ಆ್ಯಪ್ನಗರ

ರಾಮನಗರ: ಕಾಣೆಯಾಗಿದ್ದ ಮಗು ಹೊಳೆಯಲ್ಲಿ ಶವವಾಗಿ ಪತ್ತೆ; ಸಂಬಂಧಿಯಿಂದಲೇ ಕೊಲೆ

ರಾಮನಗರದಲ್ಲಿ ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದ ಮಗುವಿನ ಶವ ದ್ಯಾವರಸೇಗೌಡನ ದೊಡ್ಡಿ ಗ್ರಾಮದ ಬಳಿಯ ಹೊಳೆಯಲ್ಲಿ ಪತ್ತೆಯಾಗಿದೆ. ಸಂಬಂಧಿಯಿಂದಲೇ ಕೊಲೆ ನಡೆದಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 22 Sep 2020, 7:06 pm
ರಾಮನಗರ: ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣಿಯಾಗಿದ್ದ ಮಗು ಹೊಳೆಯಲ್ಲಿ ಶವವಾಗಿ ಪತ್ತೆಯಾಗಿದೆ. ರಾಮನಗರದ ಮೊಹಬೂಬ್ ನಗರ ಮನೆಯಿಂದ ಕಾಣೆಯಾಗಿದ್ದ ಸುಮೇರ್‌ ಖಾನ್‌ ಹಾಗೂ ಅಲ್ಮಜ್‌ ಬೇಗಂ ದಂಪತಿಯ ದತ್ತು ಮಗುವಿನ ಮೃತ ದೇಹ ಪತ್ತೆಯಾಗಿದೆ.

ರಾಮನಗರದ ದ್ಯಾವರಸೇಗೌಡನ ದೊಡ್ಡಿ ಗ್ರಾಮದ ಬಳಿಯ ಹೊಳೆಯಲ್ಲಿ ಮಗು ಶವ ಸಿಕ್ಕಿದೆ. ನಾಲ್ಕು ದಿನಗಳ ಹಿಂದೆ ಮನೆಯಿಂದ ಬಲೂನ್ ತರಲು ಹೋಗಿದ್ದ ಮಗು ದಯಾನ್ ಖಾನ್ ಕಾಣೆಯಾಗಿದ್ದ. ದಯಾನ್‌ ಖಾನ್‌ ಸುಮೇರ್ ಖಾನ್, ಅಲ್ಮಜ್ ಬೇಗಂ ದಂಪತಿಯ ದತ್ತು ಮಗುವಾಗಿದ್ದ.

ಈ ಕುರಿತು ರಾಮನಗರ ಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಮಗುವಿನ ಹುಡುಕಾಟ ಪ್ರಾರಂಭಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಗುವಿನ ಸಂಬಂಧಿ ಮುಜಾಮಿಲ್‌ ದಯಾನ್‌ ಖಾನ್‌ನನ್ನು ಕೊಲೆ ಮಾಡಿದ್ದು, ಕೊಲೆಗೆ ಸಂಬಂಧಪಟ್ಟಂತೆ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ