ಆ್ಯಪ್ನಗರ

ಕಪಾಲ ಬೆಟ್ಟದ ಬಳಿಯಲ್ಲೇ ಹಾರ್ನಗೆಡ್ಡೆ ಶಿಲುಬೆ ವಿವಾದ..! ಭಾನಾಮತಿಗೆ ಹೆದರಿ ಕ್ರಿಸ್ತನ ಜೊತೆ ಕೃಷ್ಣನ ಮೂರ್ತಿಗೆ ಬೇಡಿಕೆ..!

ಗೊಲ್ಲ ಸಮುದಾಯಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಕ್ರ್ರೈಸ್ತರದ್ದು ಕೇವಲ ಒಂದು ಕುಟುಂಬ. ಈವರೆಗೂ ಶಾಂತವಾಗಿದ್ದ ಗ್ರಾಮದಲ್ಲಿ ಏಸು ವಿವಾದ ಠಾಣೆವರೆಗೂ ಹಬ್ಬಿದೆ. ಇನ್ನು ಗೊಲ್ಲರೇ ಹೆಚ್ಚಿರುವ ಇಲ್ಲಿ ಕೃಷ್ಣನ ಮೂರ್ತಿ ಸಿದ್ದಗೊಳ್ಳಲಿ ಎಂಬ ವಾದವೂ ಕೇಳಿಬಂದಿದೆ.

Vijaya Karnataka Web 13 Jan 2020, 6:27 pm
ರಾಮನಗರ: ತಾಲೂಕಿನ ಗೊಲ್ಲರ ಚೆನ್ನಯ್ಯನ ದೊಡ್ಡಿಯ ಗುಡ್ಡೆಯಲ್ಲಿ (ಹಾರ್ನಗುಡ್ಡೆ) ವಿವಾದಕ್ಕೆ ಕಾರಣವಾಗಿರುವ ಏಸು ಪ್ರತಿಮೆ ಹಾಗೂ ಶಿಲುಬೆ (ಪ್ಲಸ್‌) ಇದೀಗ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದೆ..!
Vijaya Karnataka Web harnagudde
ಕಪಾಲ ಬೆಟ್ಟದ ಬಳಿಯಲ್ಲೇ ಹಾರ್ನಗೆಡ್ಡೆ ಶಿಲುಬೆ ವಿವಾದ..! ಭಾನಾಮತಿಗೆ ಹೆದರಿ ಕ್ರಿಸ್ತನ ಜೊತೆ ಕೃಷ್ಣನ ಮೂರ್ತಿಗೆ ಬೇಡಿಕೆ..!


ಈ ಬೆಟ್ಟದ ಬದಿಯಲ್ಲಿರುವ ಗೊಲ್ಲರ ದೊಡ್ಡಿಯಲ್ಲಿ 150ಕ್ಕೂ ಹೆಚ್ಚು ಗೊಲ್ಲರ ಕುಟುಂಬಗಳಿವೆ. ಗೊಲ್ಲರ ಚೆನ್ನಯ್ಯನ ದೊಡ್ಡಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿವೆ. ಇಲ್ಲಿ, ಭಾನಮತಿ ನಡೆದಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಸೋಮವಾರ ಬೆಳಗ್ಗೆಯೇ ಇಲ್ಲಿನ ಕ್ರೈಸ್ತ ಕುಟುಂಬದೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸ್‌ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

ನಡೆದಿದ್ದು ಏನು?

1965ರಲ್ಲಿ 2 ಕ್ರೈಸ್ತ ಕುಟುಂಬಗಳು ಗೊಲ್ಲರ ಚೆನ್ನಯ್ಯನ ದೊಡ್ಡಿಗೆ ಬಂದಿವೆ. ಇಲ್ಲಿ ಹಿಂದುಗಳೇ ಹೆಚ್ಚಿರುವ ಗ್ರಾಮದಲ್ಲಿ ಹಾರ್ನಗುಡ್ಡೆ ಎಂಬ ಪ್ರದೇಶವೂ ಇದೆ. ಇಲ್ಲಿ ಮುನೇಶ್ವರ ಹಾಗೂ ಮಾರಮ್ಮ ದೇವಿಯ ದೇವಾಲಯವೂ ಇದೆ. ಪಕ್ಕದಲ್ಲಿರುವ ಗುಡ್ಡದ ಮೇಲೆ ಕ್ರೈಸ್ತ ಧರ್ಮದ ಶಿಲುಬೆ (ಪ್ಲಸ್‌) ಇದೆ. ಗುಡ್ಡದ ಕೆಳಗಡೆ ಪುಟ್ಟದಾದ ಏಸು ದೇವಾಲಯವೂ ಇದೆ. ಈ ಎರಡು ಕುಟುಂಬಗಳು ಪ್ರಾರ್ಥನೆ ಸಲ್ಲಿಸಲು ಇವುಗಳನ್ನು ಸ್ಥಾಪಿಸಿಕೊಂಡಿವೆ ಎನ್ನಲಾಗಿದೆ.

ಕಪಾಲ ಬಳಿಕ ಹಾರ್ನಗುಡ್ಡೆ ವಿವಾದ: ಭೂ ಮಂಜೂರಿಗೂ ಮುನ್ನವೇ ಏಸು ಶಿಲುಬೆ, ಗುಡಿ ನಿರ್ಮಾಣಕ್ಕೆ ವಿರೋಧ

ಇಷ್ಟೆಲ್ಲವೂ ಅನೇಕ ವರ್ಷಗಳಿಂದಲ್ಲೂ ರೂಢಿಯಲ್ಲಿದೆ. ಇದೀಗ ಕನಕಪುರದ ಏಸು ಬೆಟ್ಟದ ವಿವಾದ ಹೆಚ್ಚಾದಂತೆ ಇಲ್ಲಿಯೂ ವಿವಾದದ ಕಾವು ಏರತೊಡಗಿದೆ. ಇಲ್ಲಿ ಒಟ್ಟು 2 ಎಕರೆ ಪ್ರದೇಶವನ್ನು ಮಂಜೂರು ಮಾಡಿಕೊಡುವಂತೆ ವಾಣಿ ಮೇರಿ ಎಂಬುವವರು ಕಂದಾಯ ಇಲಾಖೆಗೆ ಮನವಿಯನ್ನು ಸಲ್ಲಿಸಿದ್ದರು. ಆದರೆ, ಇದನ್ನು ಇಲಾಖೆ ತಿರಸ್ಕರಿಸಿದೆ. ಹೀಗಾಗಿ, ಹೈಕೋರ್ಟ್‌ನಲ್ಲಿ ಅವರು ದಾವೆ ಹೂಡಿದ್ದಾರೆ.
ಈ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೋಳಿ ಮೊಟ್ಟೆ ಹೊಡೆಯಲಾಗಿದೆ. 2 ರಸ್ತೆಗಳಲ್ಲಿಯೂ ಮೊಟ್ಟೆ ಬಿಸಾಡಲಾಗಿದೆ. ಇಲ್ಲಿ ಭಾನಮತಿ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಏಸು ಪ್ರತಿಮೆ ವಿವಾದ ಸೃಷ್ಟಿಯಾದ ಬಳಿಕ ಮೊಟ್ಟೆ ಹೊಡೆದಿರುವುದು ಇದೀಗ ಗಲಾಟೆಗೆ ಕಾರಣವಾಗಿದೆ.

ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ಜ. 13ರಂದು ಕನಕಪುರ ಚಲೋ

ಕ್ರಿಸ್ತನ ಜೊತೆಗೆ ಕೃಷ್ಣನೂ ಇರಲಿ..!

ಗೊಲ್ಲ ಸಮುದಾಯಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಕ್ರ್ರೈಸ್ತರದ್ದು ಕೇವಲ ಒಂದು ಕುಟುಂಬ. ಈವರೆಗೂ ಶಾಂತವಾಗಿದ್ದ ಗ್ರಾಮದಲ್ಲಿ ಏಸು ವಿವಾದ ಠಾಣೆವರೆಗೂ ಹಬ್ಬಿದೆ. ಇನ್ನು ಗೊಲ್ಲರೇ ಹೆಚ್ಚಿರುವ ಇಲ್ಲಿ ಕೃಷ್ಣನ ಮೂರ್ತಿ ಸಿದ್ದಗೊಳ್ಳಲಿ ಎಂಬ ವಾದವೂ ಕೇಳಿಬಂದಿದ್ದು, ಪ್ರತಿಮೆ ಹಾಗೂ ಮೂರ್ತಿಗಳ ಜಪಾಪಟಿ ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

ರಾಮನಗರದ ಕಪಾಲ ಬೆಟ್ಟದಲ್ಲಿ ಏಸುವಿನ ಪ್ರತಿಮೆ ನಿರ್ಮಾಣ ಕಾಮಗಾರಿ ಸ್ಥಗಿತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ