ಆ್ಯಪ್ನಗರ

ನರೇಗಾ: ಅಭಿವೃದ್ಧಿಗಾಗಿ 5 ಕೋಟಿ ರೂಗೂ ಹೆಚ್ಚು ವೆಚ್ಚ

ದೇಶಕ್ಕೆ ಮಾದರಿಯಾಗಿ ನರೇಗಾವನ್ನು ಬಳಸಿಕೊಂಡ ಉಯ್ಯಂಬಹಳ್ಳಿ ಗ್ರಾಮಪಂಚಾಯಿತಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 5 ಕೋಟಿಗಳನ್ನು ಮೀರಿ ಅಭಿವೃದ್ಧಿ ಕೆಲಸಗಳಲ್ಲಿ ಹಣವನ್ನು ಖರ್ಚು ಮಾಡಿದೆ ಎಂದು ಸಾಮಾಜಿಕ ಲೆಕ್ಕ ಪರಿಶೋಧಕರಾದ ನಾರಾಯಣ್‌ ತಿಳಿಸಿದರು.

Vijaya Karnataka 20 Jul 2018, 4:16 pm
ಸಾತನೂರು: ದೇಶಕ್ಕೆ ಮಾದರಿಯಾಗಿ ನರೇಗಾವನ್ನು ಬಳಸಿಕೊಂಡ ಉಯ್ಯಂಬಹಳ್ಳಿ ಗ್ರಾಮಪಂಚಾಯಿತಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 5 ಕೋಟಿಗಳನ್ನು ಮೀರಿ ಅಭಿವೃದ್ಧಿ ಕೆಲಸಗಳಲ್ಲಿ ಹಣವನ್ನು ಖರ್ಚು ಮಾಡಿದೆ ಎಂದು ಸಾಮಾಜಿಕ ಲೆಕ್ಕ ಪರಿಶೋಧಕರಾದ ನಾರಾಯಣ್‌ ತಿಳಿಸಿದರು.
Vijaya Karnataka Web narega rs 5 crore ms costo para el desarrollo
ನರೇಗಾ: ಅಭಿವೃದ್ಧಿಗಾಗಿ 5 ಕೋಟಿ ರೂಗೂ ಹೆಚ್ಚು ವೆಚ್ಚ


ಕನಕಪುರ ತಾಲೂಕಿನ ಉಯ್ಯಂಬಹಳ್ಳಿ ಗ್ರಾ.ಪಂ. ನಲ್ಲಿ ಇಂದು ಕರೆದಿದ್ದ ಸಾಮಾಜಿಕ ಲೆಕ್ಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯಲ್ಲಿ ಕಳೆದ ವರ್ಷದಲ್ಲಿ ಬಳಕೆ ಮಾಡಿರುವ ಹಣದ ಸಂಪೂರ್ಣ ಲೆಕ್ಕ ವರದಿ ಮಂಡಿಸಿ, ಮಾಹಿತಿ ನೀಡಿದರು.

ಯಾವ ಕಾಮಗಾರಿ..?: ' ಕಳೆದ ಅವಧಿಯಲ್ಲಿ 5.37.30407 ರೂ ಗಳನ್ನು ನರೇಗಾದಲ್ಲಿ ಬಳಸಿಕೊಂಡಿದೆ. 127055 ಮಾನವ ದಿನಗಳನ್ನು ಸೃಜಿಸಲಾಗಿದ್ದು, ಒಟ್ಟು 663 ಕಾಮಗಾರಿಗಳಲ್ಲಿ 83 ವಸತಿಯೋಜನೆ, 87 ದನದಕೊಟ್ಟಿಗೆ, 125 ಜಮೀನು ಮಟ್ಟಮಾಡುವುದು, 24 ಕುರಿಶೆಡ್ಡು, 31 ಪ್ರವಾಹನಿಯಂತ್ರಣ ಚರಂಡಿ, ಮತ್ತು ಸಿ.ಸಿ. ರಸ್ತೆ ಕಾಮಗಾರಿಗಳು, 31 ರೇಷ್ಮೆಕಡ್ಡಿ ನಾಟಿ, ತೋಟ ನಿರ್ವಹಣೆ, 38 ಚೆಕ್‌ಡ್ಯಾಂ ನಿರ್ಮಾಣ, 1 ನುಗ್ಗೆ ಹಾಗು ತೆಂಗಿನ ಸಸಿ ನಡೆವುದು, 6 ಅರಣ್ಯೀಕರಣ, 9 ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳು, 5 ಕೋಳಿ ಸಾಕಣೆ ಮನೆಗಳು, 205 ಕೃಷಿಹೊಂಡ, 15 ಕೆರೆ ಅಭಿವೃದ್ದಿ ಕಾಮಗಾರಿಗಳಿಗಾಗಿ ಕೂಲಿ ವೆಚ್ಚ 29984960 ರೂಗಳು, 23745447 ರೂಗಳನ್ನು ಸಾಮಾಗ್ರಿ ವೆಚ್ಚವನ್ನಾಗಿ ಬಳಸಿಕೊಳ್ಳಲಾಗಿದೆ,' ಎಂದು ವರದಿ ಮಂಡಿಸಿದರು.

ಮತ್ತೊಂದು ಅವಕಾಶ: ಈ ಸಭೆಯಲ್ಲಿ ವರದಿ ಮಂಡಿಸಿದ ಬಳಿಕ 9 ಜಾನುವಾರು ಕುಡಿಯುವ ನೀರಿನ ತೊಟ್ಟಿಗಳಿಗೆ ನರೇಗಾದಲ್ಲಿ ಅವಕಾಸ ಇಲ್ಲವಾಗಿದೆ. ಅದನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಮಂಡಿಸಿದ ಲೆಕ್ಕ ಪರಿಶೋಧಕರಿಗೆ ಜನರು ಬೇರೆ ಕಾಮಗಾರಿಗಿಂತ ನಮಗೆ ಜಾನುವಾರು ಕುಡಿಯುವ ತೊಟ್ಟಿಗಳು ಅತ್ಯವಶ್ಯ. ಇವುಗಳನ್ನು ಮುಂದಿನ ದಿನಗಳಲ್ಲಿ ನರೇಗಾದಲ್ಲಿ ನಿರ್ಮಾಣ ಮಾಡಿಕೊಂಡರೆ ರಾತ್ರಿ ಪಾಳಿ ವಿದ್ಯುತ್‌ ಇರುವ ಸಮಯದಲ್ಲಿ ನೀರು ಸಂಗ್ರಹಣೆ ಮಾಡಿ ಕೃಷಿ ಮತ್ತು ಜಾನುವಾರುಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ. ನರೇಗಾ ತಿದ್ದುಪಡಿ ಮಾಡುವ ಮೂಲಕ ಅವಕಾಶ ಮಾಡಿಕೊಡುವಂತೆ ನಿರ್ದರಿಸಲಾಯಿತು.

ಕಾಡುಪ್ರಾಣಿಗಳ ಹಾವಳಿ: 'ಉಯ್ಯಂಬಹಳ್ಳಿ ಬಹುತೇಕ ಕಾಡಂಚಿನ ಗ್ರಾಮವಾಗಿದೆ. ಇಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಯಾವುದೇ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ರೈತರ ಜಮೀನುಗಳಿಗೆ ನರೇಗಾದಲ್ಲಿ ತಂತಿ ಬೇಲಿ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ,'ಎಂದು ಮನವಿ ಮಾಡಿದರು.

ಬದಲಾವಣೆಗೆ ಆಗ್ರಹ: 'ಆ ನಂತರ ತಿಂಗಳಿಗೊಂದು ಕಾನೂನಿನ ಬದಲಾವಣೆಯಿಂದ ನರೇಗಾ ಅನುಷ್ಠಾನ ಕಷ್ಟವಾಗುತ್ತಿದ್ದು, ಇದರ ಸಮರ್ಪಕ ನಿರ್ವಹಣೆ ತೊಂದರೆಯಾಗುತ್ತಿದೆ. ಅದಕ್ಕಾಗಿ ವರ್ಷ ಒಂದು ಬಾರಿ ಬದಲಾವಣೆ ಮಾಡಿ,'ಎಂದು ಆಗ್ರಹಿಸಿದರು.

ನೊಡೆಲ್‌ ಅಧಿಕಾರಿಗಳಾಗಿದ್ದ ಉಯ್ಯಂಬಹಳ್ಳಿ ಪ್ರೌಡಶಾಲೆಯ ಮುಖ್ಯೋಪಾಧ್ಯಾಯ ರವಿಶಂಕರ್‌ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಗ್ರಾ.ಪಂ. ಅಧ್ಯಕ್ಷ ಎಚ್‌.ಕೆ. ರವಿ, ಅಬಿವೃದ್ಧಿ ಅಧಿಕಾರಿಗಳಾದ ಮುನಿಮಾರೇಗೌಡರು, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ