ಆ್ಯಪ್ನಗರ

ಕಮಲಮ್ಮ, ನಿಮ್ಮೂರಲ್ಲಿ ಎಲ್ಲರೂ ಚೆನ್ನಾಗಿರುವರೇ: ಮೋದಿ

‘ನಮಸ್ತೆ ಕಮಲಮ್ಮ. ನಿಮ್ಮ ಊರಿನಲ್ಲಿ ಎಲ್ಲರು ಕ್ಷೇಮವಾಗಿರುವರೇ ,’ ಎಂದು ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದರು.

Vijaya Karnataka Web 21 Jun 2018, 8:52 am
ರಾಮನಗರ: ‘ನಮಸ್ತೆ ಕಮಲಮ್ಮ. ನಿಮ್ಮ ಊರಿನಲ್ಲಿ ಎಲ್ಲರು ಕ್ಷೇಮವಾಗಿರುವರೇ ,’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮನಗರ ತಾಲೂಕು ಮಾಯಗಾನಹಳ್ಳಿ ರೈತ ಮಹಿಳೆ ಕಮಲಮ್ಮ ಅವರನ್ನು ಕನ್ನಡದಲ್ಲಿಯೇ ಸಂವಾದಕ್ಕೆ ಆಹ್ವಾನಿಸಿದಾಗ ಎಲ್ಲರಿಗೂ ಅಚ್ಚರಿ !
Vijaya Karnataka Web modi


ಮಾಗಡಿ ತಾಲೂಕಿನ ಚಂದೂರಾಯನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ತಮ್ಮೊಂದಿಗೆ ‘ನಮೋ ಆ್ಯಪ್‌’ ಮೂಲಕ ದೂರದ ದಿಲ್ಲಿಯಲ್ಲಿ ಕುಳಿತು ವಿಡಿಯೊ ಕಾನಧಿರೆನ್ಸ್‌ ನಲ್ಲಿ ಸಂವಾದ ನಡೆಸಿದ ಪ್ರಧಾನಿಗೆ ಕಮಲಮ್ಮ ಕನ್ನಡದಲ್ಲಿಯೇ ಉತ್ತರಿಸಿದರು. ಇದರಿಂದ ಉತ್ತೇಜಿತರಾದ ಮೂರ್ನಾಲು ರೈತರೂ ಕನ್ನಡದಲ್ಲಿಯೇ ಪ್ರಧಾನಿಯೊಟ್ಟಿಗೆ ಸಂವಾದ ನಡೆಸಿ, ತಮ್ಮ ಕೃಷಿ ಬದುಕಿನ ಸೋಲು-ಗೆಲುವಿನ ಎಳೆಗಳನ್ನು ವಿವರಿಸಿದರು.

ರೈತರು ಹಾಗೂ ಮೋದಿ ಅವರ ನಡುವಿನ ಸಂವಾದವನ್ನು ಕೃಷಿ ತಾಂತ್ರಿಕ ಮತ್ತು ಸಂಶೋಧನೆ ಆಳವಡಿಕೆ ಸಂಸ್ಥೆಯ (ಅಟಾರಿ) ನಿರ್ದೇಶಕ ಡಾ. ಚಂದ್ರೇಗೌಡ ಅನುವಾದಿಸಿದರು. ಪ್ರಧಾನಿ ಈ ಎಲ್ಲರ ಮಾತನ್ನು ತಾಳ್ಮೆಯಿಂದ ಆಲಿಸಿ, ಬಳಿಕ ರೈತರಿಗಾಗಿ ತಾವು ಕೈಗೊಂಡಿರುವ ಯೋಜನೆ-ಕಾರ್ಯಕ್ರಮಗಳನ್ನು ವಿವರಿಸಿದರು. ‘‘ರೈತರ ಕೃಷಿ ಚಟುವಟಿಕೆಗಳಿಗೆ ಸರಕಾರ ಯಾವತ್ತೂ ಬೆನ್ನೆಲುಬಾಗಿರುತ್ತದೆ. ಯೋಜನೆಗಳ ಬಗ್ಗೆ ಅರಿಯಿರಿ. ಅಂತೆಯೇ, ಫಸಲ್‌ಬಿಮಾ ವಿಮಾ ಯೋಜನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಳ್ಳಬೇಕಿದೆ. ಇದರಿಂದ ಬೆಳೆಗೆ ಆಪತ್ತು ಬಂದರೂ ಅದರ ಆರ್ಥಿಕ ನಷ್ಟವನ್ನು ತುಂಬಿಕೊಳ್ಳಬಹುದು,’’ ಎಂದು ಮೋದಿ ಕಿವಿಮಾತು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ