ಪ್ರಜೆಗಳೇ ಪ್ರಭುಗಳು; ಇದು ಪ್ರಜಾತಂತ್ರದ ಆಶಯ
ಪ್ರಜೆಗಳೇ ಪ್ರಭುಗಳು ಎಂಬುದು ಪ್ರಜಾಪ್ರಭುತ್ವದ ನಿಜವಾದ ಆಶಯ ಎಂದು ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ವಿಜಯ್ ರಾಂಪುರ ಹೇಳಿದರು...
Vijaya Karnataka 15 Mar 2019, 5:00 am
ಚನ್ನಪಟ್ಟಣ: ಪ್ರಜೆಗಳೇ ಪ್ರಭುಗಳು ಎಂಬುದು ಪ್ರಜಾಪ್ರಭುತ್ವದ ನಿಜವಾದ ಆಶಯ ಎಂದು ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಕಾರ್ಯದರ್ಶಿ ವಿಜಯ್ ರಾಂಪುರ ಹೇಳಿದರು.
ತಾಲೂಕಿನ ಲಂಬಾಣಿ ತಾಂಡ್ಯ ಗ್ರಾಮದಲ್ಲಿ ಟ್ರಸ್ಟ್ವತಿಯಿಂದ ಏರ್ಪಡಿಸಿದ್ದ ಪ್ರಜೆಗಳೇ ಪ್ರಭುಗಳು ಎಂಬ ಜಾಗೃತಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮತದಾನದ ಮಾಡದಿರುವುದು ಮತದಾರ ಮಾಡಿಕೊಳ್ಳುವ ಆತ್ಮವಂಚನೆ. ಅರ್ಹ ಮತದಾರರೆಲ್ಲರೂ ಮತದಾನವೆಂಬ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಬೇಕು. ಹಣ, ವಸ್ತು, ಹೆಂಡ, ಬಟ್ಟೆ, ಇತ್ಯಾದಿಗಳನ್ನು ಪಡೆದು ಮತ ಮಾರಿಕೊಳ್ಳುವುದು ಸಹ ಭ್ರಷ್ಟಾಚಾರವೇ ಎಂದರು.
ಹಿರಿಯ ಬೀದಿ ನಾಟಕ ನಿರ್ದೇಶಕ ಚೌ.ಪು. ಸ್ವಾಮಿ ಮಾತನಾಡಿ, ಸರ್ವರು ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವದ ಉಳಿವಿಗೆ ಮುಂದಾಗಬೇಕು. ದೇಶ ಅಭಿವೃದ್ದಿ ಪಥದಲ್ಲಿ ಸಾಗಲು ಎಲ್ಲರೂ ತಮ್ಮ ಮತ ಚಲಾಯಿಸುವುದು ಆದ್ಯ ಕರ್ತವ್ಯವಾಗಲಿ ಎಂದರು. ಗ್ರಾಮಸ್ಥರಾದ ಆರ್. ಶರತ್ನಾಯ್ಕ, ಪುಟ್ಟನಾಯ್ಕ, ಬಾಲುನಾಯ್ಕ, ಗೋವಿಂದನಾಯ್ಕ, ಭಾಗ್ಯಬಾಯಿ, ಶಂಕರನಾಯ್ಕ, ನಾಗೇಶನಾಯ್ಕ, ಜಯಬಾಯಿ, ಮಣಿಮಾದ ನಾಯ್ಕ, ಜ್ಯೋತಿ, ರಾಜುನಾಯ್ಕ, ಮುನಿಸ್ವಾಮಿನಾಯ್ಕ, ಅಣ್ಣನಾಯ್ಕ ಇನ್ನೂ ಮುಂತಾದವರು ಹಾಜರಿದ್ದರು. ಇದೇ ವೇಳೆ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.
ತಾಲೂಕಿನ ಲಂಬಾಣಿ ತಾಂಡ್ಯ ಗ್ರಾಮದಲ್ಲಿ ಟ್ರಸ್ಟ್ವತಿಯಿಂದ ಏರ್ಪಡಿಸಿದ್ದ ಪ್ರಜೆಗಳೇ ಪ್ರಭುಗಳು ಎಂಬ ಜಾಗೃತಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮತದಾನದ ಮಾಡದಿರುವುದು ಮತದಾರ ಮಾಡಿಕೊಳ್ಳುವ ಆತ್ಮವಂಚನೆ. ಅರ್ಹ ಮತದಾರರೆಲ್ಲರೂ ಮತದಾನವೆಂಬ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಬೇಕು. ಹಣ, ವಸ್ತು, ಹೆಂಡ, ಬಟ್ಟೆ, ಇತ್ಯಾದಿಗಳನ್ನು ಪಡೆದು ಮತ ಮಾರಿಕೊಳ್ಳುವುದು ಸಹ ಭ್ರಷ್ಟಾಚಾರವೇ ಎಂದರು.
ಹಿರಿಯ ಬೀದಿ ನಾಟಕ ನಿರ್ದೇಶಕ ಚೌ.ಪು. ಸ್ವಾಮಿ ಮಾತನಾಡಿ, ಸರ್ವರು ಸಂವಿಧಾನ ನೀಡಿರುವ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವದ ಉಳಿವಿಗೆ ಮುಂದಾಗಬೇಕು. ದೇಶ ಅಭಿವೃದ್ದಿ ಪಥದಲ್ಲಿ ಸಾಗಲು ಎಲ್ಲರೂ ತಮ್ಮ ಮತ ಚಲಾಯಿಸುವುದು ಆದ್ಯ ಕರ್ತವ್ಯವಾಗಲಿ ಎಂದರು. ಗ್ರಾಮಸ್ಥರಾದ ಆರ್. ಶರತ್ನಾಯ್ಕ, ಪುಟ್ಟನಾಯ್ಕ, ಬಾಲುನಾಯ್ಕ, ಗೋವಿಂದನಾಯ್ಕ, ಭಾಗ್ಯಬಾಯಿ, ಶಂಕರನಾಯ್ಕ, ನಾಗೇಶನಾಯ್ಕ, ಜಯಬಾಯಿ, ಮಣಿಮಾದ ನಾಯ್ಕ, ಜ್ಯೋತಿ, ರಾಜುನಾಯ್ಕ, ಮುನಿಸ್ವಾಮಿನಾಯ್ಕ, ಅಣ್ಣನಾಯ್ಕ ಇನ್ನೂ ಮುಂತಾದವರು ಹಾಜರಿದ್ದರು. ಇದೇ ವೇಳೆ ಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು.