ಆ್ಯಪ್ನಗರ

2 ಸಾವಿರ ಕೋಟಿ ರೂ. ಕೊರೊನಾ ಹಗರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು : ಪರಂ

ಕೊರೊನಾ ಬಿಕ್ಕಟ್ಟಿನ ನಡುವೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನಮ್ಮ ಸಮ್ಮಿಶ್ರ ಸರಕಾರ ಆಡಳಿತದಲ್ಲಿದ್ದಾಗ ಕೊಡಗಿಗೆ ಸಾಕಷ್ಟು ಅನುದಾನ ನೀಡಿದ್ದೆವು. ಮನೆ ಕಟ್ಟಿಕೊಳ್ಳಲು, ರಸ್ತೆ ನಿರ್ಮಾಣ, ಆಸ್ತಿ ನಷ್ಟಕ್ಕೆ ಪರಿಹಾರ ಸೇರಿದಂತೆ ಹೆಚ್ಚಿನ ನೆರವು ನೀಡಲಾಗಿತ್ತು. ಆ ಕೆಲಸಗಳೇ ಇನ್ನೂ ಮುಗಿದಿಲ್ಲ. ಈಗ ಮತ್ತೆ ಪ್ರವಾಹ ತಲೆದೋರಿದೆ. ಆದ್ದರಿಂದ ಕೊಡಗಿನ ಜನರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು ಎಂದು ಒತ್ತಾಯಿಸಿದರು.

Vijaya Karnataka Web 7 Aug 2020, 5:01 pm
ರಾಮನಗರ: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೊರೊನಾ‌ ನಿರ್ವಹಣೆ ಹೆಸರಿನಲ್ಲಿ ನಡೆದಿರುವ 2 ಸಾವಿರ ಕೋಟಿ ರೂ. ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಒತ್ತಾಯಿಸಿದ್ದಾರೆ.
Vijaya Karnataka Web Parameshwar


ಗುರುಕುಲ ಮಾದರಿಯಲ್ಲಿ 'ವಿದ್ಯಾಗಮ': ಮನೆಗೆ ಬಂದು ಶಿಕ್ಷಕರು ಪಾಠ; ವಿದ್ಯಾರ್ಥಿಗಳು ಪುಲ್ ಖುಷ್

ಮಾಗಡಿ ತಾಲೂಕಿನ ಮುಳ್ಕಟ್ಟಮ್ಮನ ಪಾಳ್ಯದ ದೇವಸ್ಥಾನದಲ್ಲಿ ಗ್ರಾಮಸ್ಥರಿಗೆ ಉಚಿತ ದಿನಸಿ ಕಿಟ್‌ ವಿತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಮಾತನಾಡಿದ ಪರಂ, ಕೊರೊನಾ ನಿರ್ವಹಣೆಗೆ ನಡೆದ ಖರೀದಿಯಲ್ಲಿ2 ಸಾವಿರ ಕೋಟಿ ಅವ್ಯವಹಾರ ನಡೆದಿದೆ. ಇದನ್ನು ಹೇಳಿದರೆ ನಮ್ಮ ಸರಕಾರದ ಕಾಲದಲ್ಲೂ ಅವ್ಯವಹಾರ ನಡೆದಿದೆ ಎಂದು ಮಂತ್ರಿಗಳ ಆರೋಪಿಸುತ್ತಿದ್ದಾರೆ. ಅವರ ಆರೋಪ ನಿಜವೇ ಆಗಿದ್ದರೆ, ನಮ್ಮ ಆಡಳಿತ ಕಾಲದಲ್ಲಿ ನಡೆದಿರುವ ಖರೀದಿಗಳ ಬಗ್ಗೆಯು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲಿ ಎಂದು ಅವರು ಸವಾಲು ಹಾಕಿದರು.

'ಶ್ರೀ ರಾಮ ಬಿಜೆಪಿಯವರ ಸ್ವತ್ತಲ್ಲ, ದೇಶದ 130 ಕೋಟಿ ಜನರ ಆಸ್ತಿ' : ಡಿ.ಕೆ.ಸುರೇಶ್

ಇನ್ನು ಕೊರೊನಾ ಬಿಕ್ಕಟ್ಟಿನ ನಡುವೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನಮ್ಮ ಸಮ್ಮಿಶ್ರ ಸರಕಾರ ಆಡಳಿತದಲ್ಲಿದ್ದಾಗ ಕೊಡಗಿಗೆ ಸಾಕಷ್ಟು ಅನುದಾನ ನೀಡಿದ್ದೆವು. ಮನೆ ಕಟ್ಟಿಕೊಳ್ಳಲು, ರಸ್ತೆ ನಿರ್ಮಾಣ, ಆಸ್ತಿ ನಷ್ಟಕ್ಕೆ ಪರಿಹಾರ ಸೇರಿದಂತೆ ಹೆಚ್ಚಿನ ನೆರವು ನೀಡಲಾಗಿತ್ತು. ಆ ಕೆಲಸಗಳೇ ಇನ್ನೂ ಮುಗಿದಿಲ್ಲ. ಈಗ ಮತ್ತೆ ಪ್ರವಾಹ ತಲೆದೋರಿದೆ. ಆದ್ದರಿಂದ ಕೊಡಗಿನ ಜನರ ನೆರವಿಗೆ ಸರಕಾರ ಕೂಡಲೇ ಧಾವಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾ ಬಗ್ಗೆ ಕೇಂದ್ರ ಸರಕಾರ ತಾತ್ಸಾರ ಮನೋಭಾವ ತಾಳಿದೆ : ಶಾಸಕಿ ಸೌಮ್ಯರೆಡ್ಡಿ

ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಬಿಜೆಪಿಗೆ ಚುನಾವಣೆ ಲಾಭವಿದೆಯೇ ಎಂಬ ಪ್ರಶ್ನೆಗೆ, ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳಿವೆ. ಈಗ ಕೊರೊನಾ ಸಮಸ್ಯೆಯಿಂದ ಪಾರಾಗುವ ಬಗ್ಗೆ ಚಿಂತಿಸಬೇಕೇ ಹೊರತು ರಾಜಕೀಯ ಮಾಡಬಾರದು ಎಂದರು. ಆ ವಿಚಾರವನ್ನು ಚುನಾವಣೆ ಬಂದಾಗ ಈ ಬಗ್ಗೆ ನೋಡೋಣ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ