ಆ್ಯಪ್ನಗರ

ಕನಕಪುರ: ಪ್ರಸವ ವೇದನೆ ತಾಳಲಾರದೆ ಗಂಟೆಗಟ್ಟಲೆ ನೀರಿನಲ್ಲಿ ನಿಂತಿದ್ದ ಗರ್ಭಿಣಿ ಆನೆ ಸಾವು!

ಗರ್ಭಿಣಿ ಆನೆಯೊಂದು ಪ್ರಸವದ ಸಂದರ್ಭದಲ್ಲಿ ಸಾವನ್ನಪ್ಪಿದೆ. ಪ್ರಸವ ವೇದನೆಯಿಂದ ನರಳುತ್ತಿದ್ದ 35 ವರ್ಷದ ಆನೆ ಸುಮಾರು ಹೊತ್ತು ನೀರಿನಲ್ಲಿತ್ತು. ಎಷ್ಟು ಹೊತ್ತಾದರೂ ಪ್ರಸವವಾಗದ ಹಿನ್ನೆಲೆಯಲ್ಲಿ ವೇದನೆ ತಾಳಲಾರದೇ ನೀರಿನಿಂದ ಹೊರಬಂದು ಸಾವನ್ನಪ್ಪಿದೆ. ಈ ಘಟನೆ ಕನಕಪುರದಲ್ಲಿ ನಡೆದಿದೆ.

Vijaya Karnataka Web 12 Nov 2020, 1:24 pm
ಕನಕಪುರ: ಕಾವೇರಿ ವನ್ಯಜೀವಿಧಾಮದ ಸಂಗಮ ವಲಯಾರಣ್ಯದ ಭೊಮ್ಮಸಂದ್ರದ ಬೀಟ್‌ನ ಕೀರೆಪಾಟಿಹಳ್ಳದ ಅರಣ್ಯದಲ್ಲಿ ಗರ್ಭಿಣಿ ಆನೆಯೊಂದು ಪ್ರಸವದ ಸಂದರ್ಭದಲ್ಲಿ ಸಾವನ್ನಪ್ಪಿದೆ. ಪ್ರಸವ ವೇದನೆಯಿಂದ ನರಳುತ್ತಿದ್ದ 35 ವರ್ಷದ ಆನೆ ಸುಮಾರು ಹೊತ್ತು ನೀರಿನಲ್ಲಿತ್ತು.
Vijaya Karnataka Web ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.


ಎಷ್ಟು ಹೊತ್ತಾದರೂ ಪ್ರಸವವಾಗದ ಹಿನ್ನೆಲೆಯಲ್ಲಿ ವೇದನೆ ತಾಳಲಾರದೇ ನೀರಿನಿಂದ ಹೊರಬಂದು ಸಾವನ್ನಪ್ಪಿದೆ.ವಿಷಯ ತಿಳಿದ ಅರಣ್ಯಾಧಿಕಾರಿಗಳು ಪಶುವೈದ್ಯರನ್ನು ಕರೆಸಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಗರ್ಭಕೋಶದಲ್ಲಿನ ಸಮಸ್ಯೆಯಿಂದ ಸರಾಗವಾಗಿ ಪ್ರಸವವಾಗದೇ ಆನೆ ಸಾವನ್ನಪ್ಪಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ.

ಹೆಚ್ಚಿನ ಪರೀಕ್ಷೆಗಾಗಿ ಆನೆಯ ದೇಹದ ಕೆಲವು ಭಾಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆನೆಯ ಶವದ ಅಂತ್ಯಸಂಸ್ಕಾರವನ್ನು ಕಾಡಿನಲ್ಲೇ ಮಾಡಲಾಯಿತು. ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌, ವಲಯಾ ರಣ್ಯಾಧಿಕಾರಿ ಅನಿಲ್‌, ಅರಣ್ಯ ರಕ್ಷಕರಾದ ಶಿವಕುಮಾರ್‌ ಸೇರಿದಂತೆ ಅನೇಕರು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ರಾಮನಗರದಿಂದ ಎಲೆಕ್ಷನ್ ಕಣಕ್ಕಿಳಿಯಲು ನಿಖಿಲ್ ಕುಮಾರಸ್ವಾಮಿ‌ ರಂಗ ತಯಾರಿ..!

ಈ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಸಾವನಪ್ಪಿ ಭಾರೀ ಸುದ್ದಿಯಾಗಿತ್ತು. ಆಹಾರ ಅರಸುತ್ತಾ ಬಂದಿದ್ದ ಆನೆ ಪಟಾಕಿ ಇಟ್ಟಿದ್ದ ಅನನಾಸು ತಿಂದಿತ್ತು. ಅನನಾಸಿನಲ್ಲಿದ್ದ ಪಟಾಕಿ ಸ್ಪೋಟಗೊಂಡಿತ್ತು. ನೋವು ತಾಳಲಾರದೆ ಆನೆ ನೀರಿನಲ್ಲಿ ನಿಂತಿತ್ತು. ಆದರೆ ನೋವಿನ ತೀವ್ರತೆಗೆ ಸಾವನಪ್ಪಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ