ಆ್ಯಪ್ನಗರ

ಜಂಕ್‌ ಫುಡ್‌ ಬಿಡಿ ನೈಸರ್ಗಿಕ ಆಹಾರಕ್ಕೆ ಕೈ ಇಡಿ

ಜಾಗತೀಕರಣ, ನಗರೀಕರಣ ಮತ್ತು ಆದಾಯದಲ್ಲಿಹೆಚ್ಚಳದಿಂದ ಆರೋಗ್ಯಕರ ಆಹಾರ ಸೇವನೆಯಿಂದ ಜನರು ಬದ ಲಾಗುತ್ತಿದ್ದು, ಜಂಕ್‌ಫುಡ್‌ ಗಳ ಮೊರೆ ಹೋಗುತ್ತಿದ್ದು, ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೃಷಿ ವಿಜ್ಞಾನ ಕೆಂದ್ರದ ವಿಜ್ಞಾನಿ ಡಾ.ಲತಾ ಆರ್‌. ಕುಲಕರ್ಣಿ ಹೇಳಿದರು.

Vijaya Karnataka 17 Oct 2019, 3:22 pm
ಮಾಗಡಿ: ಜಾಗತೀಕರಣ, ನಗರೀಕರಣ ಮತ್ತು ಆದಾಯದಲ್ಲಿಹೆಚ್ಚಳದಿಂದ ಆರೋಗ್ಯಕರ ಆಹಾರ ಸೇವನೆಯಿಂದ ಜನರು ಬದ ಲಾಗುತ್ತಿದ್ದು, ಜಂಕ್‌ಫುಡ್‌ ಗಳ ಮೊರೆ ಹೋಗುತ್ತಿದ್ದು, ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕೃಷಿ ವಿಜ್ಞಾನ ಕೆಂದ್ರದ ವಿಜ್ಞಾನಿ ಡಾ.ಲತಾ ಆರ್‌. ಕುಲಕರ್ಣಿ ಹೇಳಿದರು.
Vijaya Karnataka Web leave junk food
ಜಂಕ್‌ ಫುಡ್‌ ಬಿಡಿ ನೈಸರ್ಗಿಕ ಆಹಾರಕ್ಕೆ ಕೈ ಇಡಿ

ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹ ಯೋಗದೊಂದಿಗೆ ವಿಶ್ವ ಆಹಾರ ದಿನಾ ಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದರು.
ಪೌಷ್ಠಿಕ ಆಹಾರ ಸೇವಿಸಿ: ಈ ಸಾಲಿನ ಧ್ಯೇಯವಾಕ್ಯವಾದ 'ನಮ್ಮ ಕಾರ್ಯ ಗಳಿಂದ ನಮ್ಮ ಭವಿಷ್ಯ. ಶೂನ್ಯ ಹಸಿವಿನ ವಿಶ್ವಕ್ಕಾಗಿ ಆರೋಗ್ಯಕರ ಆಹಾರ ಗಳು' ಎಂಬ ಉದ್ದೇಶದ ಅಡಿ ಕಾರ್ಯಕ್ರಮ ನಡೆಯುತ್ತಿದ್ದು ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಸ್ಥಳೀಯ ವಾಗಿ ಋುತು ವಿಗನುಗುಣವಾಗಿ ದೊರೆ ಯುವ ಪೌಷ್ಠಿಕ ಆಹಾರವನ್ನು ಸೇವನೆ ಮಾಡುವುದು ಅತಿಮುಖ್ಯವಾಗಿದೆ ಎಂದು ತಿಳಿಸಿದರು. ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥೆ ಡಾ.ಸವಿತಾ ಎಸ್‌. ಮಂಗಾನ ವಾರ ಉತ್ತಮ ಆರೋಗ್ಯಕ್ಕಾಗಿ ಅನು ಸರಿಸಬೇಕಾದ ಆಹಾರ ಪದ್ಧತಿಗಳು ಮತ್ತು ಪೋಷಕಾಂಶಗಳ ಬಗ್ಗೆ ತಿಳಿಸಿದರು. ಹಸಿವು ಮುಕ್ತ ವಿಶ್ವಕ್ಕಾಗಿ ಆರೋಗ್ಯಕರ ಆಹಾರ ಬಳಕೆ ಮಾಡಲು ಕರೆ ನೀಡಿದರು.
ಮಾತೃಪೂರ್ಣ ಅನುಷ್ಟಾನವಾಗಲಿ: ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಬಿ.ಎಸ್‌.ಭಾರತಿದೇವಿ ಮಾತನಾಡಿ, ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳಿಗೆ ಅವಶ್ಯಕ ಪೌಷ್ಠಿಕ ಆಹಾರಗಳು ಮತ್ತು ಸಮತೋಲನ ಆಹಾರ ಸೇವಿಸ ಬೇಕು. ಮಾತೃವಂದನಾ, ಮಾತೃಶ್ರೀ, ಮಾತೃಪೂರ್ಣ ಕಾರ್ಯಕ್ರಮಗಳನ್ನು ಸಮರ್ಪಕವಾ
ಗಿ ಅನುಷ್ಟಾನಗೊಳಿಸಿ ಮುಂದಿನ ಪೀಳಿಗೆಯನ್ನು ಆರೋಗ್ಯ ದಿಂದಿರಿಸಲು ಸಹಕರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ ಖೆಯ ಮೇಲ್ವಿಚಾರಕಿ ಮಂಜುಳಾದೇವಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರಾಜೇಂದ್ರಪ್ರಸಾದ್‌, ಪ್ರೀತು, ವಿಕಾಸ್‌, ಯೋಜನಾ ಸಹಾಯಕ ಶ್ಯಾಮಸುಂದರ್‌, ರಂಗನಾಥ್‌, ರಂಜಿತ್‌ ಹಾಗೂ ಜಿಲ್ಲೆಯ 70 ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ