ಆ್ಯಪ್ನಗರ

ಲೇಔಟ್‌ ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ

ಹಾರೋಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗುಂಡೂರಾವ್‌ ಲೇಔಟ್‌ನಲ್ಲಿ ಮಾಡಲಾಗಿದ್ದ ಸರಕಾರಿ ಭೂಮಿ ಒತ್ತುವರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.

Vijaya Karnataka 11 Jul 2019, 5:00 am
ವಿಕ ವರದಿ ಫಲಶ್ರುತಿ| ಜೆಸಿಬಿ ಮೂಲಕ ರಾಜಾ ಕಾಲುವೆ ಒತ್ತುವರಿ ತೆರವು
Vijaya Karnataka Web raja kaluve encroachment revenue department cleared of layout encroachment
ಲೇಔಟ್‌ ಒತ್ತುವರಿ ತೆರವುಗೊಳಿಸಿದ ಕಂದಾಯ ಇಲಾಖೆ


ಹಾರೋಹಳ್ಳಿ (ಕನಕಪುರ ತಾ.): ಹಾರೋಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗುಂಡೂರಾವ್‌ ಲೇಔಟ್‌ನಲ್ಲಿ ಮಾಡಲಾಗಿದ್ದ ಸರಕಾರಿ ಭೂಮಿ ಒತ್ತುವರಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.

ಲೇಔಟ್‌ನಲ್ಲಿ ಸರಕಾರಿ ಜಾಗ ಒತ್ತುವರಿಯಾಗಿರುವ ಬಗ್ಗೆ ವಿಜಯ ಕರ್ನಾಟಕ ಪತ್ರಿಕೆ 'ಲೇಔಟ್‌ ಮಾಲೀಕರಿಂದ ಸರಕಾರಿ ಭೂಮಿ ಒತ್ತುವರಿ' ಎಂಬ ಶೀರ್ಷಿಕೆಯಡಿ ಸವಿಸ್ತಾರವಾದ ಸುದ್ದಿಯನ್ನು ಪ್ರಕಟಿಸಿತ್ತು. ಪತ್ರಿಕೆಯ ವರದಿಯಿಂದ ಚುರುಕಾದ ತಾಲೂಕು ಆಡಳಿತ, ಮಧ್ಯಾಹ್ನವೇ ಕಾರಾರ‍ಯಚರಣೆಗೆ ತೊಡಗಿ ಮಾರಸಂದ್ರ ಗ್ರಾಮದಿಂದ ಹಾರೋಹಳ್ಳಿ ಚಿಕ್ಕಕೆರೆಗೆ ಹರಿದು ಬರುತ್ತಿದ್ದ ದೊಡ್ಡಕಾಲುವೆಯ ಒತ್ತುವರಿಯನ್ನು ಜೆಸಿಬಿ ಯಂತ್ರಗಳ ಮೂಲಕ ತೆರವು ಮಾಡಿತು.

ರಾಜಾ ಕಾಲುವೆಯಲ್ಲಿ ಚರಂಡಿ ನಿರ್ಮಾಣ:

ಗುಂಡುರಾವ್‌ ಲೇಔಟ್‌ ಮಾಲೀಕರು, ರಾಜಾಕಾಲುವೆಯನ್ನು ಒತ್ತುವರಿ ಮಾಡಿಕೊಂಡು, ಅದರ ಮೇಲೆಯೇ ಲೇಔಟ್‌ ಚರಂಡಿಯನ್ನು ನಿರ್ಮಿಸಿದ್ದರು. ನಗರ ಪ್ರಾಧಿಕಾರ, ಬಿ.ಎಂ.ಆರ್‌.ಡಿ.ಸಿ. ಇಲಾಖೆಯ ಅನುಮತಿಯಿಲ್ಲದೆ 1991 ರಲ್ಲಿ ಆಗಿದ್ದ ಕನ್ವರ್ಷನ್‌ (ಭೂ ಪರಿವರ್ತನೆ) ಅನ್ನು ದುರ್ಬಳಕೆ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ನಿಯಮಗಳನ್ನೂ ಕೂಡ ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿದ್ದ ಬಗ್ಗೆ ಪತ್ರಿಕೆ ವರದಿ ಮಾಡಿತ್ತು.

ತಹಸೀಲ್ದಾರ್‌ ಪರಿಶೀಲನೆ:

ಲೇಔಟ್‌ ನಿರ್ಮಾಣಗೊಳ್ಳುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ಆನಂದಯ್ಯ, ಲೇಔಟ್‌ನಲ್ಲಿ ಒತ್ತುವರಿ ಮಾಡಿರುವ ಸರಕಾರಿ ಜಾಗವನ್ನು ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಮಾಲೀಕರು ಅನಗತ್ಯವಾಗಿ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯಿಂದಲೇ ಒತ್ತುವರಿ ತೆರವು ಮಾಡಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದರು. ತಹಸೀಲ್ದಾರ್‌ ಆದೇಶದಂತೆ ತೆರವು ಕಾರಾರ‍ಯಚರಣೆ ನಡೆದಿದೆ.

ನಾಡಕಚೇರಿಯ ಉಪತಹಶೀಲ್ದಾರ್‌ ದೊಡ್ಡಸ್ವಾಮಿ, ರೆವಿನ್ಯೂ ಇನ್ಸ್‌ಪೆಕ್ಟರ್‌ ಸಿ.ಪುಟ್ಟರಾಜು, ವಿ.ಎ.ಗಳಾದ ಚಂದ್ರು, ಪುಟ್ಟಸ್ವಾಮಿ, ಮತ್ತವರ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ