ಆ್ಯಪ್ನಗರ

ಸರಕಾರಿ ನೌಕರರ ಸಂಘದ ಮಾಗಡಿ ಶಾಖೆ ಚುನಾವಣೆ ಜೂ. 13 ರಂದು

ಕನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಗಡಿ ತಾಲೂಕು ಶಾಖೆಯ ಚುನಾವಣೆ ಜೂ. 13 ರ ಗುರುವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 4 ಗಂಟೆ ವರೆಗೆ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆಯಲಿದೆ.

Vijaya Karnataka 28 May 2019, 4:56 pm
ಮಾಗಡಿ: ಕನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಾಗಡಿ ತಾಲೂಕು ಶಾಖೆಯ ಚುನಾವಣೆ ಜೂ. 13 ರ ಗುರುವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 4 ಗಂಟೆ ವರೆಗೆ ಪಟ್ಟಣದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆಯಲಿದೆ.
Vijaya Karnataka Web magadi branch government employees association election on june 13th
ಸರಕಾರಿ ನೌಕರರ ಸಂಘದ ಮಾಗಡಿ ಶಾಖೆ ಚುನಾವಣೆ ಜೂ. 13 ರಂದು


ಜೂ. 3 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜೂ. 4 ರ ಮಂಗಳವಾರ ಸಂಜೆ 5 ಗಂಟೆಗೆ ನಾಮಪತ್ರ ವಾಪಸ್ಸು ಪಡೆಯಲು ಕಡೆಯ ದಿನವಾಗಿರುತ್ತದೆ. ಜೂ. 13 ಚುನಾವಣೆಯ ನಡೆಯಲಿದ್ದು ಮಧ್ಯಾಹ್ನ 4.30 ನಂತರ ಮತಗಳ ಎಣಿಕೆ ನಡೆದು ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಎಸ್‌.ಸಿದ್ದೇಶ್ವರ್‌ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಇಲಾಖೆವಾರು ಅಭ್ಯರ್ಥಿಗಳ ವಿವರ: ಕೃಷಿ, ಪಶುಸಂಗೋಪನೆ, ವಾಣಿಜ್ಯ ತೆರಿಗೆ ಮತ್ತು ಮೀನುಗಾರಿಕೆ, ಸಾಂಖ್ಯಿಕ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು, ಪ್ರೌಡ ಶಾಲೆ, ಕಿರಿಯ ಮತ್ತು ಪದವಿ ಕಾಲೇಜು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಹಾಗೂ ಅಲ್ಪ ಸಂಖ್ಯಾತ, ಅರಣ್ಯ, ನಗರ ಯೋಜನೆ ಹಾಗೂ ಕಾನೂನು ಮಾಪನ ಶಾಸ್ತ್ರ, ಅಬಕಾರಿ ಮತ್ತು ಕಾರ್ಮಿಕ, ಕೈಗಾರಿಕೆ ಮತ್ತು ಕಾರ್ಮಿಕ, ತೋಟಗಾರಿಕೆ ಮತ್ತು ರೇಷ್ಮೆ, ವಾರ್ತಾ ಮತ್ತು ಸಣ್ಣ ಉಳಿತಾಯ, ಮೋಟಾರು ವಾಹನಗಳು, ಪೊಲೀಸ್‌ ಆಡಳಿತ, ಗಣಿ ಮತ್ತು ಭೂ ವಿಜ್ಞಾನ, ಖಜಾನೆ, ಭೂಮಾಪನ, ಕಂದಾಯ, ವ್ಯವಸ್ಥೆ, ಮತ್ತು ಭೂ ದಾಖಲೆಗಳ ಹಾಗೂ ನೊಂದಣಿ ಮತ್ತು ಮುದ್ರಾಂಕ, ಮಾರುಕಟ್ಟೆ ಮತ್ತು ಎಪಿಎಂಸಿ, ನ್ಯಾಯಾಂಗ, ತಾಲೂಕು ಪಂಚಾಯಿತಿ, ಸಿಡಿಪಿಒ, ಸಹಕಾರ ಮತ್ತು ಸಹಕಾರ ಸಂಘಗಳ ಲೆಕ್ಕಪರಿಶೋಧನ ಇಲಾಖೆಗಳ ತಲಾ ಒಬ್ಬರು, ಕಂದಾಯ ಹಾಗೂ ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಯ ತಲಾ 2 ಮಂದಿ, ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಇತರೆ ಇಲಾಖೆಗಳ ತಲಾ 3 ಮಂದಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 4 ಮಂದಿ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ.

ಮತದಾರರ ವಿವರ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಗೆ ಜೂನ್‌ 13 ರ ಗುರುವಾರ ನಡೆಯುವ ಚುನಾವಣೆಗೆ ಕೃಷಿ ಇಲಾಖೆಯ 13, ಪಶುಸಂಗೋಪನೆ ಇಲಾಖೆಯ 12, ಕಂದಾಯ ಮತ್ತು ಭೂ ದಾಖಲೆ ಇಲಾಖೆಯ 20, ಸಮಾಜ ಕಲ್ಯಾಣ ಇಲಾಖೆಯ 33, ಜಿಲ್ಲಾ ಪಂಚಾಯತ್‌ ಉಪ ಎಂಜಿನಿಯರ್‌ ವಿಭಾಗದ 14, ಅಬಕಾರಿ ಇಲಾಖೆಯ 06, ಸಿಡಿಪಿಒ ಕಚೇರಿಯ 07, ಅರಣ್ಯ ಇಲಾಖೆಯ 14, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 16, ತೋಟಗಾರಿಕೆ ಇಲಾಖೆಯ 12, ಕೈಗಾರಿಕೆ ಇಲಾಖೆಯ 12, ಐಪಿ.ಡಬ್ಲ್ಯುಡಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ 66, ಉಪ ಖಜಾನೆಯ 07, ರೇಷ್ಮೆ ಇಲಾಖೆಯ 05, ಲೋಕೋಪಯೋಗಿ ಇಲಾಖೆ 11, ಸ್ವತಂತ್ರ ಪದವಿ ಪೂರ್ವ ಕಾಲೇಜು 34, ಸರಕಾರಿ ಪ್ರಾಥಮಿಕ ಶಾಲೆ/ಬಿಇಒ ಕಚೇರಿ 936, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗ ಇಲಾಖೆ 33, ಸರಕಾರಿ ಪ್ರೌಡಶಾಲೆ 67, ನ್ಯಾಯಾಂಗ ಇಲಾಖೆ 03 ಸೇರಿದಂತೆ ಒಟ್ಟು 1321 ಸರಕಾರಿ ನೌಕರರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಚುನಾವಣಾಧಿಕಾರಿ ಎಸ್‌.ಸಿದ್ದೇಶ್ವರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ