ಆ್ಯಪ್ನಗರ

ಬಿಜೆಪಿ ರಾಜ್ಯ ನಾಯಕರಿಗೆ ಮೋದಿ ನೈತಿಕತೆ ಕಲಿಸಲಿ: ಸಂಸದ

ಬಿಜೆಪಿಗೆ ನೈತಿಕ ಮೌಲ್ಯಗಳಿವೆಯೇ ಎಂಬುದನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್‌ ಸವಾಲು ಹಾಕಿದರು.

Vijaya Karnataka 18 Sep 2018, 3:21 pm
ರಾಮನಗರ: ಬಿಜೆಪಿಗೆ ನೈತಿಕ ಮೌಲ್ಯಗಳಿವೆಯೇ ಎಂಬುದನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ಸ್ಪಷ್ಟಪಡಿಸಬೇಕಾಗುತ್ತದೆ ಎಂದು ಸಂಸದ ಡಿಕೆ ಸುರೇಶ್‌ ಸವಾಲು ಹಾಕಿದರು.
Vijaya Karnataka Web modi can teach morality to bjp state leaders mp
ಬಿಜೆಪಿ ರಾಜ್ಯ ನಾಯಕರಿಗೆ ಮೋದಿ ನೈತಿಕತೆ ಕಲಿಸಲಿ: ಸಂಸದ


ರಾಮನಗರದ ನಗರಸಭಾಧ್ಯಕ್ಷ ರ ಆಯ್ಕೆ ಚುನಾವಣೆಗಾಗಿ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ,''ರಾಜ್ಯದಲ್ಲಿ ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಸರಕಾರದ ಅಸ್ತಿತ್ವವನ್ನು ಬಿಜೆಪಿ ನಾಯಕರು ಹಾಳು ಮಾಡುತ್ತಿರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ಉತ್ತರ ಕೊಡಬೇಕು.ಗೋವಾದಲ್ಲಿ ಕೇವಲ ಇಬ್ಬರು ಬಿಜೆಪಿ ಶಾಸಕರ ಸಂಖ್ಯೆಯಷ್ಟೇ ಹೆಚ್ಚಾಗಿದೆ. ಬೇರೆ ಕೆಲವು ರಾಜ್ಯಗಳಲ್ಲೂ ಕೂಡ ಐದಾರು ಶಾಸಕರ ಸಂಖ್ಯೆ ಹೆಚ್ಚಾಗಿದೆ. ಆದರೆ ಕಾಂಗ್ರೆಸ್‌ ಸೋಲನ್ನು ಒಪ್ಪಿಕೊಂಡು ಹಿಂದೆ ಸರಿದಿದ್ದೇವೆ. ಬಿಜೆಪಿಯ ಪಕ್ಷ ದ ಶಾಸಕರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿಲ್ಲ,''ಎಂದು ಸ್ಪಷ್ಟಪಡಿಸಿದರು.

ಸೂಚನೆ ನೀಡಲಿ: ''ಆದರೆ ಬಿಜೆಪಿಯವರು ಅಧಿಕಾರವಿದೆ, ಹಣವಿದೆ ಎಂದು ವರ್ತಿಸುತ್ತಿರುವ ರೀತಿಯನ್ನು ಇಡೀ ದೇಶದ ಜನತೆ ಗಮನಿಸುತ್ತಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ನೈತಿಕತೆ ಮೌಲ್ಯಾಧಾರಿತ ಪದಗಳ ಬಗ್ಗೆ ಪ್ರಧಾನಮಂತ್ರಿಗಳು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರು ಪಕ್ಷ ದ ರಾಜ್ಯಾಧ್ಯಕ್ಷ ರಿಗೆ, ಬಿಜೆಪಿ ನಾಯಕರಿಗೆ ತಿಳಿಸಿಕೊಡಬೇಕು.ಸರಕಾರವನ್ನು ಅಲುಗಡಿಸುವ ಕೆಲಸವನ್ನು ಬಿಟ್ಟು ಬಿಜೆಪಿಯವರು ಜನರ ಕೆಲಸ ಮಾಡಲಿ.ರಾಜ್ಯದಲ್ಲಿ ಬರ ಪೀಡೀತ, ನೆರೆ ಪೀಡಿತ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಿ ಎಂದು ಬಿಜೆಪಿ ಮುಖಂಡರಿಗೆ ಅವರ ಹೈಕಮಾಂಡ್‌ ಸೂಚನೆ ನೀಡಿದರೆ ಬಿæಪಿಯವರ ಬದ್ಧತೆಯನ್ನು ನಾವು ಒಪ್ಪುತ್ತೇವೆ,'' ಎಂದರು.

ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಅನೇಕ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಸಿಪಿ ಯೋಗೇಶ್ವರ್‌ ಒಬ್ಬರೇ ಅಲ್ಲ. ಬಿಜೆಪಿಗೆ ಸೆಳೆಯುವ ಯತ್ನದಲ್ಲಿ ಸಾಕಷ್ಟು ಜನರಿದ್ದಾರೆ. ಇದನ್ನು ಈಗಾಗಲೇ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ,''ಎಂದು ನುಡಿದರು.

ಸಿಪಿಯೋಗೇಶ್ವರ್‌ ಕೆಲಸ: ಚುನಾವಣೆಯಲ್ಲಿ ಸೋತ ಸೇಡು ತೀರಿಸಿಕೊಳ್ಳಲು ಸಿಪಿ ಯೋಗೇಶ್ವರ್‌ ಸರಕಾರ ಬೀಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ,''ಸಿಪಿಯೋಗೇಶ್ವರ್‌ ಅವರ ಕೆಲಸ ಅವರು ಮಾಡಲಿ. ಬಿಡುವಾಗಿದ್ದಾರೆ. ಏನಾದರೂ ಕೆಲಸ ಮಾಡಬೇಕೆಂದು ಸರಕಾರ ಬೀಳಿಸುವ ಕೆಲಸ ಮಾಡುತ್ತಿದ್ದಾರೆ. ಆದಕ್ಕೆ ಎಷ್ಟು ಫಲ ಸಿಗಲಿದೆ, ವಿಫಲವಾಗಲಿದೆ ಎಂಬುದು ಮುಂದೆ ಕಾದು ನೋಡಬೇಕು. ಕಾಂಗ್ರೆಸ್‌ ಪಕ್ಷ ಇವೆಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದೆ. ಸೂಕ್ತಕಾಲದಲ್ಲಿ ಕಾಂಗ್ರೆಸ್‌ ನಾಯಕರು ಉತ್ತರ ನೀಡಲಿದ್ದಾರೆ,'' ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆ ಬಗ್ಗೆ ಅಡ್ಡಗೋಡೆಯ ಮಾತು..!

ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ದಿಂದ ಅಭ್ಯರ್ಥಿಯನ್ನು ಹಾಕಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದ ಡಿಕೆ ಸುರೆಶ್‌, ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಚುನಾವಣೆ ಘೋಷಣೆಯ ಬಳಿಕ ನಮ್ಮ ಪಕ್ಷ ದ ರಾಷ್ಟ್ರೀಯ ನಾಯಕರು, ರಾಜ್ಯನಾಯಕರ ಅಭಿಪ್ರಾಯ ಪಡೆದು ಮುಖಂಡರು, ಕಾರ್ಯಕರ್ತರ ಸಭೆ ಕರೆದು ಸಾಧಕ-ಭಾಧಕಗಳನ್ನು ಚರ್ಚೆ ಮಾಡಿ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಏನೇ ತೀರ್ಮಾನ ಕೈಗೊಳ್ಳಬೇಕಾದರೂ ಕಾರ್ಯಕರ್ತರ ತೀರ್ಮಾನ ಮುಖ್ಯ. ಒಂದುವೇಳೆ ಡಿಕೆಶಿವಕುಮಾರ್‌, ಕುಮಾರಸ್ವಾಮಿ ಒಗ್ಗಟ್ಟಿನ ತೀರ್ಮಾನ ಕೈಗೊಂಡರೆ ಆ ತೀರ್ಮಾನವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್‌ ಕಾರ್ಯಕರ್ತರ ಒಲವನ್ನು ಗಳಿಸಬೇಕಾಗುತ್ತದೆ ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ