ಆ್ಯಪ್ನಗರ

ಕಾಪೋರ್‍ರೇಷನ್‌ ಬ್ಯಾಂಕ್‌ ಸಂಸ್ಥಾಪಕ ಖಾನ್‌ ಬಹದ್ದೂರ್‌ ಅಬ್ದುಲ್‌ ಜಾಜಿ ಜಯಂತಿ

ಕಾಪೋರ್‍ರೇಷನ್‌ ಬ್ಯಾಂಕ್‌ ಜನಸಾಮಾನ್ಯರ ಹಾಗೂ ಬಡವರ ಆರ್ಥಿಕ ವೃದ್ಧಿಗೆ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿದೆ ಎಂದು ಮಾಗಡಿ ಕಾಪೋರ್‍ರೇಷನ್‌ ...

Vijaya Karnataka 15 Mar 2019, 5:00 am
ಮಾಗಡಿ: ಕಾಪೋರ್‍ರೇಷನ್‌ ಬ್ಯಾಂಕ್‌ ಜನಸಾಮಾನ್ಯರ ಹಾಗೂ ಬಡವರ ಆರ್ಥಿಕ ವೃದ್ಧಿಗೆ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿದೆ ಎಂದು ಮಾಗಡಿ ಕಾಪೋರ್‍ರೇಷನ್‌ ಬ್ಯಾಂಕ್‌ ವ್ಯವಸ್ಥಾಪಕ ಕೆ.ಸುಧೀಂದ್ರ ಅಭಿಪ್ರಾಯಪಟ್ಟರು.
Vijaya Karnataka Web khan bahadur abdul jaji jayanti founder of corporation bank
ಕಾಪೋರ್‍ರೇಷನ್‌ ಬ್ಯಾಂಕ್‌ ಸಂಸ್ಥಾಪಕ ಖಾನ್‌ ಬಹದ್ದೂರ್‌ ಅಬ್ದುಲ್‌ ಜಾಜಿ ಜಯಂತಿ


ಪಟ್ಟಣದ ಕಾಪೋರ್‍ರೇಷನ್‌ ಬ್ಯಾಂಕ್‌ ಸಂಸ್ಥಾಪಕ ಖಾನ್‌ ಬಹದ್ದೂರ್‌ ಅಬ್ದುಲ್‌ ಹಾಜಿ ಜಯಂತಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದರೂ ಸಹ ಅಲ್ಲಿ ಬ್ಯಾಂಕ್‌ ವ್ಯವಸ್ಥೆ ಇರಲಿಲ್ಲ. ಇಂತಹ ಸಮಯದಲ್ಲಿ ಬಹದ್ದೂರ್‌ ಹಾಜಿ 1906 ರಲ್ಲಿ ಉಡುಪಿಯಲ್ಲಿ ಬ್ಯಾಂಕ್‌ ಸ್ಥಾಪನೆ ಮಾಡುವ ಮೂಲಕ ಎಲ್ಲಾ ವರ್ಗದ ಜನ ಸಾಮಾನ್ಯರ ಹಾಗೂ ಬಡವರಿಗೆ ಆರ್ಥಿಕ ಶಕ್ತಿ ತುಂಬಿದರು. ಬಡವರ ಉದ್ದಾರ ನಮ್ಮ ಬ್ಯಾಂಕ್‌ನ ಗುರಿಯಾಗಿದೆ ಎಂದರು.

ಕಾಪೋರೇಷನ್‌ ಬ್ಯಾಂಕ್‌ ಸುಮಾರು 8 ಸಾವಿರ ಕ್ರಿಯಾ ಘಟಕಗಳು ಹಾಗೂ 2200 ಕ್ಕೂ ಹೆಚ್ಚು ಶಾಖೆಗಳನ್ನು ಹಾಗೂ 1800 ಎಟಿಎಂಗಳನ್ನು ಹೊಂದಿದೆ ಎಂದು ತಿಳಿಸಿದರು.

ಬ್ಯಾಂಕ್‌ ಸಹಾಯಕ ಅಭಿಜಿತ್‌ ಪಠೋತ್‌ ಮಾತನಾಡಿ, ಜೀವನದಲ್ಲಿ ಸಾಲವಿಲ್ಲದೆ ಬದುಕುವ ಮಂದಿ ಅತ್ಯಂತ ವಿರಳ. ಬ್ಯಾಂಕ್‌ಗಳಲ್ಲಿ ಪಡೆದ ಸಾಲ ಹಿಂದಿರುಗಿಸದೇ ಸಾಲ ಮನ್ನಾ ನಿರೀಕ್ಷ ಣೆಗಾಗಿ ಕುಳಿತವರೇ ಹೆಚ್ಚು ಮಂದಿ ಇದು ಬದಲಾಗಬೇಕು. ಜನಸಾಮಾನ್ಯರು ಸಾರ್ಥಕ ಬದುಕಿನ ಮುನ್ನಡೆಯಬೇಕಿದೆ ಎಂದು ತಿಳಿಸಿದರು.

ಬ್ಯಾಂಕ್‌ ಸಿಬ್ಬಂದಿ ಶ್ರೀನಿವಾಸ್‌, ವಿಷ್ಣುವರ್ಧನ್‌, ಸ್ಮಿತಾ, ಜಯರಾಂ, ಹನುಮಂತಪ್ಪ, ರೇಣುಕಮ್ಮ, ನಾಗರಾಜು, ಶಾಂತಮ್ಮ, ಲಕ್ಷ ್ಮಮ್ಮ, ಮಂಜಮ್ಮ, ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ