ಆ್ಯಪ್ನಗರ

ತಾಯಿಯ ಕತ್ತು ಕೊಯ್ದು ರುಂಡ ಬೇರ್ಪಡಿಸಿದ ಹೆತ್ತ ಮಗ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಮಗನೇ ಹೆತ್ತ ತಾಯಿಯ ಕತ್ತು ಕೊಯ್ದು ಕೊಲೆ ಮಾಡಿ ರುಂಡ ಬೇರ್ಪಡಿಸಿರುವ ಹೇಯ ಕೃತ್ಯ ನಡೆದಿದೆ. 25 ವರ್ಷ ವಯಸ್ಸಿನ ಪುತ್ರ ಕೊಲೆ ಮಾಡಿ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಸರಿಯಾಗಿ ಧಾವಿಸಿಲ್ಲ.

Vijaya Karnataka Web 16 Nov 2018, 6:15 pm
ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಹೋಬಳಿಯ ಕರ್ಲಹಳ್ಳಿ ಗ್ರಾದಲ್ಲಿ ಹಾಡ ಹಗಲೇ ತಾಯಿಯನ್ನು ಮಗ ಕೊಲೆ ಮಾಡಿದ್ದಾನೆ. 25 ವರ್ಷ ವಯಸ್ಸಿನ ಕುಮಾರ ಎಂಬಾತ 56 ವಯಸ್ಸಿನ ಪಾರ್ವತಮ್ಮ ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
Vijaya Karnataka Web murder..


ತಾಯಿಯ ಕತ್ತು ಕೊಯ್ದು ಕೊಲೆ ಮಾಡಿ ರುಂಡ ಬೇರ್ಪಡಿಸಿರುವುದು ಕೊಲೆಯ ಬರ್ಬರತೆಯನ್ನು ಎತ್ತಿ ತೋರಿಸುತ್ತದೆ. ಇಳಿವಯಸ್ಸಿನಲ್ಲಿ ತಾಯಿಯನ್ನು ನೋಡಿಕೊಳ್ಳಬೇಕಾದ ಮಗ ಕೊಲೆಗೈದು ಪರಾರಿಯಾಗಿರುವುದು ವಿಚಿತ್ರ.

ಇನ್ನು, ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಹಲವು ಗಂಟೆಗಳ ಕಾಲ ಸ್ಥಳದಲ್ಲೇ ಬೀಡುಬಿಟ್ಟಿದ್ದರು. ಅಲ್ಲದೆ, ಪೊಲೀಸರಿಗೆ ಮಾಹಿತಿ ನೀಡಿದರೂ ಸಹ ಅಕ್ಕೂರು ಪೋಲಿಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಎಷ್ಟು ಹೊತ್ತಾದರೂ ಧಾವಿಸಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ