ಆ್ಯಪ್ನಗರ

ರಾಮನಗರ ರೈತರ ಜತೆ ಪ್ರಧಾನಿ ಮೋದಿ ವೀಡಿಯೊ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರು ರಾಮನಗರ ಜಿಲ್ಲೆಯ ಆಯ್ದ ಫಲಾನುಭವಿ ರೈತರ ಜತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

Vijaya Karnataka Web 20 Jun 2018, 8:13 pm
ರಾಮನಗರ: ಪ್ರಧಾನಿ ನರೇಂದ್ರ ಮೋದಿ ಅವರು ರಾಮನಗರ ಜಿಲ್ಲೆಯ ಆಯ್ದ ಫಲಾನುಭವಿ ರೈತರ ಜತೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಮತ್ತು ಮಣ್ಣು ಆರೋಗ್ಯ ಅಭಿಯಾನದ ವಿಚಾರವಾಗಿ ಮೋದಿ ರೈತರ ಜತೆ ಸಂವಾದ ನಡೆಸಿದರು. ಮಾಗಡಿ ತಾಲೂಕಿನ ಚಂದುರಾಯನ ಪಾಳ್ಯದಲ್ಲಿರುವ ಕೃಷಿ ಕ್ಷೇತ್ರದಲ್ಲಿ ವಿಡಿಯೋ ಕಾನ್ಪರೆನ್ಸ್ ನಡೆಯಿತು.

ರೈತರ ಜತೆ ಕನ್ನಡದಲ್ಲಿ ಮಾತನಾಡಿದ ಪ್ರಧಾನಿ 'ನಮಸ್ಕಾರ, ಹೇಗಿದ್ದೀರಿ, ನಿಮ್ಮ ಊರಿನಲ್ಲಿ ಎಲ್ಲರೂ ಚೆನ್ನಾಗಿದ್ದಾರಾ, ಕೃಷಿ ಹೇಗೆ ಮಾಡಿದ್ದೀರಿ,' ಎಂದು ರೈತರನ್ನು ಪ್ರಶ್ನಿಸಿದರು.

ಮಣ್ಣಿನ ಫಲವತ್ತತೆ, ಮಣ್ಣು ಪರೀಕ್ಷೆ ಹಾಗೂ ಕೃಷಿ ನಡೆಸುವ ರೀತಿ, ಯಾವ ಯಾವ ಬಗೆಯ ಕೃಷಿ ಮಾಡುತ್ತೇವೆ ಎಂದು ರೈತರು ಪ್ರಧಾನಿಗೆ ವಿವರಿಸಿದರು.

ನೂರಕ್ಕೂ ಹೆಚ್ಚು ರೈತರು ವೀಡಿಯೊ ಕಾನ್ಫರೆನ್ಸ್ ನಲ್ಲಿ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ