ಆ್ಯಪ್ನಗರ

ರೈತರ ಅಭ್ಯುದಯಕ್ಕೆ ಕೆಎಂಎಫ್‌ ಶ್ರಮ: ನಾಗರಾಜು

ಬೇರೆ ಕ್ಷೇತ್ರದಲ್ಲಿ ರೈತರು ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಹೈನುಗಾರಿಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಹಕಾರಿಯಾಗಿದ್ದು, ಜಿಲ್ಲೆಯ ರೈತರ ಅಭ್ಯುದಯಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಹೆಚ್ಚು ಶ್ರಮಿಸುತ್ತಿದೆ ಎಂದು ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು ಹೇಳಿದರು.

Vijaya Karnataka 27 Apr 2019, 5:00 am
ರಾಮನಗರ: ಬೇರೆ ಕ್ಷೇತ್ರದಲ್ಲಿ ರೈತರು ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಹೈನುಗಾರಿಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸಹಕಾರಿಯಾಗಿದ್ದು, ಜಿಲ್ಲೆಯ ರೈತರ ಅಭ್ಯುದಯಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಹೆಚ್ಚು ಶ್ರಮಿಸುತ್ತಿದೆ ಎಂದು ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು ಹೇಳಿದರು.
Vijaya Karnataka Web kmf efforts for farmers prosperity nagaraju
ರೈತರ ಅಭ್ಯುದಯಕ್ಕೆ ಕೆಎಂಎಫ್‌ ಶ್ರಮ: ನಾಗರಾಜು


ಚನ್ನಮಾನಹಳ್ಳಿ ಗ್ರಾಮದ ಹಾಲು ಉತ್ಪಾದಕ ರೈತರಿಗೆ ಬಮೂಲ್‌ ಯೋಜನೆಯಲ್ಲಿ ಮೃತಪಟ್ಟಿದ್ದ ಐದು ಜನ ಸದಸ್ಯರ ಕುಟುಂಬಸ್ಥರಿಗೆ ತಲಾ ಎರಡು ಲಕ್ಷ ರೂ.ಗಳಂತೆ ವಿತರಿಸಿ ಮಾತನಾಡಿ, ''ಹಾಲು ಮಹಾಮಂಡಳಿ, ಬೆಂಗಳೂರು ಹಾಲು ಒಕ್ಕೂಟಗಳು ಗ್ರಾಮೀಣ ಪ್ರದೇಶದ ಹಾಲು ಉತ್ಪಾದಕ ರೈತರಿಗೆ ಅನೇಕ ರೀತಿಯ ನೆರವು ಒದಗಿಸುತ್ತಿದೆ,'' ಎಂದು ಹೇಳಿದರು.

ಹಾಲು ಉತ್ಪನ್ನ ಘಟಕ:
''400 ಕೋಟಿ ವೆಚ್ಚದಲ್ಲಿ ಕೆಂಗಲ್‌ ಬಳಿ ಹಾಲಿನ ಪೌಡರ್‌ ಘಟಕ, ಕನಕಪುರ ಬಳಿ 600 ಕೋಟಿ ವೆಚ್ಚದಲ್ಲಿ ಹಾಲು ಉತ್ಪನ್ನ ಘಟಕ ನಿರ್ಮಿಸಲಾಗುತ್ತಿದೆ. ಇದರಿಂದ ನಂದಿನಿ ಹಾಲಿಗೆ ಉತ್ತಮ ಮಾರುಕಟ್ಟೆ ಸಿಗಲಿದ್ದು ಸ್ಥಳೀಯ ಹೈನುಗಾರಿಕೆ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ,'' ಎಂದು ಹೇಳಿದರು.

''ನೆರೆಯ ಆಂಧ್ರ ಪ್ರದೇಶದ ಹೈದರಾಬಾದ್‌ ಮಹಾರಾಷ್ಟ್ರದ ಮುಂಬೈನಲ್ಲಿ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲಾಗಿದೆ. ಇದರಿಂದ ಒಕ್ಕೂಟವು ಲಾಭದಲ್ಲಿ ಮೂಂಚೂಣಿಯಲ್ಲಿ ಕಾರ್ಯನಿರ್ವಸುತ್ತಿದೆ. ರೈತರಿಗೆ ಗುಣಮಟ್ಟದ ಪಶು ಆಹಾರ ದೊರೆಯುವಂತೆ ಮಾಡುವುದರ ಜತೆಗೆ ಉತ್ತಮ ಜಾನುವಾರು ತಳಿ ಅಭಿವೃದ್ಧಿಗೆ ಕೃತಕ ಗರ್ಭಧಾರಣೆ ಸಮನ್ಸ್‌ ಒಕ್ಕೂಟ ಸರಬರಾಜು ಮಾಡುತ್ತಿದೆ,'' ಎಂದು ಹೇಳಿದರು.

ಒಕ್ಕೂಟದಿಂದ ಧನ ಸಹಾಯ: ''ಪ್ರತಿ ಗ್ರಾಮ ಮಟ್ಟದಲ್ಲೂ ಹಾಲು ಉತ್ಪಾದಕ ಸಂಘಗಳಿಗೆ ಸ್ವಂತ ಕಟ್ಟಡ ಹೊಂದುವಂತೆ ಮಾಡಲು ಒಕ್ಕೂಟದಿಂದ ಧನ ಸಹಾಯ ನೀಡಲಾಗುತ್ತಿದೆ. ಹಾಲು ಉತ್ಪಾದಕ ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿ ಜಮೀನಿನಲ್ಲಿ ಹಾವು ಕಡಿತಕ್ಕೊಳಗಾಗಿ ಮರಣ ಹೊಂದಿದರೆ ಎರಡು ಲಕ್ಷ ಸಹಾಯಧನವಾಗಿ ಒಕ್ಕೂಟ ನೀಡುತ್ತಿದೆ,'' ಎಂದು ಹೇಳಿದರು.

ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಶಿವರಾಮಯ್ಯ, ಡೇರಿ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಪುಟ್ಟಹೊನ್ನಯ್ಯ, ಉಮೇಶ್‌, ಶ್ರೀನಿವಾಸಮೂರ್ತಿ ಫಲಾನುಭವಿಗಳಾದ ಕೆಂಪಮ್ಮ, ನಾಗರತ್ನಮ್ಮ, ಚಿನ್ನಸ್ವಾಮಿ, ಯಶವಂತಕುಮಾರ್‌, ಲಿಂಗೇಶ್‌ ಹಾಲು ಪರೀಕ್ಷ ಸಿ.ಪಿ. ಕುಮಾರ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ