ಆ್ಯಪ್ನಗರ

ಜಮೀನಿನಲ್ಲಿ ಬೆಳೆ ಬದಲು ಚಿನ್ನ ! ಡಿಕೆಶಿಗೆ ಇಡಿಯಿಂದ ಹೀಗೆಲ್ಲಾ ಪ್ರಶ್ನೆ ಅಂದ್ರು ಎಚ್‌ಡಿಕೆ

ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಜಮೀನಿನಲ್ಲಿ ಬೆಳೆ ಬೆಳೆಸುವುದರ ಬದಲಾಗಿ ಚಿನ್ನವನ್ನು ಬೆಳೆಯುತ್ತೀರಾ ಎಂದು ತನಿಖೆಯ ವೇಳೆ ಪ್ರಶ್ನೆ ಮಾಡಿದ್ದಾರೆಂದು ಎಚ್.ಡಿ ಕುಮಾರಸ್ವಾಮಿ ಅಂದಿದ್ದಾರೆ.

Vijaya Karnataka Web 20 Sep 2019, 4:24 pm
ರಾಮನಗರ: ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್‌ಗೆ ಜಮೀನಿನಲ್ಲಿ ಚಿನ್ನ ಬೆಳೆದಿದ್ದೀರಾ ಎಂದು ಇಡಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆಂದು ಎಚ್.ಡಿ ಕುಮಾರಸ್ವಾಮಿ ಅಂದಿದ್ದಾರೆ.
Vijaya Karnataka Web hdk


ರಾಮನಗರದ ಚೆನ್ನಪಟ್ಟಣದಲ್ಲಿ ಮಾತನಾಡಿದ ಎಚ್.ಡಿ.ಕೆ ಇಡಿ ಹಾಗೂ ಐಟಿ ಅಧಿಕಾರಿಗಳು ಡಿಕೆಶಿ ತನಿಖೆಯ ಸಂದರ್ಭದಲ್ಲಿ ಅವರ ಜಮೀನಿನಲ್ಲಿ ಬೆಳೆ ಬದಲಾಗಿ ಚಿನ್ನ ಬೆಳೆಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ ಅಂತ ಹೇಳಿದ್ರು. ಡಿಕೆಶಿ ಪರ ವಹಿಸಿ ಮಾತನಾಡಿದ ಕುಮಾರಸ್ವಾಮಿ ಡಿಕೆಶಿ ಕಳೆದ 25 ವರ್ಷಗಳಿಂದ ತೆರಿಗೆ ಕಟ್ಟುತಿದ್ದಾರೆ ಅಂದಿನಿಂದ ಈ ಕುರಿತಾಗಿ ಯಾಕೆ ಪ್ರಶ್ನೆ ಮಾಡಿಲ್ಲ ಎಂದ ಅವರು ತನಿಖಾ ಸಂಸ್ಥೆಗಳು ಪ್ರೋತ್ಸಾಹ ನೀಡುವುದರ ಜೊತೆಗೆ ಹಿಂಸೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಇಂಧನ ಇಲಾಖೆಯಲ್ಲಿ‌ ಭ್ರಷ್ಟಾಚಾರ ಆಗಿದೆ ಎಂದು ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದೆ. ಆದರೆ ಡಿಕೆಶಿ ನನ್ನ ಮಾತು ಕೇಳಲಿಲ್ಲ. ಆಗಲೇ ಕೇಳಿದಿದ್ದರೆ ಹೀಗೆಲ್ಲಾ ಆಗುತ್ತಿರಲ್ಲ ಎಂದ್ರು.

ಇದೇ ಸಂದರ್ಭದಲ್ಲಿ ಬಿಜೆಪಿ ಸರಕಾರದ ಆಯಸ್ಸು 2 ರಿಂದ 4 ತಿಂಗಳು ಎಂಬ ಕೋಡಿ ಮಠ ಸ್ವಾಮಿಗಳ ಹೇಳಿಕೆಗೆ, ನಾನೇನು ಜ್ಯೋತಿಷಿ ಅಲ್ಲ.
ಸರ್ಕಾರದ ನಡುವಳಿಕೆಗಳನ್ನ ನೋಡಿದ್ರೆ ಯಾವ ಸಮಯದಲ್ಲಿ ಬೇಕಾದ್ರು ಹೋಗುವಂತಿದೆ. ಎಲ್ಲದಕ್ಕೂ ಸಮಯ ಬರುತ್ತದೆ ಕಾದುನೋಡಿ ಎಂದರು.

ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಅಸಮಾಧಾನ ಕುರಿತಾಗಿ ಪ್ರತಿಕ್ರಿಯಿಸಿದ ಎಚ್.ಡಿ.ಕೆ ಮೈಸೂರಿನಲ್ಲಿ ನಡೆಯಲಿರುವ ಜೆಡಿಎಸ್ ಸಭೆಗೆ ಜಿಲ್ಲೆಯ ಎಲ್ಲಾ ನಾಯಕರಿಗೂ ಆಹ್ವಾನ ಮಾಡಲಾಗಿತ್ತು. ಅದರಂತೆ ಜಿ.ಟಿ.ದೇವೇಗೌಡ ಅವರಿಗೂ ಆಹ್ವಾನ ನೀಡಲಾಗಿದೆ
ಬರುವವರು ಬರುತ್ತಾರೆ ಎಂದ್ರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ