ಆ್ಯಪ್ನಗರ

ಗಾಂಧಿ ಜೀವನದ ಮೇಲೆ ಬೆಳಕು ಚೆಲ್ಲಿದ ಮಹಾತ್ಮಾನ ನಾಟಕ ಪ್ರದರ್ಶನ

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಧಾರವಾಡದ ರಂಗಾಯಣ ಕಲಾವಿದರು ಮಹಾತ್ಮಾ ಗಾಂಧಿ ಜೀವನ ಸಾರ ತಿಳಿಸುವ ಜೀವನ ಪಾವು ಗಾಂಧಿ, ಬಾಪು ...

Vijaya Karnataka 18 Mar 2019, 5:00 am
ರಾಮನಗರ: ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಧಾರವಾಡದ ರಂಗಾಯಣ ಕಲಾವಿದರು ಮಹಾತ್ಮಾ ಗಾಂಧಿ ಜೀವನ ಸಾರ ತಿಳಿಸುವ ಜೀವನ ಪಾವು ಗಾಂಧಿ, ಬಾಪು ಗಾಂಧಿ ನಾಟಕ ಪ್ರದರ್ಶನ ನೀಡಿದರು.
Vijaya Karnataka Web magnificent drama show on gandhis life
ಗಾಂಧಿ ಜೀವನದ ಮೇಲೆ ಬೆಳಕು ಚೆಲ್ಲಿದ ಮಹಾತ್ಮಾನ ನಾಟಕ ಪ್ರದರ್ಶನ


ಪಾತ್ರಧಾರಿಗಳ ಮೂಲಕವೇ ಮಹಾತ್ಮನ ಜೀವನವನ್ನ್ನು ನಿರೂಪಣೆ ಮಾಡಿಸುತ್ತಲೇ ನಟನೆ ಮಾಡಿಸಿರುವುದು ಈ ನಾಟಕದ ವಿಶೇಷವಾಗಿತ್ತು. ಗಾಂಧಿ ಬಾಲ್ಯದಲ್ಲಿ ಎಲ್ಲರಂತೆಯೇ ಇದ್ದರು. ತಾಯಿಗೆ ಹೇಳಿದ ಒಂದು ಸುಳ್ಳು, ಅವರು ಜೀವಮಾನದಲ್ಲಿ ಎಂದಿಗೂ ಸುಳ್ಳು ಹೇಳದಂತೆ ಮಾಡಿತು. ಸತ್ಯಹರಿಶ್ಚಂದ್ರ ನಾಟಕವು ಗಾಂಧಿ ಅವರಲ್ಲಿ ಪ್ರಾಮಾಣಿಕವಾಗಿರುವಂತೆ ಪ್ರೇರೇಪಣೆ ನೀಡಿತು. ದೇಶದಲ್ಲಿನ ಜಾತಿ ವ್ಯವಸ್ಥೆ ಅವರಲ್ಲಿ ಬೇಸರ ಮೂಡಿಸಿತು. ಬಾಲ್ಯದಲ್ಲೆ ಸಮಾನತೆಯತ್ತ ಅವರ ಮನಸ್ಸು ಹಾತೊರೆಯುತಿತ್ತು ಎಂಬ ಅಂಶವನ್ನು ಪ್ರದರ್ಶಿಸಲಾಯಿತು.

ಈ ವೇಳೆ ಗಾಂಧಿ ಅಧ್ಯಯನ ಕೇಂದ್ರ ರಾಜ್ಯ ಸಂಚಾಲಕಿ ಅಬೀದಾ ಬೇಗಂ ಮಾತನಾಡಿ ಯುವಕರಾಗಿ ಉನ್ನತ ವ್ಯಾಸಂಗಕ್ಕಾಗಿ ಮಹಾತ್ಮ ಗಾಂಧೀಜಿ ವಿದೇಶಕ್ಕೆ ಹೋದಾಗ ಅಲ್ಲಿನ ವರ್ಣಭೇದ ನೀತಿಗಳು ಅವರನ್ನು ಹೋರಾಟಕ್ಕೆ ಮುಂದಾಗುವಂತೆ ಮಾಡಿತು. ಜತೆಯಲ್ಲೆ ದೇಶದ ಜಾತಿ ವ್ಯವಸ್ಥೆ ವಿರುದ್ಧವೂ ಅವರು ಅದೇ ಶಾಂತಿ ಮಾರ್ಗ ಅನುಸರಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಬಳಸಿಕೊಂಡದ್ದು ಶಾಂತಿ, ಅಹಿಂಸಾ ಮಾರ್ಗವನ್ನು, ಅದರಲ್ಲಿ ಯಶ ಕಂಡು ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಿದರು ಎಂದು ಹೇಳಿದರು.

ಯುವ ಸಮುದಾಯಕ್ಕೆ ಮಹಾತ್ಮ ಗಾಂಧೀಜಿಯವರು ಪ್ರತಿಪಾದಿಸಿದ ಸತ್ಯ, ಶಾಂತಿ ಅಹಿಂಸೆಗಳನ್ನು ಅಪ್ಪಿಕೊಳ್ಳಬೇಕು. ಕೋಮು ಸೌಹಾರ್ದತೆಯನ್ನು ಒಪ್ಪಿಕೊಳ್ಳಬೇಕು. ಮಹಿಳೆಯರನ್ನು ಗೌರವಿಸಬೇಕು. ಗ್ರಾಮೀಣ ಸಮುದಾಯವನ್ನು ಪ್ರೀತಿಸಬೇಕು ಎಂಬ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ