ಆ್ಯಪ್ನಗರ

ಮಾದಕ ವಸ್ತುಗಳ ನಶೆ ಅಪಾಯಕಾರಿ

ಒಮ್ಮೆ ಜೈಲುವಾಸ ಅನುಭವಿಸಿದವರು ಪುನಃ ಜೈಲಿನ ಕಡೆ ಹೆಜ್ಜೆ ಹಾಕಬಾರದು ಎಂಬುದರ ಕಡೆ ಚಿಂತನೆ ಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಪ್ರಕಾಶ್‌ ಎಲ್‌. ನಾಡಿಗೇರ್‌ ಹೇಳಿದರು.

Vijaya Karnataka 21 Jul 2018, 4:06 pm
ರಾಮನಗರ: ಒಮ್ಮೆ ಜೈಲುವಾಸ ಅನುಭವಿಸಿದವರು ಪುನಃ ಜೈಲಿನ ಕಡೆ ಹೆಜ್ಜೆ ಹಾಕಬಾರದು ಎಂಬುದರ ಕಡೆ ಚಿಂತನೆ ಹರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಪ್ರಕಾಶ್‌ ಎಲ್‌. ನಾಡಿಗೇರ್‌ ಹೇಳಿದರು.
Vijaya Karnataka Web la prdida de medicamentos es peligrosa
ಮಾದಕ ವಸ್ತುಗಳ ನಶೆ ಅಪಾಯಕಾರಿ


ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರಾಗೃಹ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ-2018 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

''ಕೆಲವೊಮ್ಮೆ ಕುತೂಹಲಕ್ಕಾಗಿ ಸೇವಿಸುವ ಮಾದಕ ವಸ್ತುಗಳು, ಚಟವಾಗಿ ಮಾರ್ಪಟ್ಟು, ಆ ನಂತರದಲ್ಲಿ ಅಪರಾಧ ಕೃತ್ಯಗಳಿಗೆ ಪ್ರೆರೇಪಿಸುತ್ತವೆ. ದುಷ್ಪರಿಣಾಮ ಬೀರುವ ಮಾದಕ ವಸ್ತುಗಳ ಬಳಕೆಯಿಂದ ದೂರವಿರಬೇಕು,'' ಂದು ಸಲಹೆ ನೀಡಿದರು.

''ಅಫಿಮು, ಗಾಂಜಾ, ಡ್ರಗ್ಸ್‌, ಮದ್ಯಪಾನ, ಧೂಮಪಾನ ಸೇರಿದಂತೆ ಇತರೆ ಮಾದಕ ವಸ್ತುಗಳು ಮತ್ತಿಗಾಗಿ ಮಾನವನನ್ನು ದಾಸನನ್ನಾಗಿ ಮಾಡುತ್ತವೆ. ಹುಟ್ಟುವಾಗ ಯಾರೂ ಕೂಡ ಕೆಟ್ಟವರು ಅಥವಾ ದಡ್ಡರಾಗಿರುವುದಿಲ್ಲ. ಬೆಳೆದ ಹಾಗೆ ಕೆಟ್ಟವರ ಸಹವಾಸ ಮಾಡಿ ಕೆಲವೊಂದು ದುರಾಭ್ಯಾಸಗಳನ್ನು ರೂಢಿಸಿಕೊಳ್ಳುತ್ತೇವೆ. ನಂತರ ಮಾದಕ ವಸ್ತುಗಳಿಗೆ ದಾಸರಾಗಿ ಬಿಡುತ್ತೇವೆ ಅದರ ಪೂರೈಕೆಗೆ ಹಣವಿಲ್ಲದಿದ್ದಾಗ ಅದನ್ನು ಹೊಂದಿಸಿಕೊಳ್ಳುವ ಪ್ರವೃತ್ತಿ ಬೆಳೆಯುತ್ತದೆ. ಈ ಸಂದರ್ಭದಲ್ಲಿ ತಪ್ಪುಗಳಾಗಿಬಿಡುತ್ತದೆ. ನಮ್ಮ ಇಚ್ಛಾಶಕ್ತಿ ಕಡಿಮೆಯಾಗಿ ವಿವೇಚನೆ ಇಲ್ಲದಾದಾಗ ಎಸಗುವ ತಪ್ಪುಗಳು ಘೋರ ಪರಿಣಾಮ ಬೀರುತ್ತವೆ,'' ಎಂದು ಹೇಳಿದರು.

''ಈ ದಿಸೆಯಲ್ಲಿ ಚಿಂತಿಸುವ ಅಗತ್ಯವಿದ್ದು, ಉತ್ತಮ ಜೀವನಕ್ಕಾಗಿ ಸಂಯಮತೆ ಕಾಪಾಡಿಕೊಳ್ಳಬೇಕು. ಕ್ಷ ಣಿಕ ಸುಖ ಜೀವನವಲ್ಲ. ನಾವು ಮಾಡುವ ಒಳ್ಳೆಯ ಕೆಲಸಗಳು ಒಳ್ಳೆಯ ಫಲ ನೀಡುತ್ತವೆ. ಜೀವನದಲ್ಲಿ ಎಲ್ಲರೂ ತಪ್ಪು ಮಾಡುತ್ತಾರೆ ಅದನ್ನು ತಿದ್ದಿಕೊಂಡು ಹೊಸಜೀವನ ನಡೆಸಬೇಕು,'' ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಕೆ. ಶಾಂತಪ್ಪ, ಜಿಲ್ಲಾ ಕಾರಾಗೃಹ ಅಧೀಕ್ಷ ಕ ಜಯರಾಮಯ್ಯ, ಹಿರಿಯ ಸಿವಿಲ್‌ ನ್ಯಾಯಾಧೀಶ ನ್ಯಾ. ಬಿ.ಎಸ್‌. ಹೊನ್ನಸ್ವಾಮಿ, ದಿವ್ಯಾ, ಜಿಲ್ಲಾ ಕಾರಾಗೃಹದ ಪ್ರಶಾಂತ್‌ ಹಾಗೂ ಮುಖಂಡರಾದ ಜಯಮ್ಮ, ಜಿಲ್ಲಾ ಆರೋಗ್ಯ ಶಿಕ್ಷ ಣಾಧಿಕಾರಿ ಶಿವರಾಜ್‌, ವಿಮಲಾ ಪಂಡಿತ್‌ ವೇದಿಕೆಯಲ್ಲಿದ್ದರು.

ಕಾರಾಗೃಹದ ಸಿಬ್ಬಂದಿ ಹಾಗೂ ಕೈದಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ