಂಗಳಾವಾರಪೇಟೆಯ ದೊಡ್ಡಯ್ಯ ಮತ್ತು ಇನ್ನಿತರರ ಜೋಡಿ ಎತ್ತುಗಳು ಮೂರ ರಿಂದ ನಾಲ್ಕು ಲಕ್ಷ ರೂ. ಬೆಲೆ ಬಾಳುತಿದ್ದು, ಮೆರವಣೆಗೆ ಮೂಲಕ ಜಾತ್ರೆಗೆ ಆಗಮಿಸಿವೆ.
ಖರೀದಿ ಭರಾಟೆ: ಈ ಭಾಗದಲ್ಲಿ ಜನ-ಜಾನುವಾರುಗಳ ಅತಿದೊಡ್ಡ ಜಾತ್ರೆಯಾಗಿರುವ ಇಲ್ಲಿಯ ಜಾತ್ರೆಯಲ್ಲಿ ಚನ್ನಪಟ್ಟಣದಿಂದ ಜಾನಪದಲೋಕದ ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಕಳೆಕಟ್ಟುತ್ತಿದ್ದ ಜಾನುವಾರುಗಳು ತೀರ ಕಡಿಮೆಯಾಗಿದ್ದು, ಈ ಬಾರಿ ದೇವಾಲಯದ ಮುಂಭಾಗ ಮತ್ತು ಎಡಬಲಭಾಗದ ವಿಶಾಲ ಪ್ರದೇಶವನ್ನು ಮಾತ್ರ ಆಶ್ರಯಸಿವೆ. ಅಲ್ಲಲ್ಲಿ ಗುಂಪುಗುಂಪಾಗಿ ಜಮಾಯಿಸಿದ್ದು, ಎತ್ತು-ಹಸುಕರುಗಳನ್ನು ಕೊಳ್ಳುವ ಭರಾಟೆಯ ನಡುವೆ ಭರದಿಂದಲೇ ನಡೆಯುತ್ತಿದ್ದು, ದೂರದೂರುಗಳಿಂದ ವ್ಯಾಪಾರಿಗಳು ಆಗಮಿಸಿ, ತಮಗೆ ಬೇಕಾದ ಜೋಡಿ ಎತ್ತುಗಳಿಗೆ, ಹಸುಗಳಿಗೆ, ಹಾಗು ಚಿಕ್ಕ ಕರುಗಳ ಜೋಡಿಗಳ ಹುಡುಕಾಟ ಆರಂಭಿಸಿದ್ದಾರೆ.
ಯಂತ್ರಗಳೊಂದೇ ಸಾಲದು: ತಂತ್ರಜ್ಞಾನ ಮತ್ತು ತಾಂತ್ರಿಕತೆಯ ಜತೆಗೆ ಆಧುನಿಕತೆ ಬೆಳೆದಂತೆಲ್ಲಾ ರೈತರು ತಮ್ಮ ಹಳೇ ಬೇಸಾಯ ಪದ್ಧತಿಯನ್ನು ಮರೆತು, ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದರೂ ಜಾನುವಾರುಗಳು ಅವಶ್ಯಕತೆ ಇದೆ. ಅವುಗಳ ಸಹಾಯದಿಂದ ರೈತ ಇಂದು ಉತ್ತಮ ಬೇಸಾಯ ಮಾಡುತ್ತಾ ಜತೆಯಲ್ಲಿ ಬದುಕುತ್ತ ಬಂದಿದ್ದು ಆ ನಿಟ್ಟಿನಲ್ಲಿ ಅವುಗಳನ್ನು ಉಳಿಸುವಲ್ಲಿ ಇಂತಹ ಜಾತ್ರೆಯಲ್ಲಿ ಉತ್ತಮ ತಳಿಯ ರಾಸುಗಳು ಕಣ್ಣುಕೂರೈಸುತ್ತಿವೆ. ಈ ಬಗ್ಗೆ ರೈತ ಮೆಣಸಿಗನಹಳ್ಳಿ ಸೋಮಣ್ಣ ಎಂಬುವರನ್ನು ಪ್ರಶ್ನಿಸಿದಾಗ, ''ದೇಶದಲ್ಲಿ ಆಧುನೀಕತೆಯ ಯಾವ ಯಂತ್ರೋಪಕರಣಗಳು ಬಂದರೂ ಸಹ ರೈತರ ಜೀವನಾಡಿಯಾಗಿರುವ ಜಾನುವಾರುಗಳನ್ನು ಸರಿಗಟ್ಟಲು ಸಾಧ್ಯವಿಲ್ಲ,'' ಎಂದು ವಿವರಿಸಿದರು.
ಟವಲು ಮುಚ್ಚಿ ವ್ಯಾಪಾರ: ರೈತರು ಮತ್ತು ದಲ್ಲಾಳಿಗಳು ತಮ್ಮ ರಾಸುಗಳನ್ನು ಟವಲು ಒಳಗಡೆಯಿಂದ ವ್ಯಾಪಾರ ಮಾಡುವ ತಂತ್ರಗಾರಿಕೆ ಜಾತ್ರೆಯಲ್ಲಿ ನಡೆಯಲಿದ್ದು, ಕೊಡುವ ಮತ್ತು ಕೊಳ್ಳುವರು ಬಹಿರಂಗವಾಗಿ ತಮ್ಮ ರಾಸುಗಳಿಗೆ ಬೆಲೆ ನಿಗದಿ ಮಾಡದವರು ಟವಲ್ ಮೂಲಕ ವ್ಯಾಪಾರ ಮಾಡುತ್ತಾರೆ. ಇದು ಬಲ್ಲ ರೈತರಿಗೆ ಮಾತ್ರ ತಿಳಿಯುತ್ತದೆ. ಬೆರಳು ತುದಿಯಲ್ಲಿ ಹತ್ತು ಸಾವಿರ. ಲಕ್ಷ ದವರಗೂ ಲೆಕ್ಕಚಾರ ಹಾಕುತ್ತಾರೆ.
ಹತ್ತಾರು ವರ್ಷಗಳಿಂದ ಸಕಾಲಕ್ಕೆ ಮಳೆ ಇಲ್ಲದೆ ಭೂಮಿ ಬರಡಾಗಿ ರೈತರು ಬೇಸಾಯ ಬಿಟ್ಟು ಬದುಕಲು ಹೊಸ ಮಾರ್ಗ ಕಂಡುಕೊಂಡು ರೇಷ್ಮೆ ಮತ್ತು ಹೈನುಗಾರಿಕೆ ಮಾಡುತ್ತಿದ್ದು, ಇದರಿಂದ ನಾಟಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಜತೆಗೆ ಬೇಸಾಯದ ಕೆಲಸಕ್ಕೆ ಕೆಲಸಗಾರರ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ರೈತರು ಆಧುನಿಕ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ ಹೊರತು ಬೇರೆ ಕಾರಣವಿಲ್ಲ, ಜತೆಗೆ ಟ್ರ್ಯಾಕ್ಟರ್ನ ಕೂಲಿಯೂ ಅಧಿಕವಾಗಿದೆ. ನಮಗೆ ಹಳೇ ಬೇಸಾಯ ಪದ್ಧತಿಗೆ ಜಾನುವಾರುಗಳ ಅವಶ್ಯಕತೆ ಇದೆ. ಜಾನುವಾರುಗಳಿಗೆ ನಮ್ಮದು ತಾಯಿ-ಮಗುವಿನ ಬಾಂಧವ್ಯ ಎಂದು ರೈತ ವಿರುಪಸಂದ್ರ ಪುಟ್ಟಸ್ವಾಮಿ ತಿಳಿಸುತ್ತಾರೆ.
ಮೊದಲು ದಿನದ ವ್ಯಾಪಾರ ಪರವಾಗಿಲ್ಲ. ಮೇಲುಕೊಟೆ ಕಡೆಯವರು ವ್ಯಾಪಾರ ಮಾಡುತ್ತಿದ್ದು, ಜೋಡಿ ಎಳೆ ಕರುಗಳಿಗೆ 30 ರಿಂದ 50 ಸಾವಿರ ರೂ. ನಡೆಯುತ್ತಿದೆ. ನಮ್ಮ ರಾಸುಗಳಿಗೆ ಹೆಚ್ಚು ವ್ಯಾಪಾರವಾಗಬೇಕಾದರೆ ಕಚ್ಚೆಹಾಕು ಜನ ಬರಬೇಕು ಎನ್ನುತ್ತಾರೆ ರೈತರು.
ಎಲ್ಲಿಲ್ಲಿಂದ ಆಗಮನ: ಜಾತ್ರೆಯಲ್ಲಿ ತುಮಕೂರು, ಮದ್ದೂರು, ಕುಣಿಗಲ್, ದೊಡ್ಡಬಳ್ಳಾಪುರ, ನೆಲಮಂಗಲ, ಕೋಲಾರ ರಾಮನಗರ, ಕನಕಪುರ, ಮಾಗಡಿ, ಆನೇಕಲ್ ತಾಲೂಕುಗಳಿಂದಲೂ ರೈತರು ಆಗಮಿಸಿದ್ದು, ಒಟ್ಟಾರೆ ವರ್ಷದಿಂದ ವರ್ಷಕ್ಕೆ ತನ್ನ ಕಳೆಕಳೆದುಕೊಳ್ಳುತ್ತಿದ್ದ ಅಯ್ಯನಗುಡಿ ಜಾತ್ರೆ ಈ ಬಾರಿ ರಾಜ್ಯದಲ್ಲಿ ಬಂದ ಅಲ್ಪ-ಸ್ವಲ್ಪ ಮಳೆಯ ಕರುಣೆಯಿಂದ ಜಾನುವಾರುಗಳ ಸಂಖ್ಯೆ ಹೆಚ್ಚಾಗಿ ಜಾತ್ರೆ ಕಳೆಕಟ್ಟಿದ್ದು ವಿಶೇಷ ಆಕರ್ಷಣೆಯಾಗಿದೆ.
ಹಗ್ಗದ ವ್ಯಾಪಾರ ಜೋರು: ಜಾತ್ರೆಗೆ ಬಂದಿದ್ದ ರೈತರು ತಮಗೆ ಇಷ್ಟವಾದ ಚಾವಟಿ, ಹಗ್ಗ ಪ್ಲಾಸ್ಟಿಕ್ ಹಗ್ಗ ಜತೆಗೆ ಮುಂಗಾರಿಗೆ ಅವಶ್ಯಕತೆ ಇರುವ ಉಳುಮೆ ಮಾಡುವ ಹಗ್ಗ ಖರೀದಿ ಮುಗಿಬಿದ್ದಿರುವುದು ಜಾತ್ರೆಯಲ್ಲಿ ಕಂಡು ಬಂತು.
ರೈತರ ಸುಗ್ಗಿಹಬ್ಬ ಸಂಕ್ರಾಂತಿ ಆಚರಣೆಯ ಬಳಿಕ ಆರಂಭವಾಗುವ ಮೊದಲ ಜಾತ್ರೆಯಾಗಿದ್ದು, ತಮ್ಮ ರಾಸುಗಳನ್ನು ಈ ಜಾತ್ರೆಗೆ ತರುವ ರೈತರು ಬೇಡವಾದ ಜಾನುವಾರುಗಳನ್ನು ಮಾರಾಟ ಮಾಡಿ ಮುಂದಿನ ಮುಂಗಾರಿನಲ್ಲಿ ತಮಗೆ ಬೇಸಾಯ ಮಾಡಲು ಬೇಕಾದ ಉತ್ತಮ ರಾಸುಗಳನ್ನು ಕೊಂಡುಕೊಳ್ಳುವುದು ಇಲ್ಲಿನ ರೈತರ ವಾಡಿಕೆ.
ಈ ಭಾಗದಲ್ಲಿ ಐಯ್ಯನಗುಡಿ ಜಾತ್ರೆ ಎಂದೇ ಜನರ ಮನದಲ್ಲಿ ಹಾಸು ಹೊಕ್ಕಾಗಿದ್ದು, ಹಿಂದಿನಿಂದಲೂ ಪ್ರತಿ ವರ್ಷ ವೈಭವಯುತವಾಗಿ ನಡೆದುಕೊಂಡು ಬರುತ್ತಿದೆ. ಆದರೆ ಹತ್ತು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ರೈತರು ರಾಸುಗಳನ್ನು ಸಾಕುವುದನ್ನು ಬಿಟ್ಟಿದ್ದಾರೆ. ಆದರೂ ಕಡಿಮೆ ಪ್ರಮಾಣದಲ್ಲಿ ಇಂದಿನಿಂದ ರಾಸುಗಳು ಬಂದು ಸೇರುತ್ತಿದ್ದು, ಇದರಿಂದ ಜಾತ್ರೆ ಕಳೆಕಟ್ಟಿದೆ. ದನಗಳ ವ್ಯಾಪಾರವೂ ಭರದಿಂದ ಸಾಗಿದೆ.
ಅಯ್ಯನಗುಡಿ ಜಾತ್ರೆ: ಮೈಸೂರು ಭಾಗದಲ್ಲಿ ಹೆಸರುವಾಗಿರುವ ಇಲ್ಲಿಯ ಅಯ್ಯನಗುಡಿ ಜಾತ್ರೆ ರಾಜ್ಯದಲ್ಲಿ ವರ್ಷದ ಮೊದಲ ಜಾತ್ರೆಯಾಗಿದೆ. ಜತೆಗೆ ಸಂಕ್ರಾಂತಿ ಹಬ್ಬದಂದೇ ಆರಂಭಗೊಳ್ಳುವ ದನಗಳ ಶೃಂಗಾರಭರಿತವಾಗಿ ಶ್ರೀಕೆಂಗಲ್ ಆಂಜನೇಯಸ್ವಾಮಿ ಜಾತ್ರೆಗೆ ಬರಲಿರುವುದು ಇಲ್ಲಿನ ವಿಶೇಷ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ಸಾರಿ ಜಾನುವಾರುಗಳು ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮೊದಲ ದಿನದ ವ್ಯಾಪಾರ ಸಲ್ಪ ಮಟ್ಟಿಗೆ ಕ್ಷೀಣಿಸಿದರೂ ಭರಾಟೆ ಕೊಂಡುಕೊಳ್ಳುವ ನಿಟ್ಟಿನಲ್ಲಿದೆ.
ತಮಟೆ ಕುಣಿತದ ಮೆರವಣಿಗೆ: ಜಾತ್ರೆಗೆ ತಮ್ಮ ರಾಸುಗಳನ್ನು ಕರೆತರುವ ರೈತರು ಅತ್ಯುತ್ತಮ ಜೋಡಿಗಳನ್ನು ವಾಹನ ಮುಂದೆ ಮೈಕ್ ಹಾಕಿ ತಮಟೆ ವಾದ್ಯಗಳು, ಪೂಜಾ ಕುಣಿತದೊಂದಿಗೆ ಮೆರವಣಿಗೆಯಲ್ಲಿ ಕರೆ ತರುತ್ತಿದ್ದಾರೆ. ಕೆಲವರು ಪೆಂಡಾಲ್ ಹಾಕಿಸಿ ತಮ್ಮ ಎತ್ತುಗಳನ್ನು ಅದರ ಕೆಳಗೆ ಕಟ್ಟಿ, ವಿಶೇಷ ಆಕರ್ಷಣೆಯ ಮಾಡಿಸಿದ್ದಾರೆ. ಇಂದಿನ ಜಾತ್ರೆಯಲ್ಲಿ ಚನ್ನಪಟ್ಟಣದ ಮೆಣಸಿಗನಹಳ್ಳಿ ಸೋಮಣ್ಣ, ಮಂಗಳಾವಾರಪೇಟೆಯ ದೊಡ್ಡಯ್ಯ ಮತ್ತು ಇನ್ನಿತರರ ಜೋಡಿ ಎತ್ತುಗಳು ಮೂರ ರಿಂದ ನಾಲ್ಕು ಲಕ್ಷ ರೂ. ಬೆಲೆ ಬಾಳುತಿದ್ದು, ಮೆರವಣೆಗೆ ಮೂಲಕ ಜಾತ್ರೆಗೆ ಆಗಮಿಸಿವೆ.
ಖರೀದಿ ಭರಾಟೆ: ಈ ಭಾಗದಲ್ಲಿ ಜನ-ಜಾನುವಾರುಗಳ ಅತಿದೊಡ್ಡ ಜಾತ್ರೆಯಾಗಿರುವ ಇಲ್ಲಿಯ ಜಾತ್ರೆಯಲ್ಲಿ ಚನ್ನಪಟ್ಟಣದಿಂದ ಜಾನಪದಲೋಕದ ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಕಳೆಕಟ್ಟುತ್ತಿದ್ದ ಜಾನುವಾರುಗಳು ತೀರ ಕಡಿಮೆಯಾಗಿದ್ದು, ಈ ಬಾರಿ ದೇವಾಲಯದ ಮುಂಭಾಗ ಮತ್ತು ಎಡಬಲಭಾಗದ ವಿಶಾಲ ಪ್ರದೇಶವನ್ನು ಮಾತ್ರ ಆಶ್ರಯಸಿವೆ. ಅಲ್ಲಲ್ಲಿ ಗುಂಪುಗುಂಪಾಗಿ ಜಮಾಯಿಸಿದ್ದು, ಎತ್ತು-ಹಸುಕರುಗಳನ್ನು ಕೊಳ್ಳುವ ಭರಾಟೆಯ ನಡುವೆ ಭರದಿಂದಲೇ ನಡೆಯುತ್ತಿದ್ದು, ದೂರದೂರುಗಳಿಂದ ವ್ಯಾಪಾರಿಗಳು ಆಗಮಿಸಿ, ತಮಗೆ ಬೇಕಾದ ಜೋಡಿ ಎತ್ತುಗಳಿಗೆ, ಹಸುಗಳಿಗೆ, ಹಾಗು ಚಿಕ್ಕ ಕರುಗಳ ಜೋಡಿಗಳ ಹುಡುಕಾಟ ಆರಂಭಿಸಿದ್ದಾರೆ.
ಯಂತ್ರಗಳೊಂದೇ ಸಾಲದು: ತಂತ್ರಜ್ಞಾನ ಮತ್ತು ತಾಂತ್ರಿಕತೆಯ ಜತೆಗೆ ಆಧುನಿಕತೆ ಬೆಳೆದಂತೆಲ್ಲಾ ರೈತರು ತಮ್ಮ ಹಳೇ ಬೇಸಾಯ ಪದ್ಧತಿಯನ್ನು ಮರೆತು, ಕೃಷಿ ಚಟುವಟಿಕೆಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದರೂ ಜಾನುವಾರುಗಳು ಅವಶ್ಯಕತೆ ಇದೆ. ಅವುಗಳ ಸಹಾಯದಿಂದ ರೈತ ಇಂದು ಉತ್ತಮ ಬೇಸಾಯ ಮಾಡುತ್ತಾ ಜತೆಯಲ್ಲಿ ಬದುಕುತ್ತ ಬಂದಿದ್ದು ಆ ನಿಟ್ಟಿನಲ್ಲಿ ಅವುಗಳನ್ನು ಉಳಿಸುವಲ್ಲಿ ಇಂತಹ ಜಾತ್ರೆಯಲ್ಲಿ ಉತ್ತಮ ತಳಿಯ ರಾಸುಗಳು ಕಣ್ಣುಕೂರೈಸುತ್ತಿವೆ. ಈ ಬಗ್ಗೆ ರೈತ ಮೆಣಸಿಗನಹಳ್ಳಿ ಸೋಮಣ್ಣ ಎಂಬುವರನ್ನು ಪ್ರಶ್ನಿಸಿದಾಗ, ''ದೇಶದಲ್ಲಿ ಆಧುನೀಕತೆಯ ಯಾವ ಯಂತ್ರೋಪಕರಣಗಳು ಬಂದರೂ ಸಹ ರೈತರ ಜೀವನಾಡಿಯಾಗಿರುವ ಜಾನುವಾರುಗಳನ್ನು ಸರಿಗಟ್ಟಲು ಸಾಧ್ಯವಿಲ್ಲ,'' ಎಂದು ವಿವರಿಸಿದರು.
ಟವಲು ಮುಚ್ಚಿ ವ್ಯಾಪಾರ: ರೈತರು ಮತ್ತು ದಲ್ಲಾಳಿಗಳು ತಮ್ಮ ರಾಸುಗಳನ್ನು ಟವಲು ಒಳಗಡೆಯಿಂದ ವ್ಯಾಪಾರ ಮಾಡುವ ತಂತ್ರಗಾರಿಕೆ ಜಾತ್ರೆಯಲ್ಲಿ ನಡೆಯಲಿದ್ದು, ಕೊಡುವ ಮತ್ತು ಕೊಳ್ಳುವರು ಬಹಿರಂಗವಾಗಿ ತಮ್ಮ ರಾಸುಗಳಿಗೆ ಬೆಲೆ ನಿಗದಿ ಮಾಡದವರು ಟವಲ್ ಮೂಲಕ ವ್ಯಾಪಾರ ಮಾಡುತ್ತಾರೆ. ಇದು ಬಲ್ಲ ರೈತರಿಗೆ ಮಾತ್ರ ತಿಳಿಯುತ್ತದೆ. ಬೆರಳು ತುದಿಯಲ್ಲಿ ಹತ್ತು ಸಾವಿರ. ಲಕ್ಷ ದವರಗೂ ಲೆಕ್ಕಚಾರ ಹಾಕುತ್ತಾರೆ.
ಹತ್ತಾರು ವರ್ಷಗಳಿಂದ ಸಕಾಲಕ್ಕೆ ಮಳೆ ಇಲ್ಲದೆ ಭೂಮಿ ಬರಡಾಗಿ ರೈತರು ಬೇಸಾಯ ಬಿಟ್ಟು ಬದುಕಲು ಹೊಸ ಮಾರ್ಗ ಕಂಡುಕೊಂಡು ರೇಷ್ಮೆ ಮತ್ತು ಹೈನುಗಾರಿಕೆ ಮಾಡುತ್ತಿದ್ದು, ಇದರಿಂದ ನಾಟಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಜತೆಗೆ ಬೇಸಾಯದ ಕೆಲಸಕ್ಕೆ ಕೆಲಸಗಾರರ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ರೈತರು ಆಧುನಿಕ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ ಹೊರತು ಬೇರೆ ಕಾರಣವಿಲ್ಲ, ಜತೆಗೆ ಟ್ರ್ಯಾಕ್ಟರ್ನ ಕೂಲಿಯೂ ಅಧಿಕವಾಗಿದೆ. ನಮಗೆ ಹಳೇ ಬೇಸಾಯ ಪದ್ಧತಿಗೆ ಜಾನುವಾರುಗಳ ಅವಶ್ಯಕತೆ ಇದೆ. ಜಾನುವಾರುಗಳಿಗೆ ನಮ್ಮದು ತಾಯಿ-ಮಗುವಿನ ಬಾಂಧವ್ಯ ಎಂದು ರೈತ ವಿರುಪಸಂದ್ರ ಪುಟ್ಟಸ್ವಾಮಿ ತಿಳಿಸುತ್ತಾರೆ.
ಮೊದಲು ದಿನದ ವ್ಯಾಪಾರ ಪರವಾಗಿಲ್ಲ. ಮೇಲುಕೊಟೆ ಕಡೆಯವರು ವ್ಯಾಪಾರ ಮಾಡುತ್ತಿದ್ದು, ಜೋಡಿ ಎಳೆ ಕರುಗಳಿಗೆ 30 ರಿಂದ 50 ಸಾವಿರ ರೂ. ನಡೆಯುತ್ತಿದೆ. ನಮ್ಮ ರಾಸುಗಳಿಗೆ ಹೆಚ್ಚು ವ್ಯಾಪಾರವಾಗಬೇಕಾದರೆ ಕಚ್ಚೆಹಾಕು ಜನ ಬರಬೇಕು ಎನ್ನುತ್ತಾರೆ ರೈತರು.
ಎಲ್ಲಿಲ್ಲಿಂದ ಆಗಮನ: ಜಾತ್ರೆಯಲ್ಲಿ ತುಮಕೂರು, ಮದ್ದೂರು, ಕುಣಿಗಲ್, ದೊಡ್ಡಬಳ್ಳಾಪುರ, ನೆಲಮಂಗಲ, ಕೋಲಾರ ರಾಮನಗರ, ಕನಕಪುರ, ಮಾಗಡಿ, ಆನೇಕಲ್ ತಾಲೂಕುಗಳಿಂದಲೂ ರೈತರು ಆಗಮಿಸಿದ್ದು, ಒಟ್ಟಾರೆ ವರ್ಷದಿಂದ ವರ್ಷಕ್ಕೆ ತನ್ನ ಕಳೆಕಳೆದುಕೊಳ್ಳುತ್ತಿದ್ದ ಅಯ್ಯನಗುಡಿ ಜಾತ್ರೆ ಈ ಬಾರಿ ರಾಜ್ಯದಲ್ಲಿ ಬಂದ ಅಲ್ಪ-ಸ್ವಲ್ಪ ಮಳೆಯ ಕರುಣೆಯಿಂದ ಜಾನುವಾರುಗಳ ಸಂಖ್ಯೆ ಹೆಚ್ಚಾಗಿ ಜಾತ್ರೆ ಕಳೆಕಟ್ಟಿದ್ದು ವಿಶೇಷ ಆಕರ್ಷಣೆಯಾಗಿದೆ.
ಹಗ್ಗದ ವ್ಯಾಪಾರ ಜೋರು: ಜಾತ್ರೆಗೆ ಬಂದಿದ್ದ ರೈತರು ತಮಗೆ ಇಷ್ಟವಾದ ಚಾವಟಿ, ಹಗ್ಗ ಪ್ಲಾಸ್ಟಿಕ್ ಹಗ್ಗ ಜತೆಗೆ ಮುಂಗಾರಿಗೆ ಅವಶ್ಯಕತೆ ಇರುವ ಉಳುಮೆ ಮಾಡುವ ಹಗ್ಗ ಖರೀದಿ ಮುಗಿಬಿದ್ದಿರುವುದು ಜಾತ್ರೆಯಲ್ಲಿ ಕಂಡು ಬಂತು.