ಆ್ಯಪ್ನಗರ

ಮಾಗಡಿ ಹೇಮಾವತಿ ಕೊಲೆ ಪ್ರಕರಣಕ್ಕೆ ತಿರುವು; ಮರ್ಯಾದೆಗಾಗಿ ಕುಟುಂಬದಿಂದಲೇ ಯುವತಿಯ ಹತ್ಯೆ

ರಾಮನಗರ ಜಿಲ್ಲೆಯ ಮಾಗಡಿಯ ಕುದೂರಿನಲ್ಲಿ ನಡೆದ ಹೇಮಲತಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮರ್ಯಾದೆಗಾಗಿ ಯುವತಿಯ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

Vijaya Karnataka Web 16 Oct 2020, 5:52 pm
ರಾಮನಗರ: ಜಿಲ್ಲೆಯ ಮಾಗಡಿಯ ಕುದೂರಿನಲ್ಲಿ ನಡೆದ ಯುವತಿಯ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪೊಲೀಸರ ತನಿಖೆಯಲ್ಲಿ ಮರ್ಯಾದಾ ಹತ್ಯೆ ಎಂದು ತಿಳಿದು ಬಂದಿದೆ. ಅನ್ಯಕೋಮಿನ ಹುಡುಗನ ಪ್ರೀತಿಸಿದ್ದು ಕೊಲೆಗೆ ಕಾರಣವಾಗಿದೆ ಎಂದು ಕೇಂದ್ರ ವಲಯ್‌ ಐಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.
Vijaya Karnataka Web magadis hemalatha death case take new turn honor killing by family
ಮಾಗಡಿ ಹೇಮಾವತಿ ಕೊಲೆ ಪ್ರಕರಣಕ್ಕೆ ತಿರುವು; ಮರ್ಯಾದೆಗಾಗಿ ಕುಟುಂಬದಿಂದಲೇ ಯುವತಿಯ ಹತ್ಯೆ


ಎಸ್‌ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಅಪ್ರಾಪ್ತ ಬಾಲಕ ಸೇರಿ ಮೂವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಮೃತ ಯುವತಿಯ ತಂದೆ ಕೃಷ್ಣಪ್ಪ, ಸಹೋದರ ಯೋಗೇಶ್‌ ಹಾಗೂ ಬಾಲಕ ಬಂಧಿತರು ಎಂದು ತಿಳಿಸಿದ್ದಾರೆ.

ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಹೇಮಲತಾ (19)ರನ್ನು ಹತ್ಯೆಗೈಯಲಾಗಿತ್ತು. ಪ್ರಕರಣವನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು. ಜೊತೆಗೆ ಯುವತಿ ಪ್ರೀತಿಸುತ್ತಿದ್ದ ಯುವಕನನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ರಾಮನಗರದಲ್ಲಿ ಮರ್ಯಾದಾ ಹತ್ಯೆಗೆ ಯುವಕ ಬಲಿ: ಅನ್ಯಧರ್ಮೀಯ ಯುವತಿ ಪ್ರೀತಿಸಿದ್ದಕ್ಕೆ ಕೊಲೆ!

ಪ್ರೀತಿ ವಿಚಾರವಾಗಿ ಹೇಮಲತಾಗೆ ಎಚ್ಚರಿಕೆಯನ್ನು ಕುಟುಂಬಸ್ಥರು ನೀಡಿದ್ದರು. ಬುದ್ಧಿ ಹೇಳಲು ತೋಟದ ಕಡೆಗೆ ಯುವತಿಯನ್ನು ತಂದೆ ಹಾಗೂ ಸಹೋದರ ಕರೆದೊಯ್ದಿದ್ದರು.
ಈ ವೇಳೆ ಯುವತಿಯ ಸಹೋದರ ಯೋಗೇಶ್‌ನಿಂದ ಹೇಮಲತಾ ಮೇಲೆ ಹಲ್ಲೆ ನಡೆದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದಳು ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಮನಗರ ಎಸ್‌ಪಿ ಎಸ್.ಗಿರೀಶ್, ಎಎಸ್‌ಪಿ ರಾಮರಾಜನ್ ಇದ್ದರು.

ಬೆಟ್ಟಹಳ್ಳಿ ಯುವತಿ ಕೊಲೆ ಪ್ರಕರಣ: ತನಿಖೆಗೆ ರವಿ ಡಿ. ಚನ್ನಣ್ಣನವರ್ ಮಾರ್ಗದರ್ಶನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ