ಆ್ಯಪ್ನಗರ

ಹೈಟೆನ್ಷನ್‌ ವಿದ್ಯುತ್‌ ಕಂಬದಲ್ಲಿ ಬುದ್ಧಿಮಾಂದ್ಯನ ಡ್ಯಾನ್ಸ್‌

ಮಾಗಡಿಯ ತಿಪ್ಪಸಂದ್ರ ಗ್ರಾಮದ ಬಳಿಯಲ್ಲಿರುವ ಹೈಟೆನ್ಷನ್‌ ವಿದ್ಯುತ್‌ ಕಂಬದ ತಂತಿಮೇಲೆ ಕುಳಿತಿರುವ ಬುದ್ಧಿಮಾಂದ್ಯ.

Vijaya Karnataka 3 Aug 2019, 10:51 am
ಮಾಗಡಿ ಗ್ರಾಮಾಂತರ: ಬುದ್ಧಿಮಾಂದ್ಯನೊಬ್ಬ ಹೈಟೆನ್ಷನ್‌ ವಿದ್ಯುತ್‌ ಕಂಬದ ಮೇಲೆ ಹತ್ತಿ ಕೆಳಗಿಳಿಯಲು ನಿರಾಕರಿಸುವ ಮೂಲಕ ಜನರು ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ಸತಾಯಿಸಿದ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಕೇಂದ್ರದ ರೈತರ ಜಮೀನನಲ್ಲಿ ನಡೆದಿದೆ.
Vijaya Karnataka Web man dancing on high tension wire


ಶುಕ್ರವಾರ ಮುಂಜಾನೆ 6 ಗಂಟೆ ವೇಳೆ 350 ಅಡಿ ಎತ್ತರವಾದ ಹೈಟೆನ್ಷನ್‌ ಕಂಬದ ಮೇಲೆ ಹತ್ತಿ ಕುಳಿತ ಬುದ್ಧಿಮಾಂದ್ಯ, ಜನರು ಗಾಬರಿಗೊಳಿಸಿದ. ತಕ್ಷಣವೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಲಾಯಿತು.

ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಬುದ್ಧಿಮಾಂದ್ಯನನ್ನು ಕಂಬದಿಂದ ಕೆಳಗಿಸಲು ಹರಸಾಹಸಪಟ್ಟರು.

ಕನ್ನಡ ಭಾಷೆ ತಿಳಿಯದ ಈತ, ತಮಿಳು, ಕೊಂಕಣಿ ಮತ್ತಿತರ ಭಾಷೆಗಳಲ್ಲಿ ಮನಬಂದಂತೆ ಹರಟುತ್ತಾ, ಸತಾಯಿಸತೊಡಗಿದ. ವಿಷಯ ತಿಳಿಯುತ್ತಿದ್ದಂತೆ ಬೆಸ್ಕಾಂ ಸಿಬ್ಬಂದಿ ಕರೆಂಟ್‌ ಕಟ್‌ ಮಾಡಿದ್ದರಿಂದ ಈತನ ಪ್ರಾಣ ಉಳಿಯಿತು. ತನ್ನ ಚೇಷ್ಠೆಗಳನ್ನು ಹೆಚ್ಚಿಸಿದ ಈತ, ಹೈಟೆನ್ಷನ್‌ ತಂತಿಯನ್ನು ಹಿಡಿದು ನರ್ತಿಸತೊಡಗಿದ.

ವಿಷಯ ತಿಳಿಯುತ್ತಿದ್ದಂತೆ ತಿಪ್ಪಸಂದ್ರದ ಎಲ್ಲ ಜನರೂ ಸ್ಥಳದಲ್ಲಿ ಜಮಾಯಿಸಿ ಪುಕ್ಕಟೆ ಮನರಂಜನೆ ಪಡೆದರು. ಕೊನೆಗೂ ಮಧ್ಯಾಹ್ನ 2ರ ಸುಮಾರಿಗೆ ಬುದ್ಧಿಮಾಂದ್ಯ ಕಂಬದಿಂದ ಕೆಳಗಿಳಿದ. ಇದನ್ನೇ ಕಾಯುತ್ತಾ ಕುಳಿತಿದ್ದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆತನನ್ನು ಹಿಡಿದು ಕರೆದೊಯ್ದರು. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ