ಕುದೂರು: ಹೋಬಳಿಯ ಶ್ರೀ ಗಿರಿಪುರ ಗ್ರಾಮದಲ್ಲಿ ತೋಟಗಾರಿಕಾ ಮಹಾ ವಿದ್ಯಾಲಯದ ಅಂತಿಮ ಪದವಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಸಸ್ಯ ರೋಗಗಳು ಹಾಗೂ ಕೊಯ್ಲಿನ ನಂತರದ ತಂತ್ರಜ್ಞಾನ ಬಗ್ಗೆ ಮಾಹಿತಿ ನೀಡಿದರು.
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬಾಗಲಕೋಟೆ, ತೋಟಗಾರಿಕಾ ಮಹಾವಿದ್ಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಗಿರಿಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ ತೋಟಗಾರಿಕಾ ಗ್ರಾಮೀಣ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಎರಡೂವರೆ ತಿಂಗಳು ಪ್ರಾಯೋಗಿಕ ಅಧ್ಯಯನ ನಡೆಸಲಿದ್ದಾರೆ. ಪುಸ್ತಕಕ್ಕೆ ಸೀಮಿತವಾಗಿದ್ದ ಜ್ಞಾನವನ್ನು ಹಳ್ಳಿಗಳಲ್ಲಿನ ರೈತರು ಕಷ್ಟ ಸುಖಗಳು ಹಾಗೂ ಕೃಷಿಯ ವಿಧಾನಗಳನ್ನು ಅರಿಯಲು ತೋಟಗಾರಿಕ ವಿಶ್ವವಿದ್ಯಾಲಯ ಆಂತಿಮ ಹಂತದ ವಿದ್ಯಾರ್ಥಿಗಳಿಗೆ ಈ ಅವಕಾಶ ಒದಗಿಸಿದ್ದು, ವಿದ್ಯಾರ್ಥಿಗಳು ಈಗಾಗಲೇ ಹಳ್ಳಿಗಳನ್ನು ತಲುಪಿದ್ದು ರೈತರಿಗೆ ವಿಶೇಷ ಗುಂಪು ಚರ್ಚೆ ಹಾಗೂ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ರೈತರಿಗೆ ಉಪಯುಕ್ತ ಮಾಹಿತಿಗಳನ್ನು ರೈತರಿಗೆ ನೀಡುತ್ತಿದ್ದಾರೆ.
ಮುಖಂಡ ಸಿದ್ದಲಿಂಗಪ್ಪ ಮಾತನಾಡಿ, ''ತೋಟಗಾರಿಕಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ನಮ್ಮ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಆಗಮಿಸಿ ಕಾರ್ಯಾನುಭವ ತರಬೇತಿಯಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರ. ವಿದ್ಯಾರ್ಥಿಗಳ ಜ್ಞಾನವೃದ್ಧಿಯ ಜತೆಗೆ ನಮ್ಮ ರೈತರಿಗೂ ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳ ಸಲಹೆಯನ್ನು ರೈತರು ಪಡೆಯಬೇಕು ಹಾಗೂ ಅವರಿಗೆ ವಿಶೇಷ ಪ್ರೋತ್ಸಾಹ ನೀಡಬೇಕು,'' ಎಂದರು.
ರೈತರಿಗೆ ವಿಶೇಷವಾಗಿ ಸಸ್ಯಗಳಿಗೆ ಕಾಲಕಾಲಕ್ಕೆ ಬರುವ ರೋಗಗಳು ಹಾಗೂ ನಿವಾರಣಾ ಕ್ರಮ ಮತ್ತು ಬೆಳೆ ಕೊಯ್ಲಿನ ಸಮಯವಾದ್ದರಿಂದ ಈ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲಾಯಿತು.
ಇದೇ ವೇಳೆ ಮುಖಂಡರಾದ ಸಿದ್ದಲಿಂಗಪ್ಪ, ಲಂಕೆಪ್ಪ, ಪ್ರಗತಿಪರ ರೈತರಾದ ರಾಮಯ್ಯ, ಶ್ರೀನಿವಾಸ್, ಪುಟ್ಟಗಂಗಯ್ಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಭಾನುಪ್ರಕಾಶ್ ಹಾಜರಿದ್ದರು.
ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ ಬಾಗಲಕೋಟೆ, ತೋಟಗಾರಿಕಾ ಮಹಾವಿದ್ಯಾಲಯ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಗಿರಿಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ ತೋಟಗಾರಿಕಾ ಗ್ರಾಮೀಣ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಎರಡೂವರೆ ತಿಂಗಳು ಪ್ರಾಯೋಗಿಕ ಅಧ್ಯಯನ ನಡೆಸಲಿದ್ದಾರೆ. ಪುಸ್ತಕಕ್ಕೆ ಸೀಮಿತವಾಗಿದ್ದ ಜ್ಞಾನವನ್ನು ಹಳ್ಳಿಗಳಲ್ಲಿನ ರೈತರು ಕಷ್ಟ ಸುಖಗಳು ಹಾಗೂ ಕೃಷಿಯ ವಿಧಾನಗಳನ್ನು ಅರಿಯಲು ತೋಟಗಾರಿಕ ವಿಶ್ವವಿದ್ಯಾಲಯ ಆಂತಿಮ ಹಂತದ ವಿದ್ಯಾರ್ಥಿಗಳಿಗೆ ಈ ಅವಕಾಶ ಒದಗಿಸಿದ್ದು, ವಿದ್ಯಾರ್ಥಿಗಳು ಈಗಾಗಲೇ ಹಳ್ಳಿಗಳನ್ನು ತಲುಪಿದ್ದು ರೈತರಿಗೆ ವಿಶೇಷ ಗುಂಪು ಚರ್ಚೆ ಹಾಗೂ ವಿಚಾರ ಸಂಕಿರಣಗಳನ್ನು ಹಮ್ಮಿಕೊಂಡು ರೈತರಿಗೆ ಉಪಯುಕ್ತ ಮಾಹಿತಿಗಳನ್ನು ರೈತರಿಗೆ ನೀಡುತ್ತಿದ್ದಾರೆ.
ಮುಖಂಡ ಸಿದ್ದಲಿಂಗಪ್ಪ ಮಾತನಾಡಿ, ''ತೋಟಗಾರಿಕಾ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ನಮ್ಮ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಆಗಮಿಸಿ ಕಾರ್ಯಾನುಭವ ತರಬೇತಿಯಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರ. ವಿದ್ಯಾರ್ಥಿಗಳ ಜ್ಞಾನವೃದ್ಧಿಯ ಜತೆಗೆ ನಮ್ಮ ರೈತರಿಗೂ ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳ ಸಲಹೆಯನ್ನು ರೈತರು ಪಡೆಯಬೇಕು ಹಾಗೂ ಅವರಿಗೆ ವಿಶೇಷ ಪ್ರೋತ್ಸಾಹ ನೀಡಬೇಕು,'' ಎಂದರು.
ರೈತರಿಗೆ ವಿಶೇಷವಾಗಿ ಸಸ್ಯಗಳಿಗೆ ಕಾಲಕಾಲಕ್ಕೆ ಬರುವ ರೋಗಗಳು ಹಾಗೂ ನಿವಾರಣಾ ಕ್ರಮ ಮತ್ತು ಬೆಳೆ ಕೊಯ್ಲಿನ ಸಮಯವಾದ್ದರಿಂದ ಈ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಲಾಯಿತು.
ಇದೇ ವೇಳೆ ಮುಖಂಡರಾದ ಸಿದ್ದಲಿಂಗಪ್ಪ, ಲಂಕೆಪ್ಪ, ಪ್ರಗತಿಪರ ರೈತರಾದ ರಾಮಯ್ಯ, ಶ್ರೀನಿವಾಸ್, ಪುಟ್ಟಗಂಗಯ್ಯ ಹಾಗೂ ಕಾರ್ಯನಿರ್ವಹಣಾಧಿಕಾರಿ ಭಾನುಪ್ರಕಾಶ್ ಹಾಜರಿದ್ದರು.