ಆ್ಯಪ್ನಗರ

ಎರಡೇ ದಿನದಲ್ಲಿ ಮುಗೀತು 5 ಲಕ್ಷದ ನರೇಗಾ ಕಾಮಗಾರಿ! ಒಂದೇ ಪ್ರಾಜೆಕ್ಟ್‌ಗೆ ಎರಡು ಬಿಲ್‌!

​ಸ್ವಚ್ಛತೆಗೆ ಸಂಬಂಧಪಟ್ಟ ಹಾಗೆ ಕನಿಷ್ಠ ಐದು ಲಕ್ಷ ರೂ. ಅನುದಾನದ ಕಾಮಗಾರಿ ಮುಗಿಸಲು 5 ರಿಂದ 10 ದಿನಗಳ ಅವಶ್ಯಕತೆ ಇದೆ. ಆದರೆ ಇಲ್ಲಿ ಒಂದೆರಡು ದಿನದಲ್ಲಿ ಜೆಸಿಬಿ ಓಡಾಡಿಸಿ ಕಾಮಗಾರಿ ಮುಗಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

Vijaya Karnataka Web 3 Dec 2019, 5:01 pm
ಮಾಗಡಿ (ರಾಮನಗರ): ನರೇಗಾ ಯೋಜನೆಯ ಕಾಮಗಾರಿ ಮಾಡಬೇಕಿರುವ ನೀಲಿ ನಕಾಶೆ ಇರುವುದೊಂದು, ಆದರೆ ಕಾಮಗಾರಿ ಆಗುತ್ತಿರುವುದೇ ಮತ್ತೊಂದು! ಇಂಥಾದ್ದೊಂದು ಕರ್ಮಕಾಂಡ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ದೊಡ್ಡ ಸೋಮನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಸ್ಥರು ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
Vijaya Karnataka Web ಎರಡೇ ದಿನದಲ್ಲಿ ಮುಗೀತು 5 ಲಕ್ಷದ ನರೇಗಾ ಕಾಮಗಾರಿ! ಒಂದೇ ಪ್ರಾಜೆಕ್ಟ್‌ಗೆ ಎರಡು ಬಿಲ್‌!


ಮಾಗಡಿಯ ತಿಪ್ಪಸಂದ್ರ ಹೋಬಳಿಯ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಕಾಳಾರಿ ಕಾವಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ದೊಡ್ಡಸೋಮನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಕೂಲಿ ಕೆಲಸಗಾರರೇ ಇಲ್ಲದೆ ಒಂದೇ ಒಂದು ಜೆಸಿಬಿ ಬಳಸಿ ಕೆಲಸ ಮಾಡುತ್ತಿದ್ದಾರೆ. ಕೆಲಸವೂ ನಿರ್ದಿಷ್ಠವಾಗಿ ನಡೆಯುತ್ತಿಲ್ಲ ಎಂದು ಗ್ರಾಮದ ಜನತೆ ದೂರಿದ್ದಾರೆ.

ಗ್ರಾಮಸ್ಥರ ಆರೋಪವೇನು..?

ದೊಡ್ಡ ಸೋಮನಹಳ್ಳಿಯ ಕೆರೆ ಅಭಿವೃದ್ಧಿಗೆ ನರೇಗಾ ಯೋಜನೆಯಡಿಯಲ್ಲಿ 5 ಲಕ್ಷ ರೂ. ಬಿಡುಗಡೆ ಮಾಡಿಸಿದ್ದಾರೆ. ಕೆರೆಯ ಏರಿ ಸುತ್ತಮುತ್ತ ಬೆಳೆದಿರುವ ಗಿಡಗಂಟೆಗಳನ್ನು ಕೀಳುವುದು, ಕೆರೆ ಏರಿ ಮೇಲೆ ಮಣ್ಣನ್ನು ಹಾಕಿ ಕೆರೆಯನ್ನು ಭದ್ರ ಮಾಡುವುದು ಮತ್ತು ಸ್ವಚ್ಛತೆ ಕಾಪಾಡುವ ದೃಷ್ಟಿಯಲ್ಲಿ ಹಣ ಬಿಡುಗಡೆಯಾಗಿದೆ. ಆದ್ರೆ, ನೀಲ ನಕಾಶೆ ಮಾದರಿಯಲ್ಲಿ ಕೆಲಸವೇ ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದೇ ಒಂದು ಜೆಸಿಬಿ ಕರೆಸಿ ಮೇಲ್ನೋಟಕ್ಕೆ ಗಿಡಗಂಟೆಗಳನ್ನು ಕಿತ್ತು ಕೆಲಸ ಆಯಿತೆಂದು ಕೈತೊಳೆದುಕೊಳ್ಳುವ ಪ್ರಯತ್ನಕ್ಕೆ ಪಂಚಾಯಿತಿ ಮುಂದಾಗಿದೆ. ಇಂತಹ ಕೃತ್ಯಕ್ಕೆ ಅವಕಾಶ ಕೊಡಬಾರದು ಎಂದು ಮೇಲಧಿಕಾರಿಗಳಿಗೆ ಮನವಿ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.

'ದಾನಿ'ಗಳಿಂದಲೇ ಬೆಳೆದು 'ದಿಗ್ಗಜ'ರನ್ನು ನೀಡಿದ ಶಾಲೆ! ಶತಮಾನದ ಸಂಭ್ರಮದಲ್ಲಿದೆ ಈ ಸರ್ಕಾರಿ ಸ್ಕೂಲ್

2 ದಿನದಲ್ಲಿ 5 ಲಕ್ಷ ರೂ. ಕಾಮಗಾರಿ..!

ಸ್ವಚ್ಛತೆಗೆ ಸಂಬಂಧಪಟ್ಟ ಹಾಗೆ ಕನಿಷ್ಠ ಐದು ಲಕ್ಷ ರೂ. ಅನುದಾನದ ಕಾಮಗಾರಿ ಮುಗಿಸಲು 5 ರಿಂದ 10 ದಿನಗಳ ಅವಶ್ಯಕತೆ ಇದೆ. ಆದರೆ ಇಲ್ಲಿ ಒಂದೆರಡು ದಿನದಲ್ಲಿ ಜೆಸಿಬಿ ಓಡಾಡಿಸಿ ಕಾಮಗಾರಿ ಮುಗಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಒಂದೇ ಕಾಮಗಾರಿಗೆ 2 ಬಿಲ್‌..!

ಇತ್ತ ಇದೇ ಊರಿನಲ್ಲಿ ಕೊರೆದಿರುವ ಬೋರ್‌ವೆಲ್‌ಗೆ ಪಂಪ್‌ ಮೋಟರ್‌, ಕೇಬಲ್‌ಗಳನ್ನು ಈ ಹಿಂದೆ ಅಳವಡಿಸಲಾಗಿತ್ತು. ಈ ಕೆಲಸವನ್ನು ತಾಲೂಕು ಪಂಚಾಯಿತಿ ನಿರ್ವಹಿಸಿತ್ತು. ಆದರೆ ಇದೇ ಕಾಮಗಾರಿಗೆ ಹಣಕಾಸು ಯೋಜನೆಯಡಿ ಮತ್ತೆ ಹಣ ಹಾಕಿ ಬಿಲ್‌ ಮಾಡಿಕೊಂಡಿದ್ದಾರೆ. ಅಂದಾಜು 1.25 ಲಕ್ಷ ರೂ. ಕೆಲಸವನ್ನೇ ಮಾಡದೆ ಬಿಲ್‌ ಆಗಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರಲು ಗ್ರಾಮಸ್ಥರು ಮುಂದಾಗಿದ್ದಾರೆ.

'ಚಿರತೆ ಕಣ್ಣಿಗೆ ಪಂಚ್‌ಮಾಡಿ ತಪ್ಪಿಸಿಕೊಳ್ಳಿ': ಕಾಡಂಚಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಜಾಗೃತಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ