ಆ್ಯಪ್ನಗರ

Bengaluru Mysuru Expressway: ಸರ್ವೀಸ್ ರಸ್ತೆ ಮಾಡಿದ್ರೆ ಹೆದ್ದಾರಿಗೆ ಟೋಲ್‌ ಕಟ್ಟೋರು ಯಾರು? NHAI ಯೋಜನಾ ನಿರ್ದೇಶಕರ ಪ್ರಶ್ನೆ

Bengaluru Mysuru Expressway Toll Rate: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಹಲವು ಕಾರಣಗಳಿಗೆ ಸದಾ ಸುದ್ದಿಯಲ್ಲಿದೆ. ಇಷ್ಟು ದಿನ ಸರ್ಕಾರ ಇದನ್ನು ದಶಪಥ ಹೆದ್ದಾರಿ ಎಂದು ಹೇಳಿತ್ತು. ಆದರೆ, ಈಗ ಇದು 6 ಪಥದ ಹೆದ್ದಾರಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೇ ಸ್ಪಷ್ಟಪಡಿಸಿದ್ದಾರೆ. ಅದಲ್ಲದೇ ಸರ್ವೀಸ್ ರಸ್ತೆ ಮಾಡಿದ್ರೆ ಜನ ಅದರಲ್ಲಿಯೇ ಸಂಚರಿಸ್ತಾರೆ. ಆಗ ಹೆದ್ದಾರಿಗೆ ಟೋಲ್‌ ಕಟ್ಟೋರು ಯಾರು ಎಂದು ಕೂಡ ಅವರು ಪ್ರಶ್ನೆ ಮಾಡಿದ್ದು, ಅದಕ್ಕಾಗಿಯೇ ಸರ್ವೀಸ್ ರೋಡ್‌ ಕಂಟಿನ್ಯೂಟಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

Edited byಅವಿನಾಶ ವಗರನಾಳ | Vijaya Karnataka Web 15 Mar 2023, 4:03 pm

ಹೈಲೈಟ್ಸ್‌:


  • ಸರ್ವೀಸ್ ರಸ್ತೆ ಮಾಡಿದ್ರೆ ಜನ ಅದರಲ್ಲಿಯೇ ಸಂಚರಿಸ್ತಾರೆ, ಆಗ ಹೆದ್ದಾರಿಗೆ ಟೋಲ್‌ ಕಟ್ಟೋರು ಯಾರು?
  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿಟಿ ಶ್ರೀಧರ್‌ ಪ್ರಶ್ನೆ
  • ಇದು ದಶಪಥ ಹೆದ್ದಾರಿಯಲ್ಲ, ಆರು ಪಥದ ಹೆದ್ದಾರಿಯಷ್ಟೇ ಎಂದ ಬಿಟಿ ಶ್ರೀಧರ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Bengaluru - Mysuru Expressway
ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ (ಸಂಗ್ರಹ ಚಿತ್ರ)
ರಾಮನಗರ: ಎಲ್ರೂ ಸರ್ವೀಸ್ ರಸ್ತೆಯಲ್ಲಿ ಹೋದರೆ ಟೋಲ್ ಕಟ್ಟುವವರು ಯಾರು? ಹಾಗಾಗಿ ಸರ್ವೀಸ್ ರಸ್ತೆ ಕಂಟಿನ್ಯುಟಿ ಕೊಟ್ಟಿಲ್ಲ. ಅದಲ್ಲದೇ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ದಶಪಥ ಹೆದ್ದಾರಿ ಅಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಿಟಿ ಶ್ರೀಧರ್ ಹೇಳಿದ್ದಾರೆ.
ರಾಮನಗರದಲ್ಲಿ ಕನ್ನಡಪರ ಸಂಘಟನೆಗಳು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ದಶಪಥ ಹೆದ್ದಾರಿ ಅಲ್ಲ. ಅದು ಆರು ಪಥದ ರಸ್ತೆ ಮಾತ್ರ. ಕ್ಯಾಬಿನೆಟ್‌ ಅನುಮೋದನೆ ಕೇವಲ 6 ಪಥಕ್ಕೆ ಮಾತ್ರ ಆಗಿದೆ ಎಂದು ಹೇಳಿದ್ದಾರೆ.

6 ಪಥದ ಹೆದ್ದಾರಿಗೆ ನಾವು ಸರ್ವೀಸ್ ರಸ್ತೆ ನೀಡಿದ್ದೇವೆ. ಎಲ್ಲ ಸರ್ವೀಸ್ ರಸ್ತೆಯನ್ನು ಪೂರ್ಣ ಮಾಡಿದರೆ ಜನ ಟೋಲ್ ಕಟ್ಟಲ್ಲ. ಸರ್ವೀಸ್ ರಸ್ತೆಯಲ್ಲಿಯೇ ಹೋಗಿಬಿಡ್ತಾರೆ. ಜನ ಹೆದ್ದಾರಿಗೆ ಬರುವುದಿಲ್ಲ, ಹಾಗಾಗಿ ಕೆಲ ಕಡೆ ಸರ್ವೀಸ್ ರಸ್ತೆಗೆ ಕಂಟ್ಯುನಿಟಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಜನರ ಅನುಕೂಲಕ್ಕಿಂತ ಟೋಲ್‌ ಸಂಗ್ರಹವೇ ಪ್ರಮುಖ ಎಂಬುದನ್ನು ಪರೋಕ್ಷವಾಗಿ ಬಿಟಿ ಶ್ರೀಧರ್‌ ಹೇಳಿದ್ದಾರೆ.


ಈಗ ಟೋಲ್ ನಿಲ್ಲಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಆ ಅಧಿಕಾರ ನನಗೆ ಇಲ್ಲ. ಆದರೆ, ಪ್ರತಿಭಟನೆ, ಸಮಸ್ಯೆಗಳ ಬಗ್ಗೆ ವರದಿ ನೀಡಿದ್ದೇನೆ. ಹೆದ್ದಾರಿಯಲ್ಲಿ 25 KM ಗೆ ಒಂದು ಆಂಬುಲೆನ್ಸ್ ಇರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರದ ನಿರ್ದೇಶಕ ಬಿಟಿ ಶ್ರೀಧರ್‌ ಹೇಳಿದ್ದಾರೆ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಶುರು: ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣಿಕರಿಗೆ ಶುಲ್ಕದ ಹೊರೆ
ಸರ್ವಿಸ್ ರಸ್ತೆ ಪೂರ್ಣವಾಗದೇ ಟೋಲ್ ಕಲೆಕ್ಷನ್ ವಿಚಾರಕ್ಕೆ ಮಂಗಳವಾರ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಬಳಿ ಕಾಂಗ್ರೆಸ್‌ ಸೇರಿ ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೇ ವಿಚಾರವಾಗಿ ಬುಧವಾರ ಕನ್ನಡ ಪರ ಸಂಘಟನೆಗಳು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದವು. ಸಂಘಟನೆಗಳ ಒತ್ತಡಕ್ಕೆ ಮಣಿದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಬಿಟಿ ಶ್ರೀಧರ್‌ ಇದು ದಶಪಥ ಹೆದ್ದಾರಿ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಸರ್ಕಾರ ಮಾತ್ರ ದಶಪಥ ಎಂದು ಹೇಳುತ್ತಿರುವುದು ಗೊಂದಲ ಮೂಡಿಸಿದೆ.

Bengaluru - Mysuru Expressway: ಮಾ.14 ರಿಂದ ಮೈಸೂರು ಬೆಂಗಳೂರು ದಶಪಥ ಟೋಲ್‌ ಆರಂಭವಾಗುವುದು ಡೌಟ್‌
ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಟೋಲ್‌ ದರ ಎಷ್ಟಿದೆ?
  • ಕಾರು, ಜೀಪ್, ವ್ಯಾನ್ಗೆ ಏಕಮುಖ ಸಂಚಾರಕ್ಕೆ 135 ರೂ. * ದ್ವಿಮುಖ ಸಂಚಾರಕ್ಕೆ 205 ರೂ.
  • ಸ್ಥಳೀಯ ವಾಹನಗಳ ಏಕಮುಖ ಸಂಚಾರಕ್ಕೆ 70 ರೂ.
  • ಕಾರು, ಜೀಪ್, ವ್ಯಾನ್ಗಳಿಗೆ ತಿಂಗಳ ಪಾಸ್ ದರ 4,425 ರೂ.
  • ಲಘು ಸರಕುವಾಹನ, ಮಿನಿ ಬಸ್ಗಳ ಏಕಮುಖ ಸಂಚಾರಕ್ಕೆ 220 ರೂ. * ದ್ವಿಮುಖ ಸಂಚಾರಕ್ಕೆ 330 ರೂ.
  • ಲಘು ಸರಕುವಾಹನ, ಮಿನಿ ಬಸ್ಗಳಿಗೆ ತಿಂಗಳ ಪಾಸ್ ದರ 7315 ರೂ.
  • ಟ್ರಕ್‌/ಬಸ್‌ ಏಕಮುಖ ಸಂಚಾರಕ್ಕೆ 460 ರೂ. * ದ್ವಿಮುಖ ಸಂಚಾರಕ್ಕೆ 690 ರೂ.
  • ಟ್ರಕ್‌/ಬಸ್ಗಳ ತಿಂಗಳ ಪಾಸ್ ದರ 15,325 ರೂ.
  • 3 ಆಕ್ಸೆಲ್‌ ವಾಣಿಜ್ಯ ವಾಹನ ಏಕಮುಖ ಸಂಚಾರ 500 ರೂ. * ದ್ವಿಮುಖ ಸಂಚಾರಕ್ಕೆ 750 ರೂ.
  • ಅತಿ ಭಾರದ ವಾಹನಗಳು ಏಕಮುಖ ಸಂಚಾರಕ್ಕೆ 880 ರೂ. * ದ್ವಿಮುಖ ಸಂಚಾರಕ್ಕೆ 1315 ರೂ.
ಲೇಖಕರ ಬಗ್ಗೆ
ಅವಿನಾಶ ವಗರನಾಳ
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಕಳೆದ 6 ವರ್ಷಗಳಿಂದ ವಿವಿಧ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಒಂದಿಷ್ಟು ದಿನ ಕೆಲ ಸಂಸ್ಥೆಗಳಲ್ಲಿ ಸಾರ್ವಜನಿಕ ಸಂಪರ್ಕವನ್ನು ನಿಭಾಯಿಸಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಭತ್ತದ ನಾಡು, ಹನುಮ ಹುಟ್ಟಿದ ನಾಡು ಗಂಗಾವತಿಯಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ರಾಜಕೀಯ ವಿಷಯಗಳು, ಪ್ರಚಲಿತ ವಿದ್ಯಮಾನಗಳ ಮೇಲೆ ಆಸಕ್ತಿ. ತಂತ್ರಜ್ಞಾನದ ವಿಷಯಗಳು ಇವರಿಗೆ ಹೆಚ್ಚು ಆಪ್ತ. ಇವರಿಗೆ ಊರೂರು ಸುತ್ತೋದು.. ಕ್ರಿಕೆಟ್‌ ಆಡೋದು.. ಅದಿದು ಹುಡುಕೋದು ಇಷ್ಟ. ಅಂತೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ