ಆ್ಯಪ್ನಗರ

ರಾತ್ರಿಯಾದ್ರೆ ಸಾಕು ಬೇಟೆಗೆ ಹೊರಡುತ್ತೆ ಚಿರತೆ..! 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಯಾತಂಕ..!

ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಚಿರತೆಯನ್ನು ಹಿಡಿಯಲು ವ್ಯವಸ್ಥಿತ ಕ್ರಮ ಕೈಗೊಂಡು ಯೋಜನೆ ರೂಪಿಸಿದ್ದಾರೆ. ಇದೇ ಮಾದರಿಯಲ್ಲಿ ರಾಮನಗರ ಜಿಲ್ಲೆಯ ಅಧಿಕಾರಿಗಳು ಚಿರತೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು.

Vijaya Karnataka Web 21 Jan 2020, 4:56 pm
ಮಾಗಡಿ (ರಾಮನಗರ): ಮಾಗಡಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆಗಳ ಹಾವಳಿ ಮಿತಿಮೀರಿದೆ. ಹಳ್ಳಿ ಜನರಿಗೆ ಚಿರತೆಗಳು ಭಯ ಹುಟ್ಟಿಸಿರುವ ಜೊತೆಯಲ್ಲೇ ತಲೆನೋವು ತಂದಿಟ್ಟಿವೆ.
Vijaya Karnataka Web leopard
ರಾತ್ರಿಯಾದ್ರೆ ಸಾಕು ಚಿರತೆ ಬೇಟೆ ಶುರು..! 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಯಾತಂಕ..!


ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಸಮೀಪದ ತಾಳೆಕೆರೆ ಗ್ರಾಮದಲ್ಲಿ ಸೋಮವಾರ ಚಿರತೆಯೊಂದು ರೈತರ ಮನೆಗೆ ನುಗ್ಗಿ ಕರುವನ್ನು ಕೊಂದು ರಕ್ತಹೀರಿ ಪರಾರಿಯಾಗಿದೆ. ಚಿರತೆಗಳು ರಾಜಾರೋಷವಾಗಿ ಹಳ್ಳಿಗಳತ್ತ ಬಂದು ಜಾನುವಾರಗಳನ್ನು ನಿತ್ಯ ಬಲಿ ತೆಗೆದುಕೊಳ್ಳುತ್ತಿದೆ. ಇದು ಕೇವಲ ಒಂದೋ ಎರಡೋ ಊರಿನ ಕಥೆಯಲ್ಲ, ಮಾಗಡಿ ತಾಲೂಕಿನ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳು ಚಿರತೆ ದಾಳಿಯ ಭೀತಿಯಲ್ಲಿ ಜೀವನ ಕಳೆಯುತ್ತಿವೆ.

ಚಿರತೆ ರಾತ್ರಿ ವೇಳೆಯಲ್ಲಿ ಬೇಟೆಗೆ ಹೊಂಚು ಹಾಕುತ್ತಿದೆ. ಹೀಗಾಗಿ, ಜನರು ಚಿರತೆ ಭೀತಿಯಲ್ಲಿದ್ದಾರೆ. ಅರಣ್ಯ ಇಲಾಖೆಯವರು ಕಾಡಿನಿಂದ ನಾಡಿಗೆ ಬಂದಿರುವ ಚಿರತೆಗಳನ್ನು ಬೇಗ ಹಿಡಿಯುವ ಕೆಲಸವನ್ನು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಚಿರತೆಗಳನ್ನು ಹಿಡಿಯಲು ಮೀನಾಮೇಷ ಎಣಿಸುತ್ತಿರುವ ಅರಣ್ಯ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಹಳ್ಳಿಗಳಲ್ಲಿ ಚಿರತೆ ಹಿಡಿಯುವ ಬೋನುಗಳನ್ನು ಇಡಬೇಕು ಎಂದೂ ಆಗ್ರಹಿಸಿದ್ದಾರೆ.

ಅಜ್ಜಿಯ ಎದುರೇ ಮೊಮ್ಮಗನನ್ನು ಎಳೆದೊಯ್ದ ಚಿರತೆ..! ಕಾಡಿನೊಳಗೆ ಸಿಕ್ತು ಬಾಲಕನ ಶವ..

ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಚಿರತೆಯನ್ನು ಹಿಡಿಯಲು ವ್ಯವಸ್ಥಿತ ಕ್ರಮ ಕೈಗೊಂಡು ಯೋಜನೆ ರೂಪಿಸಿದ್ದಾರೆ. ಇದೇ ಮಾದರಿಯಲ್ಲಿ ರಾಮನಗರ ಜಿಲ್ಲೆಯ ಅಧಿಕಾರಿಗಳು ಚಿರತೆ ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹಾನಗಲ್ಲುಶೆಟ್ಟಳ್ಳಿಯಲ್ಲಿಉರುಳಿಗೆ ಸಿಲುಕಿ ಚಿರತೆ ಬಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ