ಆ್ಯಪ್ನಗರ

ಆನ್‌ಲೈನ್‌ ಬುಕ್ಕಿಂಗ್‌, ಗ್ರಾಹಕರಿಗೆ ವಂಚನೆ

ಆನ್‌ಲೈನ್‌ನಲ್ಲಿಬುಕ್‌ ಮಾಡುವ ಗ್ರಾಹಕರಿಗೆ ಕಳಪೆ ಗುಣಮಟ್ಟದ ವಸ್ತುಗಳನ್ನು ರವಾನಿಸಿ, ಅದನ್ನು ತಿರಸ್ಕರಿಸಿದವರಿಗೆ ಹಣ ವಾಪಸ್‌ ಕೊಡುವುದಾಗಿ ನಂಬಿಸಿ ...

Vijaya Karnataka 8 Sep 2019, 5:00 am
ಬಿಡದಿ: ಆನ್‌ಲೈನ್‌ನಲ್ಲಿಬುಕ್‌ ಮಾಡುವ ಗ್ರಾಹಕರಿಗೆ ಕಳಪೆ ಗುಣಮಟ್ಟದ ವಸ್ತುಗಳನ್ನು ರವಾನಿಸಿ, ಅದನ್ನು ತಿರಸ್ಕರಿಸಿದವರಿಗೆ ಹಣ ವಾಪಸ್‌ ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಎಟಿಎಂ ಮತ್ತು ಒಟಿಪಿ ನಂಬರ್‌ ಪಡೆದು ಖಾತೆಯಿಂದ ಹಣ ಲಪಟಾಯಿಸುವ ಜಾಲವೊಂದು ಬೆಳಕಿಗೆ ಬಂದಿದೆ.
Vijaya Karnataka Web online booking fraud for customers
ಆನ್‌ಲೈನ್‌ ಬುಕ್ಕಿಂಗ್‌, ಗ್ರಾಹಕರಿಗೆ ವಂಚನೆ


ಬಿಡದಿ ಹೋಬಳಿ ಎಂ.ಗೋಪಹಳ್ಳಿ ಗ್ರಾಮದ ಶಿವರಾಮಯ್ಯ ಎಂಬುವರ ಅಕೌಂಟ್‌ ನಿಂದ ವಂಚಕರು 37 ಸಾವಿರ ಹಣವನ್ನು ಲಪಟಾಯಿಸಲಾಗಿದ್ದು, ಆರೋಪಿಗಳನ್ನು ವಿಚಾರಣೆ ಮಾಡಿ ಹಣ ವಾಪಸ್‌ ಕೊಡಿಸುವಂತೆ ಶಿವರಾಮಯ್ಯು ಬಿಡದಿ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.

ಹೌದು, ಆನ್‌ಲೈನ್‌ ಮುಖೇನ ಬುಕ್‌ ಮಾಡಿದ ಗ್ರಾಹಕ ಶಿವರಾಮಯ್ಯರಿಗೆ ಆನ್‌ಲೈನ್‌ ಮೂಲಕ ಬುಕ್‌ ಮಾಡಿದ್ದ ಸೀರೆ ಪಾರ್ಸಲ್‌ ಬಂದಿದ್ದು, ಅದು ಕಳಪೆ ಗುಣಮಟ್ಟದ್ದಾಗಿದೆ ಎಂದು ಹಿಂದಿರುಗಿಸುವ ವೇಳೆ ಅವರನ್ನು ಯಾಮಾರಿಸಿ ಗ್ರಾಹಕರ ಖಾತೆಯಿಂದಲೇ 37 ಸಾವಿರ ರೂ. ಡ್ರಾ ಮಾಡಿ ವಂಚಿಸಲಾಗಿದೆ.

ಏನಿದು ಪ್ರಕರಣ?: ಎಂ.ಗೋಪಹಳ್ಳಿ ಗ್ರಾಮದ ಶಿವರಾಮಯ್ಯ ಅವರ ಪುತ್ರಿ ರಶ್ಮಿ ಎಂಬುವರು ಸ್ಯಾರಿ ಪಿಕ್‌ನಿಂದ ಆನ್‌ಲೈನ್‌ ಮುಖಾಂತರ ಮುಂಗಡ ಹಣ ಪಾವತಿ (ಪ್ರಿ ಪೇಯ್ಡ್‌) ಸಿಸ್ಟಮ್‌ನಲ್ಲಿ1200 ರೂ. ಬೆಲೆಯ ಸೀರೆಯೊಂದನ್ನು ಬುಕ್‌ ಮಾಡಿದ್ದರು. ಸೆ. 6ರಂದು ಬೆಳಗ್ಗೆ 11 ಗಂಟೆಯ ಸಮಯದಲ್ಲಿಕೋರಿಯರ್‌ ಬಾಯ್‌ ಮನೆಗೆ ಬಂದå ಪಾರ್ಸಲ್‌ ಕೊಟ್ಟಿದ್ದಾನೆ. ಅದನ್ನು ಬಿಚ್ಚಿ ನೋಡಿದಾಗ ನಿರಾಸೆ ಕಾದಿತ್ತು. ಸೀರೆ ಕಳಪೆ ಗುಣಮಟ್ಟದ್ದಾಗಿದ್ದು, ಹಿಂಪಡೆದು ಹಣ ವಾಪಸ್‌ ಕೊಡುವಂತೆ ಕೋರಿಯರ್‌ ಬಾಯ್‌ನನ್ನು ಕೇಳಿದ್ದಾರೆ. ಪಾರ್ಸಲ್‌ ಕೊಡುವುದಷ್ಟೇ ನನ್ನ ಕೆಲಸ ಇದಕ್ಕೂ ನನಗೂ ಸಂಬಂಧವಿಲ್ಲ. ಬೇಕಿದ್ದರೆ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ ವಿಚಾರಿಸಿಕೊಳ್ಳಿ ಎಂದು ಹೇಳಿ ಒಂದು ದೂರವಾಣಿ ನಂಬರ್‌ ಕೊಟ್ಟು ಅಲ್ಲಿಂದ ನಿರ್ಗಮಿಸಿದ್ದಾನೆ. ತಕ್ಷಣ ರಶ್ಮಿ ಅವರು ಕಸ್ಟಮರ್‌ ಕೇರ್‌ ಎಂದು ಹೇಳಲಾದ ನಂಬರ್‌ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಹಣವನ್ನು ವಾಪಸ್‌ ನಿಮ್ಮ ಅಕೌಂಟ್‌ ಹಾಕುತ್ತೇವೆಂದು ಹೇಳಿ ಎಟಿಎಂ ಕಾರ್ಡ್‌ ಸಂಖ್ಯೆ ಮತ್ತು ಒಟಿಪಿ ನಂಬರ್‌ ಪಡೆದಿದ್ದಾರೆ. ಕೆಲವೇ ನಿಮಿಷಗಳಲ್ಲಿಗ್ರಾಹಕರ ಅಕೌಂಟ್‌ನಿಂದ 37 ಸಾವಿರ ರೂ.ಡ್ರಾ ಮಾಡಿದ ಸಂದೇಶ ಬಂದಿದೆ. ಇದರಿಂದ ಗಾಬರಿಗೊಂಡ ರಶ್ಮಿ ಅವರ ತಂದೆ ಶಿವರಾಮಯ್ಯ ಅವರು ಪುನಃ ಅದೇ ನಂಬರ್‌ಗೆ ಕಾಲ್‌ ಮಾಡಿದಾಗ ಹಣ ವಾಪಸ್‌ ಸಂಜೆ 4 ಗಂಟೆಗೆ ನಿಮ್ಮ ಅಕೌಂಟ್‌ಗ್‌ ಬರುತ್ತದೆ ಎಂದು ಆ ವ್ಯಕ್ತಿ ಹೇಳಿದ್ದಾರೆ.

ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ಅರಿತು ಕೂಡಲೇ ಬಿಡದಿ ಪೊಲೀಸ್‌ ಠಾಣೆಗೆ ಆಗಮಿಸಿ ರಾಮನಗರದ ತೌಶಿಫ್‌ ಮತ್ತು ಸತ್ಯರಾಜು ಎಂಬುವರು ಮೋಸ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಶಿವರಾಮಯ್ಯ ಅವರು ಸೈಬರ್‌ ಕ್ರೈಮ್‌ ವಿಭಾಗಕ್ಕೂ ದೂರು ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ