ಆ್ಯಪ್ನಗರ

ಅಕ್ಷರ ಸಂಸ್ಕೃತಿ ಜತೆ ಆಚಾರ ಸಂಸ್ಕೃತಿ ಬೆಳೆಯಲಿ

ವಿದ್ಯಾರ್ಥಿಗಳು ಅಕ್ಷರ ಸಂಸ್ಕೃತಿಯ ಜತೆಗೆ ಆಚಾರ ಸಂಸ್ಕೃತಿ ಬೆಳೆಸಿಕೊಂಡು ಬದುಕಿನ ಔನತ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಬಂಡೇಮಠದ ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿದರು.

Vijaya Karnataka 9 Sep 2019, 3:59 pm
ಮಾಗಡಿ ಗ್ರಾಮಾಂತರ: ವಿದ್ಯಾರ್ಥಿಗಳು ಅಕ್ಷರ ಸಂಸ್ಕೃತಿಯ ಜತೆಗೆ ಆಚಾರ ಸಂಸ್ಕೃತಿ ಬೆಳೆಸಿಕೊಂಡು ಬದುಕಿನ ಔನತ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಬಂಡೇಮಠದ ಬಸವಲಿಂಗ ಶ್ರೀಗಳು ಆಶೀರ್ವಚನ ನೀಡಿದರು.
Vijaya Karnataka Web let the culture grow with the character culture
ಅಕ್ಷರ ಸಂಸ್ಕೃತಿ ಜತೆ ಆಚಾರ ಸಂಸ್ಕೃತಿ ಬೆಳೆಯಲಿ


ಮಾಗಡಿಯ ಸೋಲೂರು ಸಮೀಪದ ಬಂಡೇಮಠದ ಸಿದ್ಧಗಂಗಾ ಪ್ರೌಢಶಾಲೆಯಲ್ಲಿನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ದಿನದಲ್ಲಿಉತ್ತಮ ಅಧ್ಯಯನ ಉತ್ತಮ ಹವ್ಯಾಸ ರೂಢಿಸಿಕೊಂಡು, ಪರಿಪೂರ್ಣ ವ್ಯಕ್ತಿತ್ವ ಪಡೆಯಬೇಕು. ಕಠಿಣ ಪರಿಶ್ರಮ ಮತ್ತು ನಿಗದಿತ ದಿನಚರಿ ವ್ಯವಸ್ಥಿತವಾಗಿ ನಿರ್ವಹಿಸಿ ಉತ್ತಮ ಅಭಿರುಚಿ ಆಸಕ್ತಿಗಳನ್ನು ಹೊಂದಿ ಶ್ರೇಷ್ಠ ಸಾಧಕರಾಗಿ ಹೊರಹೊಮ್ಮುವುದು ಅಗತ್ಯವಿದೆ. ಶಾಲೆ ಮತ್ತು ಸಮಾಜದ ಋುಣವನ್ನು ತೀರಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು.

ಸಮಾಜಕ್ಕೆ ಕೊಡಿಗೆ ನೀಡಿ:
ತಂದೆ, ತಾಯಿ, ಗುರು ಹಾಗೂ ಶಾಲೆಯನ್ನು ಮಕ್ಕಳು ಎಂದಿಗೂ ಮರೆಯಬಾರದು. ಪುರಸ್ಕಾರ ಪಡೆದ ಮಕ್ಕಳು ಉನ್ನತ ಸ್ಥಾನ ಗಳಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜ ಪರಿವರ್ತೆನೆಯಾದೀತು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿಹೆಚ್ಚು ಅಂಕ ಗಳಿಸಿದೆ ಎನ್ನುವ ಅಹಂಕಾರ ಮತ್ತು ಕಡಿಮೆ ಅಂಕಗಳಿಸಿದ ಮಕ್ಕಳನ್ನು ಕೀಳರಿಮೆಯಿಂದ ಕಾಣದೆ ಎಲ್ಲರೊಂದಿಗೆ ಪ್ರೀತಿ ವಿಶ್ವಾಸವನ್ನು ಬೆಳೆಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ಬಳಿಕ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿಶೇ.90 ಹಾಗೂ ಅಧಿಕ ಅಂಕ ಗಳಿಸಿದ 35 ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿದಾನಿಗಳಾದ ವಿಶಾಲಾಕ್ಷಿ, ಪಂಚಾಕ್ಷರಿ,ಲೋಕೇಶ್‌ ಹಾಗೂ ಆಡಳಿತಾಧಿಕಾರಿ ಗಂಗಾಧರ್‌, ಮುಖ್ಯಶಿಕ್ಷಕ ಭೀಮಯ್ಯ, ಎಸ್‌.ಗುರುಮೂರ್ತಿ, ರಾಜಣ್ಣ, ಸಿದ್ದಲಿಂಗಯ್ಯ, ಗುರುಮೂರ್ತಿ ಮತ್ತು ಸಿದ್ದಗಂಗಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ