ಆ್ಯಪ್ನಗರ

ಜಮೀನು ವಿಚಾರಕ್ಕೆ ಮಾರಾಮಾರಿ; ಪ್ರಕರಣ ದಾಖಲು

ಕನಕಪುರ ತಾಲೂಕಿನ ಕಸಬಾ ಹೋಬಳಿಯ ಬಸವನದೊಡ್ಡಿ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಗಳು ಹೊಡೆದಾಟ ಮಾಡಿಕೊಂಡು ದೂರು ಪ್ರತಿದೂರು ...

Vijaya Karnataka 30 Apr 2019, 5:00 am
ಕನಕಪುರ: ಕನಕಪುರ ತಾಲೂಕಿನ ಕಸಬಾ ಹೋಬಳಿಯ ಬಸವನದೊಡ್ಡಿ ಗ್ರಾಮದಲ್ಲಿ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಸಂಬಂಧಿಗಳು ಹೊಡೆದಾಟ ಮಾಡಿಕೊಂಡು ದೂರು ಪ್ರತಿದೂರು ದಾಖಲಾಗಿದ್ದು, ಗ್ರಾಮಾಂತರ ಪೋಲಿಸರು ಒಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Vijaya Karnataka Web land dispute record the case
ಜಮೀನು ವಿಚಾರಕ್ಕೆ ಮಾರಾಮಾರಿ; ಪ್ರಕರಣ ದಾಖಲು


ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಮಾರಾಮಾರಿಯಲ್ಲಿ ಪ್ರಸನ್ನ(30) ಎಂಬ ವ್ಯಕ್ತಿಗೆ ತಲೆಗೆ ತೀವ್ರವಾದ ಪೆಟ್ಟಾಗಿದ್ದು, ಕನಕಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿನ ನಿಮಾನ್ಸ್‌ ಮತ್ತು ಕೆಂಪೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸವನದೊಡ್ಡಿ ಗ್ರಾಮದ ಗಿರಿಗೌಡ ಮತ್ತು ಮರೀಗೌಡರ ಕುಟುಂಬದ ನಡುವೆ ಈ ಮಾರಮಾರಿ ನಡೆದಿದೆ. ಈ ಸಂಬಂಧ ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತೀವ್ರವಾಗಿ ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಸನ್ನ ಹೇಳಿಕೆ ಪಡೆದುಕೊಂಡಿದ್ದು, ಹರೀಶ್‌ ಎಂಬುವನನ್ನು ವಶಕ್ಕೆ ಪಡೆದ ಪೋಲಿಸರು ತನಿಖೆ ಆರಂಭಿಸಿದ್ದಾರೆ.

ಬಸವನದೊಟ್ಟಿ ಗ್ರಾಮದ ಸಹೋದರರ ಕುಟುಂಬದವರಾದ ಇವರು ಗ್ರಾಮದ ಅಕ್ಕಪಕ್ಕದಲ್ಲೇ ಜಮೀನು ಇದ್ದು, ಜಮೀನಿನಲ್ಲಿ ಅಳತೆ ಮಾಡಿ ಹಾಕಲಾಗಿದ್ದ ಅಳತೆ ಕಲ್ಲನ್ನು ಕಿತ್ತು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಎರಡು ಕುಟುಂಬಗಳ ನಡುವೆ ಜಗಳ ಮೇರೆ ಮೀರಿ ಹಲ್ಲೆ ಮಟ್ಟಕ್ಕೆ ತಲುಪಿದ್ದು, ಪ್ರಸನ್ನ ಎಂಬುವರು ತೀವ್ರವಾಗಿ ಹಲ್ಲೆಗೊಳಗಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ