ಮಾಗಡಿ: ಉತ್ತಮ ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ತಿರುಮಲೆ ಶ್ರೀರಂಗನಾಥಸ್ವಾಮಿ, ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ, ವೀರಭದ್ರಸ್ವಾಮಿ, ಸೋಮೇಶ್ವರಸ್ವಾಮಿ, ಕೆಂಚನಹಳ್ಳಿ ಲಕ್ಷ್ಮೀದೇವಿ ಹಾಗೂ ಇತರೆ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಹೋಮ ಹಾಗೂ ಜಪ ನಡೆಯಿತು.
ರಾಜ್ಯದಲ್ಲಿ ಸಮರ್ಪಕ ಮಳೆಯಾಗದ ಕಾರಣ ಎ.ಗ್ರೇಡ್ ದೇವಾಲಯಗಳಲ್ಲಿ 10 ಸಾವಿರ ರೂ. ವೆಚ್ಚದಲ್ಲಿ ಪರ್ಜನ್ಯ ಹೋಮ ನಡೆಸಬೇಕು ಎಂದು ಸರಕಾರ ಅದಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪಟ್ಟಣದ ತಿರುಮಲೆ ದೇವಾಲಯದಲ್ಲಿ ಗುರುವಾರ ಬೆಳಗ್ಗೆ 4 ಗಂಟೆಗೆ ಬ್ರಾಹ್ಮಿ ಮರ್ಹೂತದಲ್ಲಿ ಕೊಳ್ಳೆಗಾಲದ ಆಗಮಿಕ ಶಶಿಧರಭಟ್ ನೇತೃತ್ವದಲ್ಲಿ ಆರ್ಚಕರಾದ ಕಾರ್ತಿಕ್ ವೆಂಕಟೇಶ ಆಯ್ಯಂಗಾರ್, ಶ್ರೀಶೈಲ, ಕೃಷ್ಣಚಾರ್ಯ, ನಾಗರಾಜ್, ಪ್ರಕಾಶ್ ಪರ್ಜನ್ಯ ಹೋಮ ನಡೆಯಿತು.
ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿಯೂ ಸಹ ತುಮಕೂರಿನ ಆಗಮಿಕ ದಿವಾಕರ್ ಭಟ್ ಅವರ ನೇತೃತ್ವದಲ್ಲಿ ಪರ್ಜನ್ಯ ಜಪ ಹಾಗೂ ಹೋಮ ನಡೆಯಿತು. ಇದೇ ವೇಳೆ ದೇವಾಲಯದ ಟ್ರಸ್ಟ್ನ ಅಧ್ಯಕ್ಷ ಎನ್.ನಾಗರಾಜ್ ಮಾತನಾಡಿ, ''ಈ ಬಾರಿ ತಾಲೂಕಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ದನ ಕರುಗಳಿಗೆ ನೀರಿನ ಅಭಾವ ಉಂಟಾಗುವುದರ ಜತೆಗೆ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ದೇವಾಲಯಗಳಲ್ಲಿ ಹೋಮ, ಹವನ, ಜಪಗಳನ್ನು ನಡೆಸಿದರೆ ಉತ್ತಮ ಮಳೆಯಾಗುತ್ತದೆ ಎಂದು ನಮ್ಮ ಹಿರಿಯರು ನಂಬಿದ್ದರು. ಈ ಹಿನ್ನೆಲೆಯಲ್ಲಿ ಪರ್ಜನ್ಯ ಜಪ, ಹೋಮವನ್ನು ನಡೆಸಲಾಗಿದೆ,'' ಎಂದು ತಿಳಿಸಿದರು.
ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಸರಕಾರದ ವತಿಯಿಂದ ಪರ್ಜನ್ಯ ಹೋಮ ನಡೆದರೂ ಸಹ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿರಲಿಲ್ಲ. ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಪಾರುಪತ್ತೆಗಾರರು ಮಾತ್ರ ಭಾಗವಹಿಸಿದ್ದರು.
ರಾಜ್ಯದಲ್ಲಿ ಸಮರ್ಪಕ ಮಳೆಯಾಗದ ಕಾರಣ ಎ.ಗ್ರೇಡ್ ದೇವಾಲಯಗಳಲ್ಲಿ 10 ಸಾವಿರ ರೂ. ವೆಚ್ಚದಲ್ಲಿ ಪರ್ಜನ್ಯ ಹೋಮ ನಡೆಸಬೇಕು ಎಂದು ಸರಕಾರ ಅದಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಪಟ್ಟಣದ ತಿರುಮಲೆ ದೇವಾಲಯದಲ್ಲಿ ಗುರುವಾರ ಬೆಳಗ್ಗೆ 4 ಗಂಟೆಗೆ ಬ್ರಾಹ್ಮಿ ಮರ್ಹೂತದಲ್ಲಿ ಕೊಳ್ಳೆಗಾಲದ ಆಗಮಿಕ ಶಶಿಧರಭಟ್ ನೇತೃತ್ವದಲ್ಲಿ ಆರ್ಚಕರಾದ ಕಾರ್ತಿಕ್ ವೆಂಕಟೇಶ ಆಯ್ಯಂಗಾರ್, ಶ್ರೀಶೈಲ, ಕೃಷ್ಣಚಾರ್ಯ, ನಾಗರಾಜ್, ಪ್ರಕಾಶ್ ಪರ್ಜನ್ಯ ಹೋಮ ನಡೆಯಿತು.
ಸಾವನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿಯೂ ಸಹ ತುಮಕೂರಿನ ಆಗಮಿಕ ದಿವಾಕರ್ ಭಟ್ ಅವರ ನೇತೃತ್ವದಲ್ಲಿ ಪರ್ಜನ್ಯ ಜಪ ಹಾಗೂ ಹೋಮ ನಡೆಯಿತು. ಇದೇ ವೇಳೆ ದೇವಾಲಯದ ಟ್ರಸ್ಟ್ನ ಅಧ್ಯಕ್ಷ ಎನ್.ನಾಗರಾಜ್ ಮಾತನಾಡಿ, ''ಈ ಬಾರಿ ತಾಲೂಕಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ದನ ಕರುಗಳಿಗೆ ನೀರಿನ ಅಭಾವ ಉಂಟಾಗುವುದರ ಜತೆಗೆ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ದೇವಾಲಯಗಳಲ್ಲಿ ಹೋಮ, ಹವನ, ಜಪಗಳನ್ನು ನಡೆಸಿದರೆ ಉತ್ತಮ ಮಳೆಯಾಗುತ್ತದೆ ಎಂದು ನಮ್ಮ ಹಿರಿಯರು ನಂಬಿದ್ದರು. ಈ ಹಿನ್ನೆಲೆಯಲ್ಲಿ ಪರ್ಜನ್ಯ ಜಪ, ಹೋಮವನ್ನು ನಡೆಸಲಾಗಿದೆ,'' ಎಂದು ತಿಳಿಸಿದರು.
ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಸರಕಾರದ ವತಿಯಿಂದ ಪರ್ಜನ್ಯ ಹೋಮ ನಡೆದರೂ ಸಹ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿರಲಿಲ್ಲ. ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಪಾರುಪತ್ತೆಗಾರರು ಮಾತ್ರ ಭಾಗವಹಿಸಿದ್ದರು.