ಆ್ಯಪ್ನಗರ

ನಾಡಬಾಂಬ್‌ ಸಿಡಿದು ಕರಡಿ ಸಾವು

ಕಾಡುಹಂದಿ ಬೇಟೆಗೆ ಇಟ್ಟಿದ ನಾಡಬಾಂಬ್‌ ಸಿಡಿದು ಸುಮಾರು ಒಂದೂವರೆ ವರ್ಷದ ಗಂಡು ಕರಡಿ ಸಾವನ್ನಪಿರುವ ಘಟನೆ ಮರಳವಾಡಿ ಹೋಬಳಿ ಸಿಡಿದೇವರಹಳ್ಳಿ ಯಲ್ಲಿ ...

Vijaya Karnataka 12 Jan 2019, 5:00 am
ಮರಳವಾಡಿ: ಕಾಡುಹಂದಿ ಬೇಟೆಗೆ ಇಟ್ಟಿದ ನಾಡಬಾಂಬ್‌ ಸಿಡಿದು ಸುಮಾರು ಒಂದೂವರೆ ವರ್ಷದ ಗಂಡು ಕರಡಿ ಸಾವನ್ನಪಿರುವ ಘಟನೆ ಮರಳವಾಡಿ ಹೋಬಳಿ ಸಿಡಿದೇವರಹಳ್ಳಿ ಯಲ್ಲಿ ನಡೆದಿದೆ.
Vijaya Karnataka Web nada bob and bear death
ನಾಡಬಾಂಬ್‌ ಸಿಡಿದು ಕರಡಿ ಸಾವು


ನಾಡಬಾಂಬ್‌ ಅಗಿದು ಸತ್ತು ಬಿದ್ದಿದ್ದ ಕರಡಿ ಶವವನ್ನು ಗಮನಿಸಿದ ಉಪವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ ಮತ್ತು ಅರಣ್ಯ ರಕ್ಷಕ ವಿಜಯ ಅವರು ಹಾರೋಹಳ್ಳಿ ಠಾಣೆಗೆ ದೂರು ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಹಾರೋಹಳ್ಳಿ ಸಬ್‌ ಇನ್ಸ್‌ಪೆಕ್ಟರ್‌ ಧರ್ಮೆಗೌಡ ಇತರೆ ಆರಕ್ಷಕ ಸಿಬ್ಬಂದಿ ಆಗಮಿಸಿ,æ ಕನಕಪುರ ಪ್ರಾದೇಶಿಕ ವಲಯಕ್ಕೆ ಮಾಹಿತಿ ನೀಡಿ ಕರಡಿ ಸತ್ತಿರುವ ಸ್ಥಳ ಮಾಜರು ಮಾಡಿದರು.

ಕರಡಿ ಶವ ಬಚ್ಚಿಟ್ಟಿದ್ದ ಶಂಕೆ

ನಾಡ ಬಾಂಬ್‌ ಅಗಿದು ಸತ್ತಿದ್ದ ಕರಡಿಯನ್ನು ಕಾನೂನು ಕ್ರಮದ ಭೀತಿಯಿಂದ ಬಚ್ಚಿಡಲಾಗಿತ್ತು ಎಂದು ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ. ರಾವುತಹಳ್ಳಿ ಕೆರೆಯ ಹಳ್ಳದ ಪಕ್ಕದ ರಸ್ತೆಯಲ್ಲಿ ಬಚ್ಚಿಟ್ಟಿದ್ದ ಕರಡಿ ಶವವನ್ನು ಕೋಣಾಲ್‌ದೊಡ್ಡಿಯ ಅರಣ್ಯದ ಟವರ್‌ ಜಾಗಕ್ಕೆ ತೆಗೆದುಕೊಂಡು ಹೋಗಿ ಮರಣೋತ್ತರ ಪರೀಕ್ಷೆಯನ್ನು ವೈದ್ಯರಾದ ಡಾ. ಶಾಮ ಮತ್ತು ಡಾ. ರಾಮಚಂದ್ರಯ್ಯ ನೆರವೇರಿಸಿದರು.

ಪ್ರಕರಣ ದಾಖಲು

ಬನ್ನೇರಘಟ್ಟ ರಾಷ್ಟೀಯ ಉದ್ಯಾನವನದ ವನ್ಯಜೀವಿಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮರಳವಾಡಿ ವಲಯ ಅರಣ್ಯಾಧಿಕಾರಿ ಪ್ರಶಾಂತ್‌,ಹಾರೋಹಳ್ಳಿವಲಯ ಅರಣ್ಯಾಧಿಕಾರಿ ರಾಜಕುಮಾರ್‌, ಹಾರೋಹಳ್ಳಿ ಆರಕ್ಷಕ ಸಿಬ್ಬಂದಿ ಬೋರಗೌಡ ಇತರರು ಹಾಜರಿದ್ದರು.

ಬೃಹತ್‌ ಜಾಲದ ಶಂಕೆ

ನಾಡಬಾಂಬ್‌ ಹಾವಳಿಯಿಂದ ವನ್ಯ ಜೀವಿಗಳಲ್ಲದೇ ಸಾಕು ಪ್ರಾಣಿಗಳು ಸಾವನ್ನಪ್ಪುತ್ತಿರುವ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದನ್ನು ಗಮನಿಸಿದರೆ ವನ್ಯ ಜೀವಿಗಳನ್ನು ಭೇಟಿಯಾಗಿ ಅವುಗಳ ಮಾಂಸ ಮತ್ತು ಅವಯವಗಳನ್ನು ಮಾರಾಟ ಮಾಡುವ ದೊಡ್ಡ ಜಾಲವೇ ಸಕ್ರಿಯವಾಗಿರುವ ಶಂಕೆ ಇದೆ.ಇದಕ್ಕೆ ಕಡಿವಾಣ ಹಾಕಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ