ಆ್ಯಪ್ನಗರ

ಡಬಲ್‌ ಗೇಮ್‌ ರಾಜಕೀಯ ಬಿಡಬೇಕು: ಕಾಂಗ್ರೆಸ್‌ಗೆ ಎಚ್‌‌ಡಿಕೆ ಟಾಂಗ್‌!

ನಾನು ಚನ್ನಪಟ್ಟಣ ಕ್ಷೇತ್ರವನ್ನ ಬಿಡುವ ಪ್ರಶ್ನೆಯೇ ಇಲ್ಲ. ಅಂತಹ ಸುದ್ದಿಗಳಿಗೆ ಫುಲ್ ಸ್ಟಾಪ್ ಹಾಕಿಬಿಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಾನು ರಾಜ್ಯಸಭೆಗೆ ಹೋಗುವ ವಿಚಾರ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

Vijaya Karnataka Web 2 Jun 2020, 5:01 pm
ರಾಮನಗರ: ನಾನು ಚನ್ನಪಟ್ಟಣ ಕ್ಷೇತ್ರವನ್ನ ಬಿಡುವ ಪ್ರಶ್ನೆಯೇ ಇಲ್ಲ. ಅಂತಹ ಸುದ್ದಿಗಳಿಗೆ ಫುಲ್ ಸ್ಟಾಪ್ ಹಾಕಿಬಿಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Vijaya Karnataka Web HD kumaraswamy


ಚನ್ನಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯಸಭಾ ಚುನಾವಣೆಯ ಬಗ್ಗೆ ನಮ್ಮ ಪಕ್ಷ ಇನ್ನು ಯಾವ ನಿರ್ಧಾರ ಮಾಡಿಲ್ಲ. ಯಾವ ಪಕ್ಷದ ನಾಯಕರನ್ನೂ ಭೇಟಿ ಮಾಡಿಲ್ಲ. ನಾನು ರಾಜ್ಯಸಭೆಗೆ ಹೋಗುವ ವಿಚಾರ ಸುಳ್ಳು. ಚನ್ನಪಟ್ಟಣ ಬಿಟ್ಟು ನಿಖಿಲ್ ಗೆ ಸ್ಥಾನ ಕೊಡೋ ವಿಚಾರ ಸುಳ್ಳು. ಅವನು ಮುಂದೆ ರಾಜಕೀಯದಲ್ಲಿ ಅನುಭವ ಬರಲಿ ಅಂತಾ ಜೊತೆಗೆ ಬರ್ತಿದ್ದಾನೆ ಅಷ್ಟೇ. ಮುಂದಿನ ಬಾರಿಯೂ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡ್ತೇನೆ ಎಂದು ಹೇಳಿದರು.

ಒಂದು ಕಡೆ ಕೆಲವರು ರಾಮನಗರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಹೊರಟ್ಟಿದ್ದಾರೆ. ನನಗೆ ಬಹಳ ಬೆಂಬಲ ಕೊಟ್ಟು ಸಿಎಂ ಮಾಡಿದ್ರು, ಅದೆಲ್ಲವೂ ನನಗೆ ಗೊತ್ತಿದೆ. ಹೊರಗಡೆ ಯಾವ ರೀತಿ ಪ್ರಚಾರ ಪಡೆದ್ರು ಅಂತಾನೂ ಗೊತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಸುಮ್ಮನೆ ಕೂರಲ್ಲ. ಕುಮಾರಸ್ವಾಮಿ ಹೆಸರು ಬಳಸಿ ಅನುಕಂಪ ಗಿಟ್ಟಿಸಲು ಹೊರಟ್ಟಿದ್ದಾರೆ. ಕೆಲವರು ಡಬಲ್ ಗೇಮ್ ರಾಜಕೀಯ ಬಿಡಬೇಕು ಎಂದು ಮಾರ್ಮಿಕ ಹೇಳಿಕೆ ನೀಡಿದರು.

ರಾಜ್ಯದಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಯಶಸ್ವಿ! ಹುಬ್ಬಳ್ಳಿ ಕಿಮ್ಸ್‌ ವೈದ್ಯರ ಸಾಧನೆ!

ದೇವೇಗೌಡರ ಕುಟುಂಬಕ್ಕೆ ರಕ್ಷಣೆ ಕೊಟ್ಟಿದ್ದೇವೆಂದು ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನ ಬಿಡಬೇಕು.
ನಾವು ಸ್ಟಂಟ್ ಹೊಡೆದು ರಾಜಕೀಯ ಮಾಡಿಲ್ಲ, ನಮ್ಮದು ಹೋರಾಟದ ರಾಜಕೀಯ ಎಂದು ಡಿ.ಕೆ.ಬ್ರದರ್ಸ್ ಹೆಸರು ಹೇಳದೆ ಮಾರ್ಮಿಕವಾಗಿ ಟಾಂಗ್ ನೀಡಿದರು.

ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಇಲ್ಲ :
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಯಾವ ಮೈತ್ರಿ, ಎಲ್ಲಿದೆ ಮೈತ್ರಿ ಎಂದು ಪ್ರಶ್ನಿಸಿದರು. ನಾನು ಯಾರ ಋಣದಲ್ಲಿಯೂ ಇಲ್ಲ. ನನ್ನನ್ನ ಸಿಎಂ ಮಾಡಿ ಎಂದು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಕಾಂಗ್ರೆಸ್ ನವರೇ ಬಂದು ನೀನೆ ವಹಿಸಿಕೊಳ್ಳಬೇಕೆಂದು ಬಂದಿದ್ದು. ಮೋದಿಯವರು 4 ವರ್ಷ ನಿನಗೆ ಏನು ಸಮಸ್ಯೆ ಇಲ್ಲದಂತೆ ನೋಡಿಕೊಳ್ತೀನಿ ಬಾ ಎಂದಿದ್ರು. ಅವಾಗಲೇ ನಾನು ಹೋಗಿಲ್ಲ. ನಾವು ಎಂದೂ ಸಹ ಅಧಿಕಾರ ಹುಡುಕಿ ಹೋಗಿಲ್ಲ. ಯಾರ ಋಣದಲ್ಲಿಯೂ ಇಲ್ಲ ಎಂದು ಹೇಳಿದರು.

ಚಂಡಮಾರುತ ಮುನ್ನೆಚ್ಚರಿಕೆ: ಕೊಡಗು ಜಿಲ್ಲೆಗೆ 25 ಮಂದಿಯ ಎನ್‌ಡಿಆರ್‌ಎಫ್‌ ತುಕಡಿ ಆಗಮನ

ರೈತರ ಋಣ ತೀರಿಸಿದ್ದೇನೆ:
ಕಾಂಗ್ರೆಸ್ ನವರಿಗೆ ಬೇಕಿತ್ತು ಮಾಡಿಕೊಂಡಿದ್ರು. ನನಗೆ ರೈತರ ಋಣ ಇತ್ತು, ಹಾಗಾಗಿ 14 ತಿಂಗಳಲ್ಲಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಆ ರೈತನ ಋಣ ತೀರಿಸಬೇಕಿತ್ತು, ತೀರಿಸಿದ್ದೇನೆ. ನಾನು ನನ್ನ ಪಕ್ಷವನ್ನ ದಿವಾಳಿ ಎಬ್ಬಿಸಿ, ಬೇರೆ ಯಾರಿಗೋ ಅಧಿಕಾರ ಕೊಡಲು ಓಡಾಡಲ್ಲ. ನಮ್ಮದು ಸಣ್ಣ ಪಕ್ಷ, ಆದರೆ, ರೈತರ ಪಕ್ಷ, ರೈತರ ಪರವಾಗಿ ಕೆಲಸ ಮಾಡುತ್ತೇವೆ. ದೇವೇಗೌಡರು 60 ವರ್ಷದ ರಾಜಕೀಯ ಜೀವನದಲ್ಲಿ ಎಂದೂ ಅಧಿಕಾರ ಹುಡುಕಿ ಹೋಗಿಲ್ಲ. ಹಿಂಬಾಗಿಲಿನಿಂದ ಯಾವತ್ತು ರಾಜಕಾರಣ ಮಾಡಿಲ್ಲ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ