ಆ್ಯಪ್ನಗರ

ಮೋದಿ, ಅಮಿತ್‌ ಶಾ ಮೇಲೆ ಬೆಟ್ಟುಮಾಡುವುದು ಸರಿಯಲ್ಲ

ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿಡಿ.ಕೆ ಶಿವಕುಮಾರ್‌ರನ್ನು ಕೇಂದ್ರದ ಇನ್‌ಫೋಸ್‌ ಸಂಸ್ಥೆ ತನಿಖೆ ನಡೆಸುತ್ತಿದೆ ಇಂತಹ ಸಮಯದಲ್ಲಿ ತನಿಖೆಗೆ ಒಳಪಡಿಸುವುದೇ ಸರಿಯಲ್ಲ, ಬಂಧಿಸುವುದು ಸರಿಯಲ್ಲಎಂಬ ಹೇಳಿಕೆ ನೀಡುವ ಕಾಂಗ್ರೆಸಿಗರಿಗೆ ಇದು ಶೋಭೆ ತರದು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವಥ್‌ ನಾರಾಯಣ ತಿಳಿಸಿದರು.

Vijaya Karnataka 6 Sep 2019, 4:15 pm
ಮಾಗಡಿ: ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿಡಿ.ಕೆ ಶಿವಕುಮಾರ್‌ರನ್ನು ಕೇಂದ್ರದ ಇನ್‌ಫೋಸ್‌ ಸಂಸ್ಥೆ ತನಿಖೆ ನಡೆಸುತ್ತಿದೆ ಇಂತಹ ಸಮಯದಲ್ಲಿ ತನಿಖೆಗೆ ಒಳಪಡಿಸುವುದೇ ಸರಿಯಲ್ಲ, ಬಂಧಿಸುವುದು ಸರಿಯಲ್ಲಎಂಬ ಹೇಳಿಕೆ ನೀಡುವ ಕಾಂಗ್ರೆಸಿಗರಿಗೆ ಇದು ಶೋಭೆ ತರದು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವಥ್‌ ನಾರಾಯಣ ತಿಳಿಸಿದರು.
Vijaya Karnataka Web modi amit shah is not right
ಮೋದಿ, ಅಮಿತ್‌ ಶಾ ಮೇಲೆ ಬೆಟ್ಟುಮಾಡುವುದು ಸರಿಯಲ್ಲ


ಮಾಗಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ರವರನ್ನು ಕಾನೂನಿನಡಿಯಲ್ಲಿಪ್ರಶ್ನೆ ಮಾಡುತ್ತಿದೆ. ಅದಕ್ಕೆ ಅವರು ಉತ್ತರಿಸುತ್ತಿದ್ದಾರೆ. ಅವರ ಉತ್ತರದಲ್ಲಿ ಲೋಪಕಂಡು ಬಂದಿರುವುದರಿಂದ ಹತ್ತುದಿನಗಳ ಕಾಲ ಅವರಿಗೆ ಬೇಲ್‌ ಬಿಡದೆ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ. ಈ ವಿಚಾರವನ್ನೇ ಉದ್ದೇಶವನ್ನಾಗಿ ಇಟ್ಟುಕೊಂಡು ರಾಜ್ಯ ಕಾಂಗ್ರೆಸ್‌ ಕಾರ್ಯಕರ್ತರು ರಾಮನಗರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದು ಸರಿಯಲ್ಲಭಾರತೀಯ ಜನತಾ ಪಾರ್ಟಿ ಕಾಂಗ್ರೆಸಿಗರ ಇಂತಹ ಗೂಂಡಾಗಿರಿ ವರ್ತನೆಯನ್ನು ಖಂಡಿಸುತ್ತದೆ,'' ಎಂದರು.

ಮೋದಿಗೂ ಸಿಬಿಐ ಗಾಳಹಾಕಿತ್ತು: ''ನರೇಂದ್ರ ಮೋದಿ ಗುಜರಾತ್‌ನಲ್ಲಿಮುಖ್ಯಮಂತ್ರಿಯಾಗಿದ್ದಾಗ ಸಿಬಿಐ ಸತತ 8 ಗಂಟೆಗಳ ಕಾಲ ತನಿಖೆ ನಡೆಸಿತ್ತು. ನರೇಂದ್ರ ಮೋದಿ ಸಿಬಿಐ ತನಿಖೆಗೆ ಜಗ್ಗದೆ ಮತ್ತೆ 2 ಗಂಟೆಗಳ ಕಾಲ ತನಿಖೆ ನಡೆಸಿ ನಾವು ಉತ್ತರಿಸಲು ಸಿದ್ಧರಿದ್ದೇವೆ ಎಂಬ ಮಾಹಿತಿಯನ್ನು ನೀಡಿದರು. ಆದ್ದರಿಂದ ಡಿ.ಕೆ ಶಿವಕುಮಾರ್‌ ಅವರು ಕೂಡ ಅವರು ಸಂಪಾದಿಸಿರುವ ಆಸ್ತಿಯಲ್ಲಿ ಅಕ್ರಮ ಮತ್ತು ಭ್ರಷ್ಟಾಚಾರ ಇಲ್ಲದೆ ಹೋದರೆ ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ,'' ಎಂದು ಹೇಳಿದರು.

''ಬೆಂಗಳೂರಿನಿಂದ ದಿಲ್ಲಿವರೆಗೂ ಡಿ.ಕೆ ಶಿವಕುಮಾರ್‌ ಅವರ ಆಸ್ತಿ ಹಲವು ಕಡೆ ವಿಸ್ತರಣೆಯಾಗಿದೆ. ಒಂದೇ ದಿನ 80 ಕಡೆ ರೈಡ್‌ ಮಾಡಿ ಅನೇಕ ಮಾಹಿತಿಗಳನ್ನು ಸಿಬಿಐ ಕಲೆಹಾಕಿದೆ. ಮಾಹಿತಿ ಕಲೆ ಹಾಕುವಾಗ ಡಿ.ಕೆ ಶಿವಕುಮಾರ್‌ ನೀಡಿರುವ ಉತ್ತರವನ್ನು ಅವರು ಇಲ್ಲಿಪರಾಮರ್ಶಿಸಿ ಕೇಳುತ್ತಿದ್ದಾರೆ ಅಷ್ಟೇ,'' ಎಂದರು.

ಅರ್ಜಿ ತಿರಸ್ಕರಿಸಿತ್ತು: ಐಟಿ ಡಿ.ಕೆ ಶಿವಕುಮಾರ್‌ ಮನೆಯ ಮೇಲೆ ರೈಡ್‌ ಮಾಡಿದಾಗ ಡಿ.ಕೆ ಶಿವಕುಮಾರ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಇನ್‌ಫೋಸ್‌ಗೆ ಈ ಪ್ರಕರಣ ವಹಿಸಬಾರದು ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಹೈಕೋರ್ಟ್‌ ಅವರ ಅರ್ಜಿಯನ್ನು ತಿರಸ್ಕರಿಸಿದೆ. ವಿದೇಶಿ ವಿನಿಮಯ ಹಾಗೂ ಅಕ್ರಮ ಹಣ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದ ಇನ್‌ಫೋಸ್‌ ತನಿಖೆ ಮಾಡಲಿದೆ. ತನಿಕೆ ಪಾರದರ್ಶಕವಾಗಿದ್ದು ಹಾಗೂ ಡಾಕ್ಯುಮೆಂಟೇಶನ್‌ ಗಳಿಂದ ಕೂಡಿರುತ್ತದೆ,'' ಎಂದರು.

ಗೂಬೆಕೂರಿಸುವುದು ಸರಿಯಲ್ಲ: ಒಂದು ವೇಳೆ ಡಿಕೆ ಶಿವಕುಮಾರ್‌ ಅಕ್ರಮವಾಗಿ ಆಸ್ತಿ ಸಂಪಾದನೆ ಮತ್ತು ಹಣ ವರ್ಗಾವಣೆ ಮಾಡದೇ ಹೋಗಿದ್ದರೆ ಅವುಗಳಿಗೆ ಧೈರ್ಯವಾಗಿ ಉತ್ತರ ನೀಡುತ್ತಾರೆ ಅದನ್ನು ಬಿಟ್ಟು ಕಾಂಗ್ರೆಸ್‌ ಕಾರ್ಯಕರ್ತರು ಬೀದಿಗಿಳಿದು ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ಬಿಜೆಪಿ ಸರಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲಎಂದರು.

ರೆಡ್ಡಿಗೂ ತೋಳಹಾಕಿರಲಿಲ್ಲವೇ: ರಾಜ್ಯದಲ್ಲಿಇನ್‌ಫೋಸ್‌ ಸಂಸ್ಥೆ ಈಗಾಗಲೇ ಐಎಂಎ ಪ್ರಕರಣವನ್ನು ತನಿಖೆ ಮಾಡುತ್ತಿದ್ದೆ 209 ಕೋಟಿ ಹಣವನ್ನು ಮುಟ್ಟುಗೋಲು ಮಾಡಿಕೊಂಡಿದೆ. ಜೊತೆಗೆ ಜನಾರ್ದನ್‌ ರೆಡ್ಡಿ ಅವರನ್ನು ಇನ್‌ಫೋಸ್‌ ಸಂಸ್ಥೆಯೇ ತನಿಖೆ ನಡೆಸಿತ್ತು. ಅವರನ್ನು ಕೂಡ ಬಂಧಿಸಿತ್ತು ಅವರಿಗೆ ಕೆಲವು ಕೇಸ್‌ ಗಳಿಂದ ರಿಲೀಫ್‌ ಸಿಕ್ಕಿತ್ತು ಮತ್ತು ಕೆಲವು ಕೇಸುಗಳ ಪ್ರಕರಣ ತನಿಖೆ ಹಂತದಲ್ಲಿದೆ ಎಂದರು.

ಇದೇ ಸಮಯದಲ್ಲಿತಾಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ, ಕಾರ್ಯದರ್ಶಿ ಗೋಪಾಲ್‌, ನಾಗರಾಜು, ಶೇಷಪ್ಪ, ಮಾರಪ್ಪ ,ಪರಶುರಾಮ ,ಶಿವಕುಮಾರ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ