ಆ್ಯಪ್ನಗರ

ಶ್ರೀಕೊಲ್ಲಾಪುರದಮ್ಮ ದೇವಾಲಯದ ಮುಂದಿನ ಅಂಗಡಿಗಳ ತೆರವಿಗೆ ವಿರೋಧ

ಪಟ್ಟಣದ ಶ್ರೀ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಶಿವಾನಂದ ಚಿತ್ರ ಮಂದಿರದ ಎಂ.ಜಿ. ರಸ್ತೆಗೆ ಹೊಂದಿಕೊಂಡತ್ತೆ ಇರುವ ಅಂಗಡಿಯ ಚಾವಣಿ ತೆರವು ಸಂಬಂಧ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಸ್ಥಳಕ್ಕೆ ಬಂದು ಅಂಗಡಿ ಚಾವಣಿ ತೆರವು ತಡೆ ಹಿಡಿದ ಘಟನೆ ನಡೆದಿದೆ.

Vijaya Karnataka 21 Oct 2018, 3:32 pm
ಚನ್ನಪಟ್ಟಣ: ಪಟ್ಟಣದ ಶ್ರೀ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಶಿವಾನಂದ ಚಿತ್ರ ಮಂದಿರದ ಎಂ.ಜಿ. ರಸ್ತೆಗೆ ಹೊಂದಿಕೊಂಡತ್ತೆ ಇರುವ ಅಂಗಡಿಯ ಚಾವಣಿ ತೆರವು ಸಂಬಂಧ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಸ್ಥಳಕ್ಕೆ ಬಂದು ಅಂಗಡಿ ಚಾವಣಿ ತೆರವು ತಡೆ ಹಿಡಿದ ಘಟನೆ ನಡೆದಿದೆ.
Vijaya Karnataka Web opposition to the closure of the next shops of srikollapuramma temple
ಶ್ರೀಕೊಲ್ಲಾಪುರದಮ್ಮ ದೇವಾಲಯದ ಮುಂದಿನ ಅಂಗಡಿಗಳ ತೆರವಿಗೆ ವಿರೋಧ


ಇಲ್ಲಿನ ಶ್ರೀಕೊಲ್ಲಾಪುರದಮ್ಮ ದೇವಾಲಯದ ಸಮಿತಿ ತೀರ್ಮಾನದಂತೆ ದೇವಾಲಯದ ಮಗ್ಗುಲಲ್ಲಿ ಇರುವ ಕಾಳಿಂಗರಾವ್‌ಗೆ ಸೇರಿದ ಕಬ್ಬಿಣದ ಅಂಗಡಿಯ ಚಾವಣಿಯನ್ನು ಸಮಿತಿಯ ಸದಸ್ಯರು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿತ್ತು.

ಪೊಲೀಸರಿಂದ ತಡೆ: ಚಾವಣಿ ತೆರವುಗೊಳಿಸುವ ಸಂದರ್ಭದಲ್ಲಿ ಪಟ್ಟಣದ ಠಾಣೆಯ ಪೊಲೀಸರ ಜತೆ ಸ್ಥಳಕ್ಕೆ ಬಂದ ದಿವಂಗತ ಕಾಳಿಂಗರಾವ್‌ ಪತ್ನಿ ಹಾಗೂ ಪುತ್ರಿ ಚಾವಣಿ ತೆರವುಗೊಳಿಸುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಅಂಗಡಿ ಸ್ಥಾಪನೆ ಬಗ್ಗೆ ತಮ್ಮಲ್ಲಿ ಸಂಬಂಧಿಸಿದ ದಾಖಲೆಗಳನ್ನು ಹೊಂದಿರುವುದಾಗಿ ಪೊಲೀಸರ ಮೊರೆ ಹೋದ ಪರಿಣಾಮ ಠಾಣೆಯ ಎಎಸ್‌ಐ ಹಾಗೂ ಪೊಲೀಸ್‌ ಪೇದೆಗಳು ಚಾವಣಿ ತೆರವುಗೊಳಿಸುವುದಕ್ಕೆ ತಡೆ ಹಿಡಿದಿದ್ದಾರೆ.

ಸಮಿತಿಯವರು ತಿಳಿಸಿದಂತೆ ಕಾಳಿಂಗರಾವ್‌ ಎಂಬುವರ ಹಲವಾರು ವರ್ಷಗಳ ಹಿಂದೆ ದೇವಾಲಯದ ಹಿರಿಯರ ಅನುಮತಿಯ ಆಧಾರದ ಮೇಲೆ ದೇವಾಲಯದ ಆವರಣದಲ್ಲಿ ಅರಿಸಿನ ಕುಂಕುಮ ಮಾರಾಟ ಮಾಡಲು ಪುಟ್ಟ ಅಂಗಡಿಗೆ ಸ್ಥಳಾವಕಾಶ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.

ಮುಂದಿನ ಸಭೆಯಲ್ಲಿ ನಿರ್ಧಾರ: ಎಂ.ಜಿ.ರಸ್ತೆ ವಿಸ್ತರಣೆಯ ಪರಿಣಾಮ ಇದರಿಂದ ದೇವಾಲಯದ ಎಲ್ಲ ಕಾರ್ಯಕ್ರಮಗಳಿಗೆ ತೊಡರು ನೀಡುತ್ತಿದ್ದರಿಂದ ದೇವಾಲಯದ ಸಮಿತಿ ಆಡಳಿತ ಮಂಡಳಿಯವರ ನಿರ್ಣಯದಂತೆ ಅಂಗಡಿಯ ಚಾವಣಿಯನ್ನು ತೆರವುಗೊಳಿಸುವಂತೆ ತೀರ್ಮಾನದಂತೆ ತೆರವು ಕಾರ್ಯ ಮಾಡಲಾಗುತ್ತಿತ್ತು. ಆದರೆ ದೇವಾಲಯಕ್ಕೆ ಸೇರಿದ ಆಸ್ತಿಯಲ್ಲಿ ನಿರ್ಮಾಣವಾಗಿದ್ದು, ಅಂಗಡಿಯ ಚಾವಣಿಯನ್ನು ತೆರವುಗೊಳಿಸುವ ಸಂಬಂಧ ಪೊಲೀಸರು ತಡೆಯಾಗಿರುವುದರಿಂದ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಮಿತಿ ಆಡಳಿತ ಮಂಡಳಿ ಮುಂದಿನ ಸಭೆಯಲ್ಲಿ ನಿರ್ಧರಿಸಲಿದ್ದಾರೆ ಎಂದು ಸಮಿತಿ ಸದಸ್ಯ ರಾಜು ತಿಳಿಸಿದ್ದಾರೆ.


ಅಂಗಡಿ ಇರುವ ಸ್ಥಳಕ್ಕೆ ಸಂಬಂಧಪಟ್ಟಂತೆ ನಮ್ಮಲ್ಲಿ ದಾಖಲೆಗಳಿದ್ದು, ಅದರ ಪ್ರಕಾರ ಅಂಗಡಿ ಇಡಲಾಗಿದೆ. ಆದರೆ ಏಕಾಏಕಿ ಅಂಗಡಿ ಮುಂದೆ ಇರುವ ಚಾವಣಿ ತೆರವುಗೊಳಿಸಲು ದೇವಾಲಯದ ಸಮಿತಿ ಮುಂದಾಗಿದ್ದು, ಇದು ಸರಿಯಾದ ಕ್ರಮವಲ್ಲ ನಾವು ಕಾನೂನು ರೀತಿ ಹೋರಾಟ ಮಾಡಲಾಗುತ್ತದೆ.

- ದಿ. ಕಾಳಿಂಗರಾವ್‌ ಪತ್ನಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ