ಆ್ಯಪ್ನಗರ

ಸರಕಾರಿ ಶಾಲೆಗಳ ಉಳಿವಿಗೆ ಜನರೂ ಕೂಡ ಜಾಗೃತರಾಗಬೇಕು

ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳು ಮತ್ತಷ್ಟು ಪ್ರಗತಿಯನ್ನು ಹೊಂದಿದರೆ ಬಡವರ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಋುಣಾತ್ಮಕ ಶಿಕ್ಷಣ ದೊರೆಯುತ್ತದೆ ಎಂದು ರೋಟರಿ ಅಧ್ಯಕ್ಷ ಕಾಂತರಾಜು ಹೇಳಿದರು.

Vijaya Karnataka 18 Jun 2019, 4:05 pm
ಶಾಲಾ ವಿದ್ಯಾರ್ಥಿಗಳಿಗೆ ಜಾರುಬಂಡೆ, ಉಯ್ಯಾಲೆ ಹಾಗು ಆಟಿಕೆಗಳ ವಿತರಣಾ ಕಾರ್ಯಕ್ರಮ
Vijaya Karnataka Web people should take aware of the survival of government schools
ಸರಕಾರಿ ಶಾಲೆಗಳ ಉಳಿವಿಗೆ ಜನರೂ ಕೂಡ ಜಾಗೃತರಾಗಬೇಕು


ಹಾರೋಹಳ್ಳಿ (ಕನಕಪುರ ತಾ.): ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳು ಮತ್ತಷ್ಟು ಪ್ರಗತಿಯನ್ನು ಹೊಂದಿದರೆ ಬಡವರ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಋುಣಾತ್ಮಕ ಶಿಕ್ಷಣ ದೊರೆಯುತ್ತದೆ ಎಂದು ರೋಟರಿ ಅಧ್ಯಕ್ಷ ಕಾಂತರಾಜು ಹೇಳಿದರು.

ಹಾರೋಹಳ್ಳಿ ಹೋಬಳಿ ಕುರುಬಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ವಿದ್ಯಾರ್ಥಿಗಳಿಗೆ ಜಾರುಬಂಡೆ, ಉಯ್ಯಾಲೆ ಹಾಗು ಇತರೆ ಆಟಿಕೆ ಸಾಧನಗಳನ್ನು ವಿತರಿಸಿ ಮಾತನಾಡಿದ ಅವರು, ಸರಕಾರಿ ಶಾಲೆಗಳ ಉಳಿವಿಗೆ ಸರಕಾರಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಪ್ರಮಾಣದಲ್ಲಿ ಶಾಲೆಗಳ ಉಳಿವಿಗೆ ಜನರೂ ಕೂಡ ಜಾಗೃತರಾಗಬೇಕಾಗಿದೆ. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ಅಭಿವೃದ್ಧಿಯಿಂದ ಕೂಡಿದ್ದರೆ ಅಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉತ್ತಮ ಶಿಕ್ಷ ಣ ದೊರೆಯಲು ಅನುಕೂಲವಾಗುತ್ತದೆ.

ವ್ಯಾಪಾರೀಕರಣದ ಸರಕಾಗಿರುವ ಶಿಕ್ಷಣ:

ಸಮಾಜದಲ್ಲಿ ಶಿಕ್ಷ ಣವು ಇಂದು ವ್ಯಾಪಾರೀಕರಣದ ಸರಕಾಗಿರುವುದರಿಂದ ಹಣವಿರುವ ಶ್ರೀಮಂತರು ಖಾಸಗಿ ಶಾಲೆಗೆ ದಾಖಲಿಸುತ್ತಾರೆ. ಅದೇರೀತಿ ಸರಕಾರಿ ಶಾಲೆಗಳೂ ಕೂಡ ಪ್ರಗತಿಯಲ್ಲಿದ್ದರೆ ಇಲ್ಲಿನ ವಿದ್ಯಾರ್ಥಿಗಳೂ ಸಹ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ನಾನು ಮತ್ತು ನನ್ನ ಸಹಪಾಠಿ ಹರಿಪ್ರಸಾದ್‌ರವರ ವೈಯಕ್ತಿಕ ದೇಣಿಗೆಯಿಂದ ವಿದ್ಯಾರ್ಥಿಗಳಿಗೆ ಆಟೋಪಕರಣಕ್ಕೆ ಬೇಕಾಗುವ ಜಾರುಬಂಡಿ, ಉಯ್ಯಾಲೆ, ಚೈಕ-ಪೈಕ ಇತರೆ ಸಾಧನಗಳನ್ನು ಕೊಡುಗೆ ನೀಡಲಾಗಿದೆ. ಇವುಗಳನ್ನು ಉತ್ತಮ ರೀತಿಯಲ್ಲಿ ಶಿಕ್ಷ ಕರು ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಮೊಹಮ್ಮದ್‌ ಏಜಾಜ್‌, ಹರಿಪ್ರಸಾದ್‌, ಶಾಲಾ ಮುಖ್ಯಶಿಕ್ಷ ಕಿ ಮಮತ, ಶಿಕ್ಷ ಕರಾದ ಧನಲಕ್ಷ್ಮಿ, ವಿನುತ, ದುರ್ಗೇಶ್‌, ಆರ್‌.ವಿ.ಹೊನ್ನೇಗೌಡ, ಪಂಚರ್‌ ಅಂಗಡಿ ಮುಬಾರಕ್‌, ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ