ಆ್ಯಪ್ನಗರ

ಕಾವೇರಿ ಕೊಳ್ಳದ ಗ್ರಾಮಗಳಲ್ಲಿ ನೆರೆಯ ಆತಂಕದ ಛಾಯೆ

ಸತತ ಮಳೆ ಇಲ್ಲದೆ ಬರಗಾಲ ಎದುರಿಸುತ್ತಿದ್ದ ಕಾವೇರಿ ಕಣಿವೆಗೆ ಭಾರೀ ಮಳೆ ನೀರು ಸಂಗ್ರಹವಾಗುತ್ತಿದ್ದು, ಕಾವೇರಿ ಮೈದುಂಬಿ ಹರಿಯುತ್ತಿದೆ. ಕಾವೇರಿ ಕೊಳ್ಳದ ಗ್ರಾಮಗಳಲ್ಲಿ ನೆರೆಯ ಆತಂಕ ಮನೆ ಮಾಡಿದೆ. ಪ್ರಸಿದ್ಧ ಪ್ರವಾಸಿ ತಾಣ ಸಂಗಮ ಮೇಕೆದಾಟಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Vijaya Karnataka 12 Aug 2019, 3:24 pm
ಕನಕಪುರ: ಸತತ ಮಳೆ ಇಲ್ಲದೆ ಬರಗಾಲ ಎದುರಿಸುತ್ತಿದ್ದ ಕಾವೇರಿ ಕಣಿವೆಗೆ ಭಾರೀ ಮಳೆ ನೀರು ಸಂಗ್ರಹವಾಗುತ್ತಿದ್ದು, ಕಾವೇರಿ ಮೈದುಂಬಿ ಹರಿಯುತ್ತಿದೆ. ಕಾವೇರಿ ಕೊಳ್ಳದ ಗ್ರಾಮಗಳಲ್ಲಿ ನೆರೆಯ ಆತಂಕ ಮನೆ ಮಾಡಿದೆ. ಪ್ರಸಿದ್ಧ ಪ್ರವಾಸಿ ತಾಣ ಸಂಗಮ ಮೇಕೆದಾಟಿಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
Vijaya Karnataka Web kaveri river is overflow anxiety in neighborhood area
ಕಾವೇರಿ ಕೊಳ್ಳದ ಗ್ರಾಮಗಳಲ್ಲಿ ನೆರೆಯ ಆತಂಕದ ಛಾಯೆ


ಇಲ್ಲಿ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ನಿರ್ಬಂಧÜ ವಿಧಿಸಿರುವುದರಿಂದ ರಜೆಯನ್ನು ಕಳೆಯಲು ಬಂದ ಪ್ರವಾಸಿಗರಿಗೆ ನೆರೆಯ ಬೀತಿ ಸಂಕಷ್ಟ ತಂದೊಡ್ಡಿದೆ. ಕಾವೇರಿ ನದಿ ದಡದ ಸಂಗಮೇಶ್ವರ ದೇವಾಲಯದ ಸನಿಹಕ್ಕೆ ಬಂದಿರುವ ನೀರು ನಾಳೆ ದೇವಸ್ಥಾನವನ್ನು ಸುತ್ತುವರಿಯಲಿದೆ ಎನ್ನುವ ಭೀತಿ ಎದುರಾಗಿದೆ.

ಕೆಆರ್‌ಎಸ್‌ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದು ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದೆ. ನೀರು ಹೆಚ್ಚಾದರೆ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮೂರು ತಲೆಮಾರುಗಳಿಂದ ವಾಸಮಾಡಿದ್ದ ಸ್ಥಳವನ್ನು ಬಿಟ್ಟು ಹೋಗಬೇಕಾದ ಅನಿವಾರ್ಯತೆಯಲ್ಲಿ ಇಲ್ಲಿನ ಜನರಿದ್ದಾರೆ.

ಕಾವೇರಿ ನದಿಯಲ್ಲಿ ನೀರಿನ ರಭಸ ಹೆಚ್ಚಾದಂತೆ ಬೊಮ್ಮಸಂದ್ರ, ಸಂಗಮ, ಮತ್ತು ಮೇಕೆದಾಟಿವಿನಲ್ಲಿ ಇರುವ ಮೊಸಳೆಗಳು ಅರಣ್ಯ ಪ್ರದೇಶಗಳಿಗೆ ಲಗ್ಗೆ ಇಟ್ಟಿವೆ. ಇವುಗಳಿಂದ ಹೇಗೆ ರಕ್ಷ ಣೆ ಪಡೆಯಬೇಕು ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ ಇಲ್ಲಿನ ಜನರ ಸ್ಥಿತಿ.

ರಕ್ಷಣೆಯ ಅಭಯ: ಇಲ್ಲಿನ ವಾಸಿಗಳಿಗೆ ತಾಲೂಕು ಆಡಳಿತ ಸ್ಥಳಾಂತರಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಪುನರ್ವಸತಿ ಕೇಂದ್ರಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಅರಣ್ಯ ಮತ್ತು ಪೊಲೀಸ್‌ ಇಲಾಖೆ ಹಾಗೂ ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮುನಿಮಾರೇಗೌಡ ಸ್ಥಳದಲ್ಳೇ ಮೊಕ್ಕಾಂ ಹೂಡಿದ್ದು, ನೀರು ಗ್ರಾಮಕ್ಕೆ ಬಂದರೆ ಅಲ್ಲಿಂದ ಈ ಕುಟುಂಬಗಳನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲರು ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಬೊಮ್ಮಸಂದ್ರಕ್ಕೆ ತೆರಳುವ ಮಾರ್ಗದಲ್ಲಿಯೂ ಸಹ ನೀರು ಆವರಿಸಿದ್ದು, ರಸ್ತೆಯ ಸಂಪರ್ಕ ಕಡಿತಗೊಂಡಿದೆ.

40 ವರ್ಷಗಳ ಹಿಂದೆ ಇಂತಹ ಪ್ರವಾಹ: ಸುಮಾರು ಮೂರು ತಲೆಮಾರುಗಳು ಇಲ್ಲೇ ಕಳೆದಿರುವ ಇಲ್ಲಿನ ಜನ ದಟ್ಟಕಾಡಿನಲ್ಲಿ ವಾಸ ಮಾಡುತ್ತಿದ್ದು, ಎಂತಹ ಹುಚ್ಚು ಪ್ರವಾಹ ಬಂದರೂ ಇಲ್ಲಿಯ ವರೆಗೆ ನೀರು ಬಂದಿಲ್ಲ. ಸುಮಾರು 40 ವರ್ಷಗಳ ಹಿಂದೆ ಗ್ರಾಮದ ಸನಿಹಕ್ಕೆ ಬಂದ ನೀರು ಗ್ರಾಮದ ಪಕ್ಕದ ಹಳ್ಳದಲ್ಲಿ ಹರಿದು ಹೋಗಿತ್ತು. ಅದನ್ನು ಬಿಟ್ಟರೆ ಈ ವರೆಗೆ ಇಂತಹ ಪ್ರವಾಹ ಕಂಡಿರಲಿಲ್ಲ ಎನ್ನುತ್ತಾರೆ ಬೊಮ್ಮಸಂದ್ರದ ಜನತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ