ಬಿಡದಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಿಮಿತ್ತ ಬಿಡದಿ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ರಜೆದಿನವೂ ಕಚೇರಿಗೆ ಆಗಮಿಸಿ ಕಾರ್ಯ ನಿರ್ವಹಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2020ರ ಸಂಬಂಧ ಇವಿಪಿ ಕಾರ್ಯಕ್ರಮದಡಿ ಮತದಾರರ ವಿವರವನ್ನು ಪರಿಶೀಲಿಸಿ ಆಧಾರ್ ಸಂಖ್ಯೆ ಲಿಂಕ್ ಮಾಡುವ ಮುಖೇನ ತಂತ್ರಾಂಶದಲ್ಲಿಅಳವಡಿಸುವ ಕಾರ್ಯದ ಪ್ರಗತಿ ಕುಂಠಿತವಾಗಿದೆ. ಹೀಗಾಗಿ ದೋಷರಹಿತ ಮತದಾರರ ಪಟ್ಟಿ ತಯಾರಿಸುವ ಸಂಬಂಧ ಸರಕಾರ ಕೆಲವು ಇಲಾಖೆಗಳಿಗೆ ರಜೆರಹಿತ ಕಾರ್ಯ ನಿರ್ವಹಣೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿಪುರಸಭೆ ಅಧಿಕಾರಿಗಳು ದಸರಾ ಹಬ್ಬ ಹಾಗೂ ಎರಡನೇ ಶನಿವಾರ ರಜೆದಿನದಲ್ಲೂಕಚೇರಿಗೆ ಹಾಜರಾಗಿ ಕರ್ತವ್ಯ ಪಾಲನೆ ಮಾಡಿದರು.
ಮತದಾರರು ಚುನಾವಣೆ ನಡೆಯುವ ಸಮಯದಲ್ಲಿಮತದಾನದಿಂದ ಹೊರಗುಳಿಯುವುದನ್ನು ತಪ್ಪಿಸಲು ಹಾಗೂ ಮತದಾನದ ಪ್ರಮಾಣವನ್ನು ಶೇ.100ರಷ್ಟು ಹೆಚ್ಚಿಸಲು ದಿಟ್ಟ ಕ್ರಮವನ್ನು ಕೈಗೊಂಡಿದೆ. ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿದೆ. ಹಾಗಾಗಿ ಎಲ್ಲಾಮತದಾರರ ಪಟ್ಟಿಯಲ್ಲಿಆಧಾರ್ ಸಂಖ್ಯೆಯನ್ನು ನಮೂದಿಸಿ ಹೊಸ ಮತದಾರರ ಪಟ್ಟಿಯನ್ನು ತಯಾರಿಸಲು ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿಗಳು ಅ.4ರಂದು ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದರು. ಜಿಲ್ಲೆಯ ಎಲ್ಲಾನಗರಸಭೆ ಮತ್ತು ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತ್ವರಿತವಾಗಿ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಇವಿಪಿ ತಂತ್ರಾಂಶದಲ್ಲಿಲಿಂಕ್ ಮಾಡಿ ಪಟ್ಟಿ ತಯಾರಿಸಿ ಪ್ರತಿದಿನ 4 ಗಂಟೆಯೊಳಗೆ ಜಿಲ್ಲೆಯ ನಗರಾಭಿವೃದ್ಧಿ ಕೋಶಕ್ಕೆ ರವಾನಿಸಬೇಕಾಗಿದೆ.
ಅಕ್ಟೋಬರ್ 15ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜಿಲ್ಲಾಚುನಾವಣಾ ವಿಭಾಗವು ಖಡಕ್ ಸೂಚನೆ ನೀಡಿದೆ. ಹೀಗಾಗಿ ಬಿಡದಿ ಪುರಸಭೆ ವ್ಯಾಪ್ತಿಯ ಎಲ್ಲಾಮತದಾರರಿಂದ ಆಧಾರ್ ಕಾರ್ಡ್ ಮತ್ತು ಎಪಿಕ್ ಕಾರ್ಡ್ ನಕಲುಗಳನ್ನು ಸಂಗ್ರಹಿಸಿ ಇವಿಪಿ ತಂತ್ರಾಂಶದಲ್ಲಿಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಪುರಸಭೆ ಸಿಬ್ಬಂದಿ ಮನೆ ಮನೆಗೆ ತೆರಳಿ ಮತದಾರರಿಂದ ಜೆರಾಕ್ಸ್ ಪ್ರತಿಗಳನ್ನು ಶೇಖರಿಸಿ ಕಚೇರಿಗೆ ತಲುಪಿಸುವ ಕಾಯಕದಲ್ಲಿತೊಡಗಿದ್ದಾರೆ. ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ22 ಸಾವಿರ ಮತದಾರರಿದ್ದು, ಪ್ರತಿದಿನ ಒಂದು ಸಾವಿರಕ್ಕೂ ಹೆಚ್ಚು ಜನರಿಂದ ದಾಖಲೆಗಳ ಸಂಗ್ರಹಿಸಿ ಲಿಂಕ್ ಮಾಡಲಾಗುತ್ತಿದೆ ಎನ್ನಲಾಗಿದೆ.
ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಅಗತ್ಯ ಕ್ರಮ ಕೈ ಗೊಳ್ಳುವ ಉದ್ದೇಶದಿಂದ ಚುನಾವಣೆ ಗುರುತಿನ ಚೀಟಿ ಮತ್ತು ಆಧಾರ್ ಸಂಖ್ಯೆಯನ್ನು ಇವಿಪಿ ಮೊಬೈಲ್ ಆಪ್ ತಂತ್ರಾಂಶಕ್ಕೆ ಅಳವಡಿಸಲು ಹಾಗೂ ನಿಗದಿತ ಅವಧಿಯಲ್ಲಿಪ್ರಕ್ರಿಯೆ ಪೂರ್ಣಗಳಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಮತದಾರರ ಪಟ್ಟಿಯ ವಿವರಗಳನ್ನು ಪರಿಶೀಲಿಸಿ ಮತದಾರರ ಪಟ್ಟಿ ತಯಾರಿಸುವುದು ಪರಿಷ್ಕರಣೆಯ ಉದ್ದೇಶವಾಗಿದೆ. ಆದ್ದರಿಂದ ಪುರಸಭೆ ಕಾರ್ಯಾಲಯದ ಸಿಬ್ಬಂದಿಗೆ ರಜೆ ದಿನದಲ್ಲಿಯೂ ಕಾರ್ಯ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ. ಪುರಸಭೆ ವ್ಯಾಪ್ತಿಯಲ್ಲಿಸುಮಾರು 22 ಸಾವಿರ ಮತದಾರರಿದ್ದು, ನಿಗದಿತ ಅವಧಿಯೊಳಗೆ ಗುರಿ ಮುಟ್ಟಲು ಶ್ರಮಿಸಲಾಗುವುದು.
-ಚೇತನ್ ಎಸ್.ಕೊಳವಿ, ಪುರಸಭೆ ಮುಖ್ಯಾಧಿಕಾರಿ
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ 2020ರ ಸಂಬಂಧ ಇವಿಪಿ ಕಾರ್ಯಕ್ರಮದಡಿ ಮತದಾರರ ವಿವರವನ್ನು ಪರಿಶೀಲಿಸಿ ಆಧಾರ್ ಸಂಖ್ಯೆ ಲಿಂಕ್ ಮಾಡುವ ಮುಖೇನ ತಂತ್ರಾಂಶದಲ್ಲಿಅಳವಡಿಸುವ ಕಾರ್ಯದ ಪ್ರಗತಿ ಕುಂಠಿತವಾಗಿದೆ. ಹೀಗಾಗಿ ದೋಷರಹಿತ ಮತದಾರರ ಪಟ್ಟಿ ತಯಾರಿಸುವ ಸಂಬಂಧ ಸರಕಾರ ಕೆಲವು ಇಲಾಖೆಗಳಿಗೆ ರಜೆರಹಿತ ಕಾರ್ಯ ನಿರ್ವಹಣೆಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿಪುರಸಭೆ ಅಧಿಕಾರಿಗಳು ದಸರಾ ಹಬ್ಬ ಹಾಗೂ ಎರಡನೇ ಶನಿವಾರ ರಜೆದಿನದಲ್ಲೂಕಚೇರಿಗೆ ಹಾಜರಾಗಿ ಕರ್ತವ್ಯ ಪಾಲನೆ ಮಾಡಿದರು.
ಮತದಾರರು ಚುನಾವಣೆ ನಡೆಯುವ ಸಮಯದಲ್ಲಿಮತದಾನದಿಂದ ಹೊರಗುಳಿಯುವುದನ್ನು ತಪ್ಪಿಸಲು ಹಾಗೂ ಮತದಾನದ ಪ್ರಮಾಣವನ್ನು ಶೇ.100ರಷ್ಟು ಹೆಚ್ಚಿಸಲು ದಿಟ್ಟ ಕ್ರಮವನ್ನು ಕೈಗೊಂಡಿದೆ. ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿದೆ. ಹಾಗಾಗಿ ಎಲ್ಲಾಮತದಾರರ ಪಟ್ಟಿಯಲ್ಲಿಆಧಾರ್ ಸಂಖ್ಯೆಯನ್ನು ನಮೂದಿಸಿ ಹೊಸ ಮತದಾರರ ಪಟ್ಟಿಯನ್ನು ತಯಾರಿಸಲು ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿಜಿಲ್ಲಾಧಿಕಾರಿಗಳು ಅ.4ರಂದು ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದರು. ಜಿಲ್ಲೆಯ ಎಲ್ಲಾನಗರಸಭೆ ಮತ್ತು ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ತ್ವರಿತವಾಗಿ ಚುನಾವಣಾ ಗುರುತಿನ ಚೀಟಿ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಇವಿಪಿ ತಂತ್ರಾಂಶದಲ್ಲಿಲಿಂಕ್ ಮಾಡಿ ಪಟ್ಟಿ ತಯಾರಿಸಿ ಪ್ರತಿದಿನ 4 ಗಂಟೆಯೊಳಗೆ ಜಿಲ್ಲೆಯ ನಗರಾಭಿವೃದ್ಧಿ ಕೋಶಕ್ಕೆ ರವಾನಿಸಬೇಕಾಗಿದೆ.
ಅಕ್ಟೋಬರ್ 15ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜಿಲ್ಲಾಚುನಾವಣಾ ವಿಭಾಗವು ಖಡಕ್ ಸೂಚನೆ ನೀಡಿದೆ. ಹೀಗಾಗಿ ಬಿಡದಿ ಪುರಸಭೆ ವ್ಯಾಪ್ತಿಯ ಎಲ್ಲಾಮತದಾರರಿಂದ ಆಧಾರ್ ಕಾರ್ಡ್ ಮತ್ತು ಎಪಿಕ್ ಕಾರ್ಡ್ ನಕಲುಗಳನ್ನು ಸಂಗ್ರಹಿಸಿ ಇವಿಪಿ ತಂತ್ರಾಂಶದಲ್ಲಿಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಪುರಸಭೆ ಸಿಬ್ಬಂದಿ ಮನೆ ಮನೆಗೆ ತೆರಳಿ ಮತದಾರರಿಂದ ಜೆರಾಕ್ಸ್ ಪ್ರತಿಗಳನ್ನು ಶೇಖರಿಸಿ ಕಚೇರಿಗೆ ತಲುಪಿಸುವ ಕಾಯಕದಲ್ಲಿತೊಡಗಿದ್ದಾರೆ. ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ22 ಸಾವಿರ ಮತದಾರರಿದ್ದು, ಪ್ರತಿದಿನ ಒಂದು ಸಾವಿರಕ್ಕೂ ಹೆಚ್ಚು ಜನರಿಂದ ದಾಖಲೆಗಳ ಸಂಗ್ರಹಿಸಿ ಲಿಂಕ್ ಮಾಡಲಾಗುತ್ತಿದೆ ಎನ್ನಲಾಗಿದೆ.
ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಅಗತ್ಯ ಕ್ರಮ ಕೈ ಗೊಳ್ಳುವ ಉದ್ದೇಶದಿಂದ ಚುನಾವಣೆ ಗುರುತಿನ ಚೀಟಿ ಮತ್ತು ಆಧಾರ್ ಸಂಖ್ಯೆಯನ್ನು ಇವಿಪಿ ಮೊಬೈಲ್ ಆಪ್ ತಂತ್ರಾಂಶಕ್ಕೆ ಅಳವಡಿಸಲು ಹಾಗೂ ನಿಗದಿತ ಅವಧಿಯಲ್ಲಿಪ್ರಕ್ರಿಯೆ ಪೂರ್ಣಗಳಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ. ಮತದಾರರ ಪಟ್ಟಿಯ ವಿವರಗಳನ್ನು ಪರಿಶೀಲಿಸಿ ಮತದಾರರ ಪಟ್ಟಿ ತಯಾರಿಸುವುದು ಪರಿಷ್ಕರಣೆಯ ಉದ್ದೇಶವಾಗಿದೆ. ಆದ್ದರಿಂದ ಪುರಸಭೆ ಕಾರ್ಯಾಲಯದ ಸಿಬ್ಬಂದಿಗೆ ರಜೆ ದಿನದಲ್ಲಿಯೂ ಕಾರ್ಯ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ. ಪುರಸಭೆ ವ್ಯಾಪ್ತಿಯಲ್ಲಿಸುಮಾರು 22 ಸಾವಿರ ಮತದಾರರಿದ್ದು, ನಿಗದಿತ ಅವಧಿಯೊಳಗೆ ಗುರಿ ಮುಟ್ಟಲು ಶ್ರಮಿಸಲಾಗುವುದು.
-ಚೇತನ್ ಎಸ್.ಕೊಳವಿ, ಪುರಸಭೆ ಮುಖ್ಯಾಧಿಕಾರಿ