ಆ್ಯಪ್ನಗರ

Karnataka Farmers Protest: ರಾಮನಗರದಲ್ಲಿ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ: ಅತ್ತ ಬಸ್‌ ಸಂಚಾರ ಆರಂಭ, ಇತ್ತ ಪ್ರತಿಭಟನೆ!

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಶಬ್ಧವಾಗಿದೆ. ವಾಹನ ಸಂಚಾರ ಸಂಪೂರ್ಣ ವಿರಳವಾಗಿದೆ. ಇನ್ನು ಪ್ರತಿ ದಿನ ಈ ಹೆದ್ಧಾರಿಯಲ್ಲಿ‌ ಲಕ್ಷಾಂತರ ವಾಹನ ಸಂಚಾರ ವಿತ್ತು. ಬಂದ್ ಹಿನ್ನಲೆ ವಾಹನ ಸಂಚಾರ ಸಂಪೂರ್ಣ ಕಡಿಮೆಗೊಂಡಿದೆ. ಇನ್ನು ಜಿಲ್ಲೆಯ ರೈತ ಮುಖಂಡರು, ಕನ್ನಡ ಪರ ಸಂಘಟನೆಗಳು 9 ಗಂಟೆಯ ಬಳಿಕ ಬೀದಿಗಿಳಿದು ಪ್ರತಿಭಟನೆ ಮಾಡಲಿದೆ ಎಂದು ತಿಳಿಸಿದೆ. ಮಾವನ‌ ಸರಪಳಿ ಮೂಲಕ‌ ಕಾಯ್ದೆಯನ್ನು ರೈತ ಸಂಘಟನೆ ವಿರೋಧಿಸಲಿದೆ.

Vijaya Karnataka Web 28 Sep 2020, 9:44 am
ರಾಮನಗರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಹಿನ್ನೆಲೆ ರೈತ ಸಂಘಟನೆಗಳು ಇಂದು(ಸೋಮವಾರ) ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಇನ್ನು ರೈತ ಸಂಘಟನೆಗಳು ನೀಡಿದ ಬಂದ್‌ಗೆ ರೇಷ್ಮೆನಗರಿ ಎಂದೇ ಖ್ಯಾತಿ ಪಡೆದಿರುವ ರಾಮನಗರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಗ್ರಾಮೀಣ ಸಾರಿಗೆ ಸಂಚಾರ ಆರಂಭವಾಗಿದೆ.
Vijaya Karnataka Web 8aiArDyM (1)


ಆದರೆ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಶಬ್ಧವಾಗಿದೆ. ವಾಹನ ಸಂಚಾರ ಸಂಪೂರ್ಣ ವಿರಳವಾಗಿದೆ. ಇನ್ನು ಪ್ರತಿ ದಿನ ಈ ಹೆದ್ಧಾರಿಯಲ್ಲಿ‌ ಲಕ್ಷಾಂತರ ವಾಹನ ಸಂಚಾರ ವಿತ್ತು. ಬಂದ್ ಹಿನ್ನಲೆ ವಾಹನ ಸಂಚಾರ ಸಂಪೂರ್ಣ ಕಡಿಮೆಗೊಂಡಿದೆ. ಇನ್ನು ಜಿಲ್ಲೆಯ ರೈತ ಮುಖಂಡರು, ಕನ್ನಡ ಪರ ಸಂಘಟನೆಗಳು 9 ಗಂಟೆಯ ಬಳಿಕ ಬೀದಿಗಿಳಿದು ಪ್ರತಿಭಟನೆ ಮಾಡಲಿದೆ ಎಂದು ತಿಳಿಸಿದೆ. ಮಾವನ‌ ಸರಪಳಿ ಮೂಲಕ‌ ಕಾಯ್ದೆಯನ್ನು ರೈತ ಸಂಘಟನೆ ವಿರೋಧಿಸಲಿದೆ.

ಐಜೂರು ವೃತ್ತದಲ್ಲಿ ಪ್ರತಿಭಟನೆ!
ಇನ್ನು ಕರ್ನಾಟಕ ಬಂದ್‌ಗೆ ಕರೆ ನೀಡಿದ ಹಿನ್ನೆಲೆ ರಾಮನಗರದ ಐಜೂರು ವೃತ್ತದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದಿಂದ ಹೋರಾಟ ಆರಂಭವಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಹೆದ್ದಾರಿ ಮೇಲೆ ಕುಳಿತು ರಸ್ತೆ ತಡೆಯುತ್ತಿದ್ದಾರೆ. ಇನ್ನು ಈ ವೇಳೆ
ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿಂದು ಹೆಚ್ಚಿದ ಬಂದ್‌ ಕಾವು: ಕೇಂದ್ರ, ರಾಜ್ಯದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ