ಆ್ಯಪ್ನಗರ

ಶನೈಶ್ವರಸ್ವಾಮಿ ದೇಗುಲದಲ್ಲಿ ಅದ್ದೂರಿ ಉತ್ಸವ

ಶನೈಶ್ವರಸ್ವಾಮಿ ಜಯಂತಿಯ ಅಂಗವಾಗಿ ಕುದೂರಿನ ಸ್ವಾಮಿಯ ದೇಗುಲದಲ್ಲಿ ಮುಂಜಾನೆಯಿಂದಲೂ ನಾನಾ ಧಾರ್ಮಿಕ ಕಾರ್ಯಗಳನ್ನು ನೇರವೇರಿಸಲಾಯಿತು.

Vijaya Karnataka 8 Jun 2019, 4:06 pm
ಶನೈಶ್ವರಸ್ವಾಮಿ ಜಯಂತಿ
Vijaya Karnataka Web lavish festival in shaneshwara swamy temple
ಶನೈಶ್ವರಸ್ವಾಮಿ ದೇಗುಲದಲ್ಲಿ ಅದ್ದೂರಿ ಉತ್ಸವ


ಕುದೂರು: ಶನೈಶ್ವರಸ್ವಾಮಿ ಜಯಂತಿಯ ಅಂಗವಾಗಿ ಕುದೂರಿನ ಸ್ವಾಮಿಯ ದೇಗುಲದಲ್ಲಿ ಮುಂಜಾನೆಯಿಂದಲೂ ನಾನಾ ಧಾರ್ಮಿಕ ಕಾರ್ಯಗಳನ್ನು ನೇರವೇರಿಸಲಾಯಿತು.

ಶನೈಶ್ವರ ಸ್ವಾಮಿ ಜಯಂತಿಯ ಅಂಗವಾಗಿ ದೇಗುಲವನ್ನು ತಳಿರು ತೋರಣ ಹಾಗೂ ಹೂಗಳಿಂದ ಸಿಂಗರಿಸಲಾಗಿತ್ತು. ಮುಂಜಾನೆ ಬ್ರಾಹ್ಮಿ ಲಗ್ನದಲ್ಲಿ ಪುಣ್ಯ, ಬಳಿಕ ಮಹಾ ಸಂಕಲ್ಪ, ಪಂಚಾಮೃತ ಅಭಿಷೇಕ, ಗಣಹೋಮ, ವಾಸ್ತು ಹೋಮ, ನವಗ್ರಹ ಹೋಮ, ಆಂಜನೇಯಸ್ವಾಮಿ ಹೋಮ ಹಾಗೂ ಶನೈಶ್ವರಸ್ವಾಮಿ ಪ್ರಧಾನ ಹೋಮ ನೆರವೇರಿಸಲಾಯಿತು. ಬಳಿಕ ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ತೈಲಾಭಿಷೇಕ:

ಸ್ವಾಮಿಯ ಜಯಂತಿ ಅಂಗವಾಗಿ ದೇವರ ಮೂರ್ತಿಗೆ ನಾನಾ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬಳಿಕ ಸಂಜೆ 4 ಗಂಟೆ ವೇಳೆಗೆ ಸ್ವಾಮಿಗೆ ಪ್ರಿಯವಾದ ತೈಲದಿಂದ ಅಭಿಷೇಕವನ್ನು ನೆರವೇರಿಸಲಾಯಿತು. ಸಾರ್ವಜನಿಕರು ಹಾಜರಿದ್ದು ಸ್ವಾಮಿಯ ಮೂರ್ತಿಗೆ ತೈಲವನ್ನು ಎರೆದು ತಮ್ಮ ಮನದ ಪ್ರಾರ್ಥನೆಯನ್ನು ನಿವೇದಿಸಿಕೊಂಡರು. ಬಳಿಕ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ವೇಳೆ ನೂರಾರು ಭಕ್ತಾಧಿಗಳು ಹಾಜರಿದ್ದರು.

ಭಜನೆ:

ನಾನಾ ಧಾರ್ಮಿಕ ಕೈಂಕರ್ಯದ ನಂತರ, ತುಮಕೂರಿನ ಹೆಸರಾಂತ ಆರ್ಟ್‌ ಆಫ್‌ ಲೀವಿಂಗ್‌ ತಂಡದವರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ವೇಳೆ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತಂದರು. ದೇವಾಲಯ ಸೇವಾ ಸಮಿತಿ ವತಿಯಿಂದ ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿ ಭಕ್ತಾಧಿಗಳು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ