ಆ್ಯಪ್ನಗರ

ನರೇಗಾ ಸಾಧನೆ ಅತೃಪ್ತಿಕರ: ತಾಪಂ ಅಧ್ಯಕ್ಷ ಅಸಮಾಧಾನ

ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಹಾರೋಹಳ್ಳಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ, ಕಾಮಗಾರಿಗಳು ವಿಳಂಬಗತಿಯಲ್ಲಿ ಸಾಗುತ್ತಿದ್ದು, ಅಧಿಕಾರಿಗಳು ನಿಗದಿತ ಗುರಿ ತಲುಪಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಅಧ್ಯಕ್ಷ ಧನಂಜಯ ಸೂಚನೆ ನೀಡಿದರು.

Vijaya Karnataka 18 Dec 2018, 5:00 am
ಹಾರೋಹಳ್ಳಿ (ಕನಕಪುರ ತಾ.): ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ನರೇಗಾ) ಯೋಜನೆಯಡಿ ಹಾರೋಹಳ್ಳಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ, ಕಾಮಗಾರಿಗಳು ವಿಳಂಬಗತಿಯಲ್ಲಿ ಸಾಗುತ್ತಿದ್ದು, ಅಧಿಕಾರಿಗಳು ನಿಗದಿತ ಗುರಿ ತಲುಪಲು ಅಗತ್ಯಕ್ರಮ ಕೈಗೊಳ್ಳಬೇಕೆಂದು ತಾ.ಪಂ. ಅಧ್ಯಕ್ಷ ಧನಂಜಯ ಸೂಚನೆ ನೀಡಿದರು.
Vijaya Karnataka Web naregas performance is poor unhappy with the president
ನರೇಗಾ ಸಾಧನೆ ಅತೃಪ್ತಿಕರ: ತಾಪಂ ಅಧ್ಯಕ್ಷ ಅಸಮಾಧಾನ


ಹಾರೋಹಳ್ಳಿ-ಮರಳವಾಡಿ ಹೋಬಳಿಯ ನರೇಗಾ ಕಾಮಗಾರಿಯ ಪ್ರಗತಿ ಪರಿಶೀಲನೆಗಾಗಿ ಹಾರೋಹಳ್ಳಿ ಪಂಚಾಯತಿಗೆ ತಾ.ಪಂ. ಅಧ್ಯಕ್ಷ ಧನಂಜಯ ಮತ್ತು ಕಾರ್ಯನಿರ್ವಹಣಾಧಿಕಾರಿ ಶಿವರಾಂ ರವರು ಭೇಟಿನೀಡಿದ್ದರು.

ಗ್ರಾಮಗಳ ಅಭಿವೃದ್ಧಿಗೆ ನೆರವಾಗುವ ನರೇಗಾ ಯೋಜನೆ ತೀರಾ ಹೀನಾಯ ಸ್ಥಿತಿಯಲ್ಲಿದೆ. ತಾಲೂಕಿನಲ್ಲಿಯೇ ಅತಿ ಕಡಿಮೆ ನರೇಗಾ ಕಾಮಗಾರಿ ಮಾಡಿದ್ದು ಗ್ರಾಮಪಂಚಾಯಿತಿ ಸಾಧನೆ ಯತ್ತ ಸಾಗಬೇಕಾಗಿದೆ. ಪಂಚಾಯತಿ ವ್ಯಾಪ್ತಿಯ ವಾರ್ಡ್‌ ಮತ್ತು ಹಳ್ಳಿಗೆ ಬರುವ ನಾಗರೀಕರಿಗೆ ಜಾಬ್‌ಕಾರ್ಡುಗಳನ್ನು ನೀಡಿ ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯತ್ತ ಹೋಗಲು ಸೂಚನೆ ನೀಡಿದರು.

ಜಾಗೃತಿಗೆ ಸೂಚನೆ

ಉದ್ಯೋಗ ಖಾತರಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರು ಗ್ರಾಮಸ್ಥರು ಮುಂದೆ ಬರುವಂತೆ ಎಲ್ಲ ಹಳ್ಳಿಗಳಲ್ಲಿ ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಸ್ಥರಿಗೆ ಈ ಯೋಜನೆಯ ಸದುಪಯೋಗದ ಬಗ್ಗೆ ಅರಿವು ಮೂಡಿಸಲು ಆದೇಶಿಸಿದರು.

ಗ್ರಾ.ಪಂ. ಅಧ್ಯಕ್ಷ ಗುರುಪ್ರಸಾದ್‌, ಪಿಡಿಒ ರಂಗೇಗೌಡ, ತಾ.ಪಂ. ಸದಸ್ಯರಾದ ಸಲಾವುದ್ದೀನ್‌, ರವಿಕುಮಾರ್‌,ಶ್ರೀಕಂಠಯ್ಯ, ಗ್ರಾ.ಪಂ. ಸದಸ್ಯರಾದ ಕೋಟೆಕುಮಾರ್‌, ಮಹದೇವ್‌, ಶಿವಣ್ಣ, ಕಾರ್ಯದರ್ಶಿ ನರಸಿಂಹೇಗೌಡ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ