ಆ್ಯಪ್ನಗರ

ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ: ಶಾಸಕಿ ಅನಿತಾ ಕುಮಾರಸ್ವಾಮಿ

ಹಾರೋಹಳ್ಳಿ ಪಟ್ಟಣದ ಕೆಪಿಎಸ್‌ ಶಾಲೆಯ ಕೊಠಡಿ ನಿರ್ಮಾಣಕ್ಕೆ ಮಂಜೂರಾಗಿರುವ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕಿ ಅನಿತು ಕುಮಾರಸ್ವಾಮಿ, ಆರೋಗ್ಯ, ವಸತಿ, ಶಿಕ್ಷಣ ಸೇರಿದಂತೆ ಪಂಚರತ್ನ ಯೋಜನೆಗಳನ್ನು ರೂಪಿಸಿದ್ದಾರೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಅವುಗಳೆಲ್ಲವೂ ಸಾಕಾರವಾಗಲಿವೆ. ಈಗಾಗಲೆ ಪಂಚರತ್ನ ರಥ ಯಾತ್ರೆಯು ಕೋಲಾರ ಸೇರಿದಂತೆ ಇನ್ನಿತರೆಡೆ ಸಂಚರಿಸಿದ್ದು ಇಂದಿನಿಂದ ಬೆಂಗಳೂರು ಗ್ರಾಮಾಂತರದಾದ್ಯಂತ ಸಂಚರಿಸಲಿದೆ. ಎಲ್ಲೆಡೆ ಜನತೆ ಮೆಚ್ಚಿ ಹಾರೈಸುತ್ತಿದ್ದಾರೆ ಎಂದರು.

Edited byಚೇತನ್ ಓ.ಆರ್. | Vijaya Karnataka Web 29 Nov 2022, 8:55 am
  • ಶಾಲೆಯ ಕೊಠಡಿ ನಿರ್ಮಾಣಕ್ಕೆ ಭೂಮಿ; ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿಕೆ.
  • ಹಾರೋಹಳ್ಳಿ ಪಟ್ಟಣದ ಕೆಪಿಎಸ್‌ ಶಾಲೆಯ ಕೊಠಡಿ ನಿರ್ಮಾಣಕ್ಕೆ ಮಂಜೂರಾಗಿರುವ ಭೂಮಿ ಪೂಜೆ ನೆರವೇರಿಸಿದ ಶಾಸಕರು.
  • ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳು ಸಮರ್ಪಕವಾಗಿ ಜಾರಿ: ಅನಿತಾ ಕುಮಾರಸ್ವಾಮಿ ಆಶ್ವಾಸನೆ.
Vijaya Karnataka Web pancharatna yatre announce by jds getting immense support from people says mla anitha kumaraswamy
ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ: ಶಾಸಕಿ ಅನಿತಾ ಕುಮಾರಸ್ವಾಮಿ


ಹಾರೋಹಳ್ಳಿ (ರಾಮನಗರ): ಜೆಡಿಎಸ್‌ ಪಂಚರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದ್ದು, 123 ಮಿಷನ್‌ ಸಾಕಾರವಾಗಲಿದೆ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.

ಹಾರೋಹಳ್ಳಿ ಪಟ್ಟಣದ ಕೆಪಿಎಸ್‌ ಶಾಲೆಯ ಕೊಠಡಿ ನಿರ್ಮಾಣಕ್ಕೆ ಮಂಜೂರಾಗಿರುವ ಭೂಮಿ ಪೂಜೆ ನೆರವೇರಿಸಿ, ಪಟ್ಟಣ ಪಂಚಾಯಿತಿ ಸ್ವಚ್ಚಭಾರತ್‌ ಅಭಿಯಾನದಡಿ ಕಸ ಸಂಗ್ರಹಣಾ ವಾಹನಗಳಿಗೆ ಚಾಲನೆ ನೀಡಿದ ಅವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆರೋಗ್ಯ, ವಸತಿ, ಶಿಕ್ಷಣ ಸೇರಿದಂತೆ ಪಂಚರತ್ನ ಯೋಜನೆಗಳನ್ನು ರೂಪಿಸಿದ್ದಾರೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ಅವುಗಳೆಲ್ಲವೂ ಸಾಕಾರವಾಗಲಿವೆ. ಈಗಾಗಲೆ ಪಂಚರತ್ನ ರಥ ಯಾತ್ರೆಯು ಕೋಲಾರ ಸೇರಿದಂತೆ ಇನ್ನಿತರೆಡೆ ಸಂಚರಿಸಿದ್ದು ಇಂದಿನಿಂದ ಬೆಂಗಳೂರು ಗ್ರಾಮಾಂತರದಾದ್ಯಂತ ಸಂಚರಿಸಲಿದೆ. ಎಲ್ಲೆಡೆ ಜನತೆ ಮೆಚ್ಚಿ ಹಾರೈಸುತ್ತಿದ್ದಾರೆ ಎಂದರು.

JDS Pancharatna Yatra: ಸಮ್ಮಿಶ್ರ ಸರ್ಕಾರ ಬೀಳಿಸಿದ್ದೆ ಸಿದ್ದರಾಮಯ್ಯ:ಸಿಎಂ ಇಬ್ರಾಹಿಂ
ಶಾಲೆಗಳಿಗೆ ಕಾಯಕಲ್ಪ:

ಕ್ಷೇತ್ರದಾದ್ಯಂತ ಶಾಲೆಗಳ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಲಾಗುವುದು. ಪ್ರತಿಯೊಂದು ಶಾಲೆಗೆ ಕಾಯಕಲ್ಪ ನೀಡುವ ಪ್ರಯತ್ನ ಮಾಡಲಾಗುವುದು. ಮುಂದಿನ ವಾರ ಸಮುದಾಯ ಭವನ, ಚರಂಡಿ ಸೇರಿದಂತೆ ಇನ್ನಷ್ಟು ಕಾಮಗಾರಿಗೆ ಚಾಲನೆ ನೀಡಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದ ಅವರು, ಮುಂದಿನ ದಿನಗಳಲ್ಲಿಹಾರೋಹಳ್ಳಿ ತಾಲೂಕು ಕೇಂದ್ರವಾಗಲಿಗೆ ಎಂದು ಹೇಳಿದರು.

ಜೆಡಿಎಸ್‌ ಜಿಲ್ಲಾಉಪಾಧ್ಯಕ್ಷ ರಾಮಕೃಷ್ಣ, ಭುಜಂಗಯ್ಯ, ಸೋಮಶೇಖರ್‌, ಕೊಳ್ಳಿಗಾನಹಳ್ಳಿ ರಾಮು, ಶಿಲ್ಪಾ ಶಿವಾನಂದ್‌, ಕೊಳ್ಳಿಗಾನಹಳ್ಳಿ ಪ್ರದೀಪ್‌, ಪಡುವಣಗೆರೆ ಸಿದ್ದರಾಜು, ಪುರೊಷೋತ್ತಮ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನವೀನ್‌ಕುಮಾರ್‌, ಎಚ್‌.ಪ್ರದೀಪ್‌, ಕೋಟೆ ರಾಜು ಮತ್ತಿತರರು ಹಾಜರಿದ್ದರು.

HD Kumaraswamy-ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕ್ಯಾನ್ಸರ್ ಕಾರಕ ಕೆಸಿ ವ್ಯಾಲಿ ನೀರು ಸ್ಥಗಿತ: ಎಚ್ ಡಿ ಕುಮಾರಸ್ವಾಮಿ ಘೋಷಣೆಬಸ್‌ ವ್ಯವಸ್ಥೆಗೆ ಮನವಿ

ಮರಳವಾಡಿಯ ಬೆಜ್ಜಲಹಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್‌ ತಂಗುದಾಣವನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಉದ್ಘಾಟಿಸಿದರು. ಈ ವೇಳೆ ಗ್ರಾಮದ ಮಹಿಳೆಯರು ದಯವಿಟ್ಟಿ ಬಿ.ಎಂ.ಟಿ.ಸಿ ಬಸ್‌ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು.

ನಮ್ಮದು ಗಡಿಯ ಕುಗ್ರಾಮಗಳಾಗಿದ್ದು, ಸೌಲಭ್ಯಗಳಿದ್ದೇವೆ ಸೊರಗಿದ್ದೇವೆ. ನಮ್ಮ ಮಕ್ಕಳು ಶಾಲೆಗೆ ಸೇರಿದಂತೆ ಇನ್ನಿತರೆ ಕೆಲಸಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂಬ ಮನವಿಗೆ ಸ್ಪಂದಿಸಿದ ಶಾಸಕರು, ಮುಂದಿನ ದಿನಗಳಲ್ಲಿಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ