ಆ್ಯಪ್ನಗರ

ಗುಡಿ ಕಟ್ಟಲು ಪ್ರತಿಷ್ಠೆಯ ಕಿತ್ತಾಟ, ದೇವರಿಗೆ ತಪ್ಪದ ಜಲವಾಸ

ದೇವಾಲಯ ನಿರ್ಮಾಣ ಸಮಿತಿಯಲ್ಲಿ ಯಾರ್ಯಾರಿರಬೇಕೆಂಬ ಪ್ರಶ್ನೆ ಹಲವು ಗ್ರಾಮಗಳ ಮುಖಂಡರ ನಡುವೆ ಪ್ರತಿಷ್ಠೆಯಾಗಿ ಮಾರ್ಪಟ್ಟು ಜೀರ್ಣೋದ್ಧಾರ ನನೆಗುದಿಗೆ ಬಿದ್ದಿದ್ದು ಶುಕ್ರವಾರ ನಡೆದ ಸರಕಾರಿ ಅಧಿಕಾರಿಗಳ ಸಂಧಾನವೂ ವಿಲವಾಯಿತು.

Vijaya Karnataka 30 Nov 2018, 10:00 pm
ಹಾರೋಹಳ್ಳಿ (ಕನಕಪುರ ತಾ.): ದೇವಾಲಯ ನಿರ್ಮಾಣ ಸಮಿತಿಯಲ್ಲಿ ಯಾರ್ಯಾರಿರಬೇಕೆಂಬ ಪ್ರಶ್ನೆ ಹಲವು ಗ್ರಾಮಗಳ ಮುಖಂಡರ ನಡುವೆ ಪ್ರತಿಷ್ಠೆಯಾಗಿ ಮಾರ್ಪಟ್ಟು ಜೀರ್ಣೋದ್ಧಾರ ನನೆಗುದಿಗೆ ಬಿದ್ದಿದ್ದು ಶುಕ್ರವಾರ ನಡೆದ ಸರಕಾರಿ ಅಧಿಕಾರಿಗಳ ಸಂಧಾನವೂ ವಿಲವಾಯಿತು.
Vijaya Karnataka Web prestige among the leaders of the villages restoration delay
ಗುಡಿ ಕಟ್ಟಲು ಪ್ರತಿಷ್ಠೆಯ ಕಿತ್ತಾಟ, ದೇವರಿಗೆ ತಪ್ಪದ ಜಲವಾಸ


ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಈ ಹಗ್ಗ ಜಗ್ಗಾಟದಿಂದಾಗಿ ಆಂಜನೇಯ ವಿಗ್ರಹಕ್ಕೆ ಗ್ರಾಮದಲ್ಲಿ ಜಲವಾಸವೇ ಖಾಯಂ ಆದಂತಾಗಿದ್ದು ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವ ಪೀಕಲಾಟ ಇಕ್ಕಟ್ಟಿಗೆ ಸಿಲುಕಿಸಿದೆ.

ಏನಿದು ಸಮಸ್ಯೆ?: ಮುಜರಾಯಿ ಇಲಾಖೆಗೆ ಸೇರಿದ್ದ ಶಿಥಿಲಗೊಂಡಿದ್ದ ದೇವಾಲಯವನ್ನು ಎರಡು ವರ್ಷಗಳ ಹಿಂದೆ ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಗ್ರಾಮಸ್ಥರು ತೀರ್ಮಾನಿಸಿದ್ದರು. 2016ರ ಆ.24ರಂದು ವರಮಹಾಲಕ್ಷ್ಮಿ ಹಬ್ಬದ ದಿನದಂದು ಬನ್ನಿಕುಪ್ಪೆ ಗ್ರಾಮದ ಆಂಜನೇಯಸ್ವಾಮಿ ದೇವಾಲಯ ನಿರ್ಮಾಣಕ್ಕೆ ನಡೆದ ಭೂಮಿ ಪೂಜೆಯಲ್ಲಿ ಶಿವಗಿರಿ ಕ್ಷೇತ್ರದ ಅನ್ನದಾನ ಸ್ವಾಮೀಜಿ ಭಾಗಿಯಾಗಿದ್ದರು. ಸಮೀಪದ ಗ್ರಾಮಗಳಾದ ಹೆಬ್ಬಿದರ ಮೆಟ್ಟಿಲು, ಕಾಳೇಗೌಡನದೊಡ್ಡಿ, ಭೈರೇಗೌಡನವಲಸೆ, ಹುಲಿಸಿದ್ದೇಗೌಡನದೊಡ್ಡಿಯ ನೂರಾರು ಮಹಿಳೆಯರು, ಗ್ರಾಮಸ್ಥರು ದೇವಾಲಯದ ಜೀರ್ಣೋದ್ಧಾರ ಸಮಿತಿಯಲ್ಲಿ ತಮ್ಮನ್ನು ಹೊರಗಿಟ್ಟು ಶಂಕುಸ್ಥಾಪನೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಪರ-ವಿರೋಧದ ಗದ್ದಲದಲ್ಲೇ ಶಂಕುಸ್ಥಾಪನೆಯಾಗಿತ್ತುಘಿ.

ತಹಸೀಲ್ದಾರ್ ಮತ್ತು ಪೊಲೀಸರು ಮಧ್ಯೆ ಪ್ರವೇಶಿಸಿ ಎರಡೂ ಗುಂಪುಗಳನ್ನು ಸಮಾಧಾನಪಡಿಸಿ ವಾಪಸ್ಸು ಕಳುಹಿಸಿದ್ದರು. ಅಂದಿನಿಂದಲೂ ಸಮಸ್ಯೆ ಹಾಗೇ ಉಳಿದಿದ್ದು ಇಂದೂ ಸಹ ಸೌಹಾರ್ದ ಸಂಧಾನಸಭೆ ಯಶಸ್ವಿಯಾಗಿರಲಿಲ್ಲ.

ಗ್ರಾಮದ ಪರವಾಗಿ ತಾಪಂ ಸದಸ್ಯೆ ಶಾರದಾ ಬಿ.ಎಂ.ರಾಜು ಮತ್ತು ಅನೇಕ ಹಿರಿಯ ಮುಖಂಡರು ಮಾತನಾಡಿ, ಕೆಲವರು ವೈಯಕ್ತಿಕ ವಿಷಯಗಳನ್ನಿಟ್ಟುಕೊಂಡು ಅಶಾಂತಿ ಮಾಡಲು ಹೊರಟಿದ್ದಾರೆ. ಅಧಿಕಾರಿಗಳು ನಮ್ಮ ಗ್ರಾಮದಲ್ಲಿ ದೇವಾಲಯ ನಿರ್ಮಿಸಲು ನಮಗೇ ಅನುಮತಿ ಕೊಡಬೇಕೆಂದು ಮನವಿ ಮಾಡಿದರು. ಉಳಿದ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಗೊಂದಲಕ್ಕೊಳಗಾದ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಅಲ್ಲಿಂದ ಹೊರ ನಡೆದರು.

ಸಭೆಯಲ್ಲಿ ಬನ್ನಿಕುಪ್ಪೆ ಗ್ರಾಮದ ಮುಖಂಡರಾದ ಚನ್ನೇಗೌಡ, ಮಾದಯ್ಯನವರ ಪುಟ್ಟಯ್ಯ, ಚಿಕ್ಕಮರಿಯಪ್ಪ, ಹುಲಿಸಿದ್ದಪ್ಪ, ಸಿದ್ದರುದ್ರಯ್ಯ, ಶಿವಕುಮಾರ್, ಗ್ರಾಪಂ ಸದಸ್ಯ ನಾಗರಾಜು, ನೂರಾರು ಮಹಿಳೆಯರು ಸೇರಿದಂತೆ ಹೆಬ್ಬಿದರ ಮೆಟ್ಟಿಲು ಮುಖಂಡ ಈರೇಗೌಡ, ಚನ್ನೇಗೌಡ, ಮರಿಯಪ್ಪ, ರಾಜಣ್ಣ, ಪುಟ್ಟಸ್ವಾಮಿ, ಮಹದೇವ ಮುಂತಾದ ಎರಡೂ ಗ್ರಾಮಗಳಿಂದ ನೂರಾರು ಮಂದಿ ಸಭೆಯಲ್ಲಿ ಭಾಗಿಯಾಗಿದ್ದರು.

-----

ಮುಜರಾಯಿ ಇಲಾಖೆಗೆ ಸೇರಿದ ನೂತನ ದೇಗುಲದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ಜನರಿಗೆ ಗಿಳಿಪಾಠ ಹೇಳಿದಂತೆ ತಿಳಿ ಹೇಳಿದರೂ ಸತತ ಮೂರು ಗಂಟೆಗಳ ಕಾಲ ಇವರ ಮನವೊಲಿಸಲು ಪ್ರಯತ್ನಿಸಿದರೂ ಸಲವಾಗದ ಕಾರಣ ಮುಂದೆ ನಾವು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುತ್ತೇವೆ. ಗ್ರಾಮದಲ್ಲಿ ಶಾಂತಿಭಂಗವಾಗದಂತೆ ಧಾರ್ಮಿಕ ಸಮಾರಂಭವೊಂದು ಶ್ರದ್ಧಾಭಕ್ತಿಯಿಂದ ನಡೆಯಬೇಕು.

-ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ, ರಾಮನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ